‘ಧನುಷ್ ಪ್ರೇಯಸಿಯ ನಂಬರ್ ಪಡೆದಿದ್ದ ಕಾರ್ತಿಕ್, ಆಕೆಗೆ ಕರೆ ಮಾಡಿ ಮಾತಾಡಿದ್ದ. ಜತೆಗೆ ಆಕೆಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ವಿಚಾರವನ್ನು ಧನುಷ್ಗೆ ಯುವತಿ ತಿಳಿಸಿದ್ದಳು. ವಿಚಾರ ಕೇಳಿ ಕುಪಿತಗೊಂಡಿದ್ದ ಧನುಷ್ ತನ್ನ ಸ್ನೇಹಿತ ಶಾಬುದ್ದೀನ್ಗೆ ತಿಳಿಸಿದ್ದ. ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಬುದ್ಧಿ ಕಲಿಸಲು ನಿರ್ಧರಿಸಿದ್ದರು. ಅದರಂತೆ ಡಿ.21ರ ಸಂಜೆ 6.30ಕ್ಕೆ ಕಾರ್ತಿಕ್ಗೆ ಕರೆ ಮಾಡಿದ ಧನುಷ್, ಮನೆಯಿಂದ ಹೊರ ಬರುವಂತೆ ಹೇಳಿದ್ದಾನೆ. ಮನೆಯಿಂದ 500 ಮೀಟರ್ ದೂರಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.