‘ಈ ಅಂಡರ್ಪಾಸ್ನಲ್ಲಿ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಕಸದ ದುರ್ವಾಸನೆಯಿಂದಾಗಿ ಜನ ಮೂಗಿ ಮುಚ್ಚಿ ಸಾಗುತ್ತಿದ್ದರು. ಇಲ್ಲಿನ ಕಸ ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದೆವು. ಆದರೂ, ಕ್ರಮ ಜರುಗಿಸಲಿಲ್ಲ. ಹಾಗಾಗಿ, ಗ್ರಾಮಸ್ಥರೇ ತಂಡ ಕಟ್ಟಿಕೊಂಡು ಕಸ ತೆರವು ಮಾಡಲು ಮುಂದಾದೆವು’ ಎಂದು ತಂಡದ ನೇತೃತ್ವ ವಹಿಸಿದ್ದ ಚಿಕ್ಕಬಿದರಕಲ್ಲು ಗ್ರಾಮದ ಜೆ.ಪಿ.ನಾರಾಯಣಪ್ಪ ತಿಳಿಸಿದರು.