ಬೆಂಗಳೂರು: ಕೋಟಿ ವೃಕ್ಷ ಸೈನ್ಯವು, 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿಟಿಜನ್ಸ್ ಫಾರ್ ಸಿಟಿಜನ್ಸ್, ಕ್ಲಿಪ್ ಅಲ್ಯೂಮ್ನಿ ಅಸೋಸಿಯೇಷನ್, ಪಬ್ಲಿಕ್ ಇಶ್ಯೂಸ್ ಫೋರಂ, ನಮ್ಮ ಬೆಂಗಳೂರು ಫೌಂಡೇಷನ್, ಅನ್ವಯ, ಆದ್ಯತೆ, ಸ್ವರ್ಣ ಭಾರತ ಫೌಂಡೇಷನ್, ಚೇಂಜ್ ಮೇಕರ್ಸ್ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದಲ್ಲಿ 75 ಸಾವಿರ ಸಸಿಗಳನ್ನು ನೆಡಲು ಮುಂದಾಗಿದೆ. ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.