ದೂರಿನ ವಿವರ:‘ಜಾತಿ, ಧರ್ಮವೆಂಬ ಬೇಧವಿಲ್ಲದೇ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ 38 ವರ್ಷಗಳಿಂದ ವಿಜಯನಗರದ ಬೀದಿ ಬದಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಇದೇ 20ರಂದು ಮಧ್ಯಾಹ್ನ ಅಂಗಡಿ ಬಳಿ ಬಂದಿದ್ದ ಎಂ.ಎಲ್.ಶಿವಕುಮಾರ್, ಹೇಮೇಶ್ ಬಾಬು ಮತ್ತು ಸಹಚರರು, ಬಲವಂತ ಹಾಗೂ ದೌರ್ಜನ್ಯದಿಂದ ಅಂಗಡಿಗಳ ಎದುರು ಭಗವಾಧ್ವಜ ಕಟ್ಟಿದ್ದರು’ ಎಂದು ದೂರಿನಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣಗೌಡ, ಕೃಷ್ಣರಾಜ, ರಿಯಾಜ್, ಬಿ.ಆರ್.ನಂಜುಂಡಯ್ಯ, ಮಂಜಣ್ಣ ಹಾಗೂ ಇತರರು ಆರೋಪಿಸಿದ್ದಾರೆ.