<p><strong>ಬೆಂಗಳೂರು:</strong> `ವಂಶವಾಹಿ ಜೀವವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆಗಳು ಔಷಧ ಸಂಶೋಧನೆಗೆ ಉಪಯುಕ್ತವಾಗಲಿದೆ~ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.<br /> <br /> ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜೀವವಿಜ್ಞಾನ ಮತ್ತು ಅನುವಂಶಿಕ ವಿಜ್ಞಾನದ ಹನ್ನೊಂದನೇ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ವಂಶವಾಹಿ ಜೀವವಿಜ್ಞಾನ ಕ್ಷೆತ್ರದಲ್ಲಿನ ಅನ್ವೇಷಣೆಗಳಿಂದ ವೈಜ್ಞಾನಿಕ ಜ್ಞಾನ ವೃದ್ಧಿಯಾಗುತ್ತದೆ, ಮಾನವ ಕಲ್ಯಾಣಕ್ಕೂ ಸಹಕಾರಿಯಾಗುತ್ತದೆ. ವಂಶವಾಹಿ ಕಾಯಿಲೆ ನಿವಾರಣೆ ಮಾಡಲು, ರೋಗ ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಲು ಇದು ಸಹಕಾರಿಯಾಗಲಿದೆ. ಮಾನವ ಜನಾಂಗಕ್ಕೆ ಹಲವು ರೀತಿಯಲ್ಲಿ ಉಪಯುಕ್ತವೂ ಆಗಲಿದೆ~ಎಂದು ಅವರು ಹೇಳಿದರು.<br /> <br /> `ವಂಶವಾಹಿ ಕಾಯಿಲೆಗಳಿಗೆ ಚಿಕಿತ್ಸೆ ಕಂಡು ಹಿಡಿಯಲು ವಿಜ್ಞಾನಿಗಳು ಶ್ರಮಿಸಬೇಕು. ಅಸಮರ್ಪಕ ಅಂಗಾಂಗ ಬೆಳವಣಿಗೆ (ಡೌನ್ಸ್ ಸಿಂಡ್ರೋಮ್), ಅಪಸ್ಮರ ಮುಂತಾದ ಕಾಯಿಲೆಗಳಿಗೆ ವಂಶವಾಹಿ ಚಿಕಿತ್ಸೆ ವಿಧಾನಗಳನ್ನು ಪತ್ತೆ ಹಚ್ಚಬೇಕಿದೆ~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ. ಡಾ. ಎನ್.ಪ್ರಭುದೇವ್ ಕರೆ ನೀಡಿದರು.<br /> <br /> ಅನುವಂಶಿಕ ಜೀವವಿಜ್ಞಾನ ಕ್ಷೇತ್ರದಲ್ಲಿನ ಮೂಲ ಸಂಶೋಧನೆಯ ಅಗತ್ಯತೆಯನ್ನು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್) ನಿರ್ದೇಶಕ ಡಾ. ಎಚ್.ಎ. ರಂಗನಾಥ್ ವಿವರಿಸಿ, ಹೈಬ್ರಿಡ್ ತಳಿ ಅಭಿವೃದ್ಧಿ ವಿಷಯ ಈಗಲೂ ಚರ್ಚಾರ್ಹ ಸಂಗತಿಯಾಗಿದೆ ಎಂದು ಅವರು ಹೇಳಿದರು.<br /> <br /> ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಡಾ. ಎಸ್. ಮಹದೇವನ್, ಅಣುಜೀವವಿಜ್ಞಾನದ ವಿಭಾಗದ ಡಾ. ಎಂ.ಸಿ. ಗಾಯಿತ್ರಿ, ವಿಜ್ಞಾನಿ ಡಾ. ಡಿ.ಜಿ. ಕೃಷ್ಣಪ್ಪ, ಡಾ. ಬಿ.ಎಚ್.ಎಂ. ನಿಜಲಿಂಗಪ್ಪ, ಡಾ. ಎ.ಕೆ. ಶ್ರೀವಾತ್ಸವ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಂಶವಾಹಿ ಜೀವವಿಜ್ಞಾನ ಕ್ಷೇತ್ರದಲ್ಲಿನ ಅನ್ವೇಷಣೆಗಳು ಔಷಧ ಸಂಶೋಧನೆಗೆ ಉಪಯುಕ್ತವಾಗಲಿದೆ~ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.<br /> <br /> ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜೀವವಿಜ್ಞಾನ ಮತ್ತು ಅನುವಂಶಿಕ ವಿಜ್ಞಾನದ ಹನ್ನೊಂದನೇ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ವಂಶವಾಹಿ ಜೀವವಿಜ್ಞಾನ ಕ್ಷೆತ್ರದಲ್ಲಿನ ಅನ್ವೇಷಣೆಗಳಿಂದ ವೈಜ್ಞಾನಿಕ ಜ್ಞಾನ ವೃದ್ಧಿಯಾಗುತ್ತದೆ, ಮಾನವ ಕಲ್ಯಾಣಕ್ಕೂ ಸಹಕಾರಿಯಾಗುತ್ತದೆ. ವಂಶವಾಹಿ ಕಾಯಿಲೆ ನಿವಾರಣೆ ಮಾಡಲು, ರೋಗ ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಲು ಇದು ಸಹಕಾರಿಯಾಗಲಿದೆ. ಮಾನವ ಜನಾಂಗಕ್ಕೆ ಹಲವು ರೀತಿಯಲ್ಲಿ ಉಪಯುಕ್ತವೂ ಆಗಲಿದೆ~ಎಂದು ಅವರು ಹೇಳಿದರು.<br /> <br /> `ವಂಶವಾಹಿ ಕಾಯಿಲೆಗಳಿಗೆ ಚಿಕಿತ್ಸೆ ಕಂಡು ಹಿಡಿಯಲು ವಿಜ್ಞಾನಿಗಳು ಶ್ರಮಿಸಬೇಕು. ಅಸಮರ್ಪಕ ಅಂಗಾಂಗ ಬೆಳವಣಿಗೆ (ಡೌನ್ಸ್ ಸಿಂಡ್ರೋಮ್), ಅಪಸ್ಮರ ಮುಂತಾದ ಕಾಯಿಲೆಗಳಿಗೆ ವಂಶವಾಹಿ ಚಿಕಿತ್ಸೆ ವಿಧಾನಗಳನ್ನು ಪತ್ತೆ ಹಚ್ಚಬೇಕಿದೆ~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ. ಡಾ. ಎನ್.ಪ್ರಭುದೇವ್ ಕರೆ ನೀಡಿದರು.<br /> <br /> ಅನುವಂಶಿಕ ಜೀವವಿಜ್ಞಾನ ಕ್ಷೇತ್ರದಲ್ಲಿನ ಮೂಲ ಸಂಶೋಧನೆಯ ಅಗತ್ಯತೆಯನ್ನು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್) ನಿರ್ದೇಶಕ ಡಾ. ಎಚ್.ಎ. ರಂಗನಾಥ್ ವಿವರಿಸಿ, ಹೈಬ್ರಿಡ್ ತಳಿ ಅಭಿವೃದ್ಧಿ ವಿಷಯ ಈಗಲೂ ಚರ್ಚಾರ್ಹ ಸಂಗತಿಯಾಗಿದೆ ಎಂದು ಅವರು ಹೇಳಿದರು.<br /> <br /> ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಡಾ. ಎಸ್. ಮಹದೇವನ್, ಅಣುಜೀವವಿಜ್ಞಾನದ ವಿಭಾಗದ ಡಾ. ಎಂ.ಸಿ. ಗಾಯಿತ್ರಿ, ವಿಜ್ಞಾನಿ ಡಾ. ಡಿ.ಜಿ. ಕೃಷ್ಣಪ್ಪ, ಡಾ. ಬಿ.ಎಚ್.ಎಂ. ನಿಜಲಿಂಗಪ್ಪ, ಡಾ. ಎ.ಕೆ. ಶ್ರೀವಾತ್ಸವ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>