‘ಸದಾಶಿವನಗರದ ಈಜುಕೊಳದ ಬಳಿ ಬಿದ್ದಿದ್ದ ಕಾಡುಪಾಪವನ್ನು ಸ್ಥಳೀಯರಾದ ಮುರುಗೇಶ್ ಹಾಗೂ ವಿ.ಜಿ.ಪರಶುರಾಮ ಸೇರಿ ರಕ್ಷಿಸಿದ್ದರು. ಬಳಿಕ ನಮಗೆ ಮಾಹಿತಿ ನೀಡಿದ್ದರು. ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ಹಾಗೂ ನಾನು ಸ್ಥಳಕ್ಕೆ ತೆರಳಿ ನೋಡಿದಾಗ ಅದು ಗಾಯಗೊಂಡಿರುವುದು ಕಂಡು ಬಂತು. ಹೆಚ್ಚಿನ ಆರೈಕೆಗಾಗಿ ಅದನ್ನು ಬನ್ನೇರುಘಟ್ಟದ ವನ್ಯಜೀವಿಗಳ ಆಸ್ಪತ್ರೆಗೆ ಒಪ್ಪಿಸಿದ್ದೇವೆ’ ಎಂದು ವನ್ಯಜೀವಿ ಸಂರಕ್ಷಕ ಮತ್ತು ಜೀವವೈವಿಧ್ಯ ಮಂಡಳಿಯ ಸಹಾಯ ಸಂಶೋಧಕ ಎಸ್.ಪ್ರೀತಮ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.