ಯುವಕನಿಂದ ಮಾಹಿತಿ ಪಡೆದಿದ್ದ ಸಿಬ್ಬಂದಿ, ಚಪ್ಪಲಿಗಾಗಿ ಕೆಲ ನಿಮಿಷ ಹುಡುಕಾಟ ನಡೆಸಿದ್ದರು. ಆದರೆ, ಚಪ್ಪಲಿ ಸಿಕ್ಕಿರಲಿಲ್ಲ. ಯುವಕನನ್ನು ತರಾಟೆಗೆ ತೆಗೆದುಕೊಂಡ ಸಿಬ್ಬಂದಿ, ‘ಚಪ್ಪಲಿ ಕಳುವಾಗಿದ್ದರೆ, ಠಾಣೆಗೆ ಬಂದು ದೂರು ನೀಡು’ ಎಂದು ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಯುವಕ ಯಾರು ಹಾಗೂ ವಿಳಾಸವೇನು ಎಂಬುದು ಗೊತ್ತಾಗಿಲ್ಲ.