<p><strong>ಬೆಂಗಳೂರು</strong>: ಡಿಜಿಟಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ವರ್ಚುಸಾ ಕಾರ್ಪೊರೇಷನ್, ಸಿಎಸ್ಆರ್ ಅಡಿ ಶಿವನಹಳ್ಳಿಯ ರಾಮಕೃಷ್ಣ ಮಿಷನ್ನ ಶಾರದಾ ದೇವಿ ವಿದ್ಯಾಕೇಂದ್ರದ ಮಕ್ಕಳ ಅನುಕೂಲಕ್ಕಾಗಿ ಎರಡು ಎಲೆಕ್ಟ್ರಿಕ್ ಬಸ್ಗಳನ್ನು ಕೊಡುಗೆಯಾಗಿ ನೀಡಿದೆ.</p>.<p>ಶಿಕ್ಷಕರಿಗಾಗಿ 16 ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದ್ದು, ಸಭಾಂಗಣ, ನಾಲ್ಕು ಪ್ಯಾಂಟ್ರಿ ಪ್ರದೇಶ ಮತ್ತು ಶೌಚಾಲಯ ಒಳಗೊಂಡಿದೆ. 34 ಶಿಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. </p>.<p>ವರ್ಚುಸಾ ಕಾರ್ಪೊರೇಷನ್ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ ಮಾತನಾಡಿ, ‘ವರ್ಚುಸಾ ಫೌಂಡೇಷನ್ ಮೂಲಕ ಹಲವು ಜನಪಯೋಗಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಶಿಕ್ಷಣ ಮತ್ತು ಸುಸ್ಥಿರ ಜೀವನವನ್ನು ಉನ್ನತೀಕರಿಸಿ, ಸೇವಾ ಮನೋಭಾವ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ವರ್ಚುಸಾ ಕಾರ್ಪೊರೇಷನ್ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನ ಸ್ವಾಮಿ ಆತ್ಮವಿದಾನಂದಜಿ ಮಹಾರಾಜ್, ರಾಮಕೃಷ್ಣ ಮಿಷನ್ನ ಟ್ರಸ್ಟಿ ಸ್ವಾಮಿ ಮುಕ್ತಿದಾನಂದಜಿ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಡಿಜಿಟಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ವರ್ಚುಸಾ ಕಾರ್ಪೊರೇಷನ್, ಸಿಎಸ್ಆರ್ ಅಡಿ ಶಿವನಹಳ್ಳಿಯ ರಾಮಕೃಷ್ಣ ಮಿಷನ್ನ ಶಾರದಾ ದೇವಿ ವಿದ್ಯಾಕೇಂದ್ರದ ಮಕ್ಕಳ ಅನುಕೂಲಕ್ಕಾಗಿ ಎರಡು ಎಲೆಕ್ಟ್ರಿಕ್ ಬಸ್ಗಳನ್ನು ಕೊಡುಗೆಯಾಗಿ ನೀಡಿದೆ.</p>.<p>ಶಿಕ್ಷಕರಿಗಾಗಿ 16 ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದ್ದು, ಸಭಾಂಗಣ, ನಾಲ್ಕು ಪ್ಯಾಂಟ್ರಿ ಪ್ರದೇಶ ಮತ್ತು ಶೌಚಾಲಯ ಒಳಗೊಂಡಿದೆ. 34 ಶಿಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. </p>.<p>ವರ್ಚುಸಾ ಕಾರ್ಪೊರೇಷನ್ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ ಮಾತನಾಡಿ, ‘ವರ್ಚುಸಾ ಫೌಂಡೇಷನ್ ಮೂಲಕ ಹಲವು ಜನಪಯೋಗಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಶಿಕ್ಷಣ ಮತ್ತು ಸುಸ್ಥಿರ ಜೀವನವನ್ನು ಉನ್ನತೀಕರಿಸಿ, ಸೇವಾ ಮನೋಭಾವ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ವರ್ಚುಸಾ ಕಾರ್ಪೊರೇಷನ್ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನ ಸ್ವಾಮಿ ಆತ್ಮವಿದಾನಂದಜಿ ಮಹಾರಾಜ್, ರಾಮಕೃಷ್ಣ ಮಿಷನ್ನ ಟ್ರಸ್ಟಿ ಸ್ವಾಮಿ ಮುಕ್ತಿದಾನಂದಜಿ ಮೊದಲಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>