ಈ ಸಂಬಂಧ ಮೈಸೂರು ವಿವಿಯ ಮಾಜಿ ಹಂಗಾಮಿ ಕುಲಪತಿ ಪ್ರೊ. ಬಿ.ಶಿವರಾಜ್ ಪಿಐಎಲ್ ಸಲ್ಲಿಸಿದ್ದು, ‘ವಿದ್ಯಾಶಂಕರ್ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ಹಲವು ಅಕ್ರಮಗಳನ್ನು ಎಸಗಿದ್ದಾರೆ. ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ’ ಎಂದು ಆರೋಪಿಸಿದ್ದಾರೆ. ‘ವಿಟಿಯು ಕುಲಪತಿ ನೇಮಕದ ಶೋಧನಾ ಸಮಿತಿ ರಚನೆಯೇ ಅಕ್ರಮ. ನಿಯಮಾನುಸಾರ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿ ನಾಮನಿರ್ದೇಶನ ಮಾಡಿಲ್ಲ’ ಎಂದುವಿವರಿಸಲಾಗಿದೆ.