ಬೆಂಗಳೂರು: ವಿಶ್ವೇಶ್ವರಪುರ ವಾರ್ಡ್ ವ್ಯಾಪ್ತಿಯ ಬಸಪ್ಪ ವೃತ್ತದಿಂದ ವಾಸವಿ ಸಿಗ್ನಲ್ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದರ ಪಾದಚಾರಿ ಮಾರ್ಗವೂ ಸೇರಿದಂತೆ ಅಂತಿಮ ಹಂತದ ಇತರ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಗಿದೆ.
ಈ ಕಾಮಗಾರಿಯನ್ನು ಬುಧವಾರ ತಪಾಸಣೆ ನಡೆಸಿದ್ದ ಮೇಯರ್ ಎಂ.ಗೌತಮ್ ಕುಮಾರ್, ಕೆಲಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಶಾಸಕ ಉದಯ್ ಬಿ. ಗರುಡಾಚಾರ್, ವಾರ್ಡ್ನ ಪಾಲಿಕೆ ಸದಸ್ಯೆ ವಾಣಿ ವಿ. ರಾವ್, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್, ಸೂಪರಿಂಟೆಂಡಿಗ್ ಎಂಜಿನಿಯರ್ ಲೋಕೇಶ್ ಉಪಸ್ಥಿತರಿದ್ದರು.
‘ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿರಲಿಲ್ಲ. ಮೇಯರ್ ತಪಾಸಣೆ ನಡೆಸಿದ ಮರುದಿನವೇ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದ್ದು, 15 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು