ಈ ಕುರಿತು ಜ. 4ರಂದು ಇಲಾಖಾ ಮುಖ್ಯಸ್ಥರಿಗೆ ನಾಲ್ಕು ಪುಟಗಳ ಸ್ಪಷ್ಟನೆ ನೀಡಿರುವ ನಂ. 6ನೇ ಕಟ್ಟಡಗಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಆರ್. ನಾರಪ್ಪ, ನಂ.2ನೇ ಕಟ್ಟಡಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಧನಂಜಯ ಮೂರ್ತಿ ಮತ್ತು ಬೆಂಗಳೂರು ಕಟ್ಟಡಗಳ ವೃತ್ತದ ಅಧೀಕ್ಷಕ ಎಂಜಿನಿಯರ್ ಶ್ರೀಧರಮೂರ್ತಿ, ‘ಯಾವುದೇ ತುಂಡು ಗುತ್ತಿಗೆ ನೀಡಿಲ್ಲ. ಕಾಮಗಾರಿಗಳ ಬಿಲ್ ಮೊತ್ತವನ್ನಷ್ಟೇ ವಿಭಜಿಸಿ ನೀಡಲಾಗಿದೆ’ ಎಂದು ಉತ್ತರಿಸಿದ್ದಾರೆ.