ಟ್ಯಾಂಕರ್ ನೀರಿಗಾಗಿ ದುಬಾರಿ ದುಡ್ಡು ತೆತ್ತು ಹೈರಾಣಾಗಿದ್ದ ಜನರ ಮೊಗದಲ್ಲಿ ಹರುಷ ತಂದಿದೆ. ರಸ್ತೆಗಳಲ್ಲಿ ಟ್ಯಾಂಕರ್ ಗಾಡಿಗಳ ಓಡಾಟವೂ ಕಡಿಮೆಯಾಗಿದೆ. ಹಣ ಕೊಟ್ಟರೂ ಸರಿಯಾದ ಸಮಯಕ್ಕೆ ಸರಿಯಾಗಿ ನೀರು ಸಿಗುವುದು ಕಷ್ಟವಾಗುತ್ತಿತ್ತು. ಆದರೆ, ಈಗ ಸತತವಾಗಿ ಸುರಿದ ಮಳೆ, ನಿವಾಸಿಗಳು ನೆಮ್ಮದಿಯಿಂದಿರುವಂತೆ ಮಾಡಿದೆ.