ಬೆಂಗಳೂರು: ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಎಚ್.ಎಸ್. ವೇಣುಗೋಪಾಲ್ (78) ಅವರು ಸೋಮವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ ಸಂಭ್ರಮವನ್ನು ಆಕಾಶವಾಣಿಯಲ್ಲಿ ನೇರಪ್ರಸಾರ ಮಾಡುವ ಹಾಗೂ ವೀಕ್ಷಕ ವಿವರಣೆ ನೀಡುವ ಕೆಲಸವನ್ನು ವೇಣುಗೋಪಾಲ್ ನಿರ್ವಹಿಸಿದ್ದರು. ಹಲವು ಕೃತಿಗಳನ್ನು ರಚಿಸಿದ್ದರು.