‘ಸ್ವಾಗತ್ ಅವರು ರಾತ್ರಿ ಎಂದಿನಂತೆ ಬಾರ್ ಮುಚ್ಚಿದ್ದರು. ಮನೆಗೆ ಹೊರಡಲು ಸಜ್ಜಾಗಿದ್ದರು. ಅದೇ ಸಮಯದಲ್ಲಿ ಬೈಕ್ನಲ್ಲಿ ಬಂದಿದ್ದ ಮೂವರು ಆರೋಪಿಗಳು, ಮದ್ಯ ನೀಡುವಂತೆ ಕೇಳಿದ್ದರು. ‘ಬಾರ್ ಬಂದ್ ಮಾಡಲಾಗಿದೆ. ಮದ್ಯವಿಲ್ಲ’ ಎಂದು ಸ್ವಾಗತ್ ಹೇಳಿದ್ದರು. ಮದ್ಯ ನೀಡದಿದ್ದಕ್ಕೆ ಕೋಪಗೊಂಡಿದ್ದ ಆರೋಪಿಗಳು, ಸ್ವಾಗತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಂತರ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.