<p><strong>ಬೆಂಗಳೂರು:</strong> ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್ಆರ್ಪಿ) ಸಾಲದ ನೆರವು ನೀಡಲು ಒಪ್ಪಂದ ಮಾಡಿಕೊಂಡಿರುವ ಜರ್ಮನಿಯ ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಇಇಬಿ) ಅಧಿಕಾರಿಗಳ ತಂಡ ಬಿಎಸ್ಆರ್ಪಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.</p>.<p>ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚೆ ನಡೆಸಿತು.</p>.<p>‘ಬಿಎಸ್ಆರ್ಪಿ 148 ಕಿ.ಮೀ. ಅನುಮೋದಿತ ಜಾಲವನ್ನು ಹೊಂದಿದೆ. ದೇಶದ ಇತರ ಎಲ್ಲ ಉಪನಗರ ರೈಲು ಯೋಜನೆಗಳಿಗೆ ಮಾದರಿಯಾಗಲಿದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.</p>.<p>‘ಬಿಎಸ್ಆರ್ಪಿ ನಗರ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ. ಅದು ನಗರದ ಹೊರವಲಯದ ಅಭಿವೃದ್ಧಿಗೂ ದಿಕ್ಸೂಚಿಯಾಗಲಿದೆ’ ಎಂದು ನಿಯೋಗಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ತಿಳಿಸಿದರು.</p>.<p>ಇಇಬಿ ತಂಡದ ಅಧಿಕಾರಿ ಎಂಜಿಲಿಕಿ ಕೊಪ್ಸಚೆಲ್ಲಿ ಮಾತನಾಡಿ, ‘ಇಇಬಿ ಭಾರತದಲ್ಲಿ ನಗರ ಸಾರಿಗೆ ಯೋಜನೆಗೆ ನೆರವು ನೀಡುತ್ತಿರುವ ಐಕಾನಿಕ್ ಯೋಜನೆ ಬಿಎಸ್ಆರ್ಪಿ ಆಗಿದೆ. ಇಲ್ಲಿ ಕೈಗೊಂಡಿರುವ ಜನಸಂಪರ್ಕ ಉಪಕ್ರಮಗಳು ಮತ್ತು ಪಾಲುದಾರರನ್ನು ತೊಡಗಿಸಿಕೊಂಡಿರುವ ಕ್ರಮಗಳು ಉತ್ತಮವಾಗಿವೆ’ ಎಂದು ಶ್ಲಾಘಿಸಿದರು.</p>.<p>ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ನ ಹವಾಮಾನ ಹಣಕಾಸು ಮತ್ತು ಸಾರಿಗೆ ವಿಭಾಗದ ಹಿರಿಯ ತಾಂತ್ರಿಕ ತಜ್ಞ ಸೆಬಾಸ್ಟಿಯನ್ ಎಬರ್ಟ್ ಮಾತನಾಡಿ, ‘ಸುಸ್ಥಿರ ನಗರ ಸಾರಿಗೆಗೆ ಬಿಎಸ್ಆರ್ಪಿ ಮಾದರಿಯಾಗಿದೆ. ಲಿಂಗಸೂಕ್ಷ್ಮ ಮತ್ತು ಬಹುಮಾದರಿಯ ಏಕೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.</p>.<p>ಕೇಂದ್ರೀಯ ವಿದ್ಯಾಲಯ, ಮತ್ತಿಕೆರೆ, ಜಯರಾಮ ಸ್ಲಂ ಕಾಲೊನಿ, ಬೆನ್ನಿಗಾನಹಳ್ಳಿ ನಿಲ್ದಾಣ ಜಾಗಕ್ಕೆ ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ ಮತ್ತು ಇಇಬಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿಡಾರ್–2ರ ಎತ್ತರಿಸಿದ ಮಾರ್ಗದ ಭಾಗವಾಗಿರುವ ಹೆಬ್ಬಾಳದಲ್ಲಿ ಸಸಿ ನೆಟ್ಟರು. </p>.<p>ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾ, ಕೆ–ರೈಡ್ ಪ್ರಾಜೆಕ್ಟ್ ಮತ್ತು ಪ್ಲ್ಯಾನಿಂಗ್ ನಿರ್ದೇಶಕ ಆರ್.ಕೆ. ಸಿಂಗ್, ಇಇಬಿ ಸಾರಿಗೆ ಎಂಜಿನಿಯರ್ ಜೊಲ್ಟಾನ್ ಡೊನಾಥ್, ಪ್ಯಾಟ್ರಿಸಿಯಾ ಇಮ್ಲರ್, ಕೆಎಫ್ಡಬ್ಲ್ಯು ಬ್ಯಾಂಕ್ನ ಸಾರಿಗೆ ವಿಭಾಗದ ಸ್ಥಳೀಯ ವಲಯ ತಜ್ಞ ಅನುದೀಪ್ ಕೊನಿಕಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್ಆರ್ಪಿ) ಸಾಲದ ನೆರವು ನೀಡಲು ಒಪ್ಪಂದ ಮಾಡಿಕೊಂಡಿರುವ ಜರ್ಮನಿಯ ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಇಇಬಿ) ಅಧಿಕಾರಿಗಳ ತಂಡ ಬಿಎಸ್ಆರ್ಪಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.</p>.<p>ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚೆ ನಡೆಸಿತು.</p>.<p>‘ಬಿಎಸ್ಆರ್ಪಿ 148 ಕಿ.ಮೀ. ಅನುಮೋದಿತ ಜಾಲವನ್ನು ಹೊಂದಿದೆ. ದೇಶದ ಇತರ ಎಲ್ಲ ಉಪನಗರ ರೈಲು ಯೋಜನೆಗಳಿಗೆ ಮಾದರಿಯಾಗಲಿದೆ’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.</p>.<p>‘ಬಿಎಸ್ಆರ್ಪಿ ನಗರ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ. ಅದು ನಗರದ ಹೊರವಲಯದ ಅಭಿವೃದ್ಧಿಗೂ ದಿಕ್ಸೂಚಿಯಾಗಲಿದೆ’ ಎಂದು ನಿಯೋಗಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ತಿಳಿಸಿದರು.</p>.<p>ಇಇಬಿ ತಂಡದ ಅಧಿಕಾರಿ ಎಂಜಿಲಿಕಿ ಕೊಪ್ಸಚೆಲ್ಲಿ ಮಾತನಾಡಿ, ‘ಇಇಬಿ ಭಾರತದಲ್ಲಿ ನಗರ ಸಾರಿಗೆ ಯೋಜನೆಗೆ ನೆರವು ನೀಡುತ್ತಿರುವ ಐಕಾನಿಕ್ ಯೋಜನೆ ಬಿಎಸ್ಆರ್ಪಿ ಆಗಿದೆ. ಇಲ್ಲಿ ಕೈಗೊಂಡಿರುವ ಜನಸಂಪರ್ಕ ಉಪಕ್ರಮಗಳು ಮತ್ತು ಪಾಲುದಾರರನ್ನು ತೊಡಗಿಸಿಕೊಂಡಿರುವ ಕ್ರಮಗಳು ಉತ್ತಮವಾಗಿವೆ’ ಎಂದು ಶ್ಲಾಘಿಸಿದರು.</p>.<p>ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ನ ಹವಾಮಾನ ಹಣಕಾಸು ಮತ್ತು ಸಾರಿಗೆ ವಿಭಾಗದ ಹಿರಿಯ ತಾಂತ್ರಿಕ ತಜ್ಞ ಸೆಬಾಸ್ಟಿಯನ್ ಎಬರ್ಟ್ ಮಾತನಾಡಿ, ‘ಸುಸ್ಥಿರ ನಗರ ಸಾರಿಗೆಗೆ ಬಿಎಸ್ಆರ್ಪಿ ಮಾದರಿಯಾಗಿದೆ. ಲಿಂಗಸೂಕ್ಷ್ಮ ಮತ್ತು ಬಹುಮಾದರಿಯ ಏಕೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.</p>.<p>ಕೇಂದ್ರೀಯ ವಿದ್ಯಾಲಯ, ಮತ್ತಿಕೆರೆ, ಜಯರಾಮ ಸ್ಲಂ ಕಾಲೊನಿ, ಬೆನ್ನಿಗಾನಹಳ್ಳಿ ನಿಲ್ದಾಣ ಜಾಗಕ್ಕೆ ಕೆಎಫ್ಡಬ್ಲ್ಯು ಅಭಿವೃದ್ಧಿ ಬ್ಯಾಂಕ್ ಮತ್ತು ಇಇಬಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿಡಾರ್–2ರ ಎತ್ತರಿಸಿದ ಮಾರ್ಗದ ಭಾಗವಾಗಿರುವ ಹೆಬ್ಬಾಳದಲ್ಲಿ ಸಸಿ ನೆಟ್ಟರು. </p>.<p>ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾ, ಕೆ–ರೈಡ್ ಪ್ರಾಜೆಕ್ಟ್ ಮತ್ತು ಪ್ಲ್ಯಾನಿಂಗ್ ನಿರ್ದೇಶಕ ಆರ್.ಕೆ. ಸಿಂಗ್, ಇಇಬಿ ಸಾರಿಗೆ ಎಂಜಿನಿಯರ್ ಜೊಲ್ಟಾನ್ ಡೊನಾಥ್, ಪ್ಯಾಟ್ರಿಸಿಯಾ ಇಮ್ಲರ್, ಕೆಎಫ್ಡಬ್ಲ್ಯು ಬ್ಯಾಂಕ್ನ ಸಾರಿಗೆ ವಿಭಾಗದ ಸ್ಥಳೀಯ ವಲಯ ತಜ್ಞ ಅನುದೀಪ್ ಕೊನಿಕಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>