ವೃಷಭಾವತಿ ಕಣಿವೆಯು ಯಾರ ಸರಹದ್ದಿಗೆ ಬರುತ್ತದೆ ಎಂಬ ಗೊಂದಲ ಇತ್ತು. ಬಿಬಿಎಂಪಿ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ರಾಜಕಾಲುವೆ ನಿರ್ವಹಣೆ ವಿಭಾಗದ ಅಧಿಕಾರಿಗಳು ಒಟ್ಟಾಗಿ ಪರಿಶೀಲಿಸಿದರು. ಬಿಬಿಎಂಪಿಯ ಮುಖ್ಯ ಎಂಜಿನಿಯರ್ (ರಾಜಕಾಲುವೆ ವಿಭಾಗ) ಬೆಟ್ಟೇಗೌಡ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಆ. 10ರಂದು ಪರಿಶೀಲನಾ ವರದಿ ಲೋಕಾಯುಕ್ತರಿಗೆ ಸಲ್ಲಿಕೆಯಾಗಲಿದೆ. ಈ ನಡುವೆ ಈ ಕಣಿವೆಯ ಹೊಣೆಗಾರಿಕೆ ಯಾರಿಗೆ ಎಂಬ ಬಗ್ಗೆ ನಿರ್ಧಾರವಾಗಲಿದೆ ಎಂದು ಸುರೇಶ್ ಮಾಹಿತಿ ನೀಡಿದರು.