‘ತಮಿಳುನಾಡಿನ ನಿವೇಶ್ ಕುಮಾರ್, ಕೆಲಸ ಹುಡುಕಿಕೊಂಡು ಎರಡು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ತಮ್ಮ ದೊಡ್ಡಪ್ಪನ ಮನೆಯಲ್ಲಿ ನೆಲೆಸಿದ್ದರು. ಅದೇ ಮನೆ ಬಳಿಯ ಮತ್ತೊಂದು ಮನೆಯಲ್ಲಿ ಆರೋಪಿ ನಾರಾಯಣ ಕುಟುಂಬ ವಾಸವಿತ್ತು. ಆತನ ಮಗಳ ಜೊತೆ ಸ್ನೇಹ ಬೆಳೆಸಿದ್ದ ನಿವೇಶ್, ಸಲುಗೆ ಇಟ್ಟುಕೊಂಡಿದ್ದರು. ಯುವತಿಯನ್ನು ಆಗಾಗ ಭೇಟಿಯಾಗುತ್ತಿದ್ದರು. ಯಾರೂ ಇಲ್ಲದಿದ್ದಾಗ ಮನೆಗೂ ಹೋಗಿ ಬರುತ್ತಿದ್ದರೆಂದು ಗೊತ್ತಾಗಿದೆ’ ಎಂದೂ ತಿಳಿಸಿದರು.