‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಳಂಕರಹಿತ ಆಡಳಿತ ದೇಶಕ್ಕೇ ಮಾದರಿ. ರಾಜ್ಯದಲ್ಲೂ ಜೆಡಿಯು ಅಂತಹುದೇ ಆಡಳಿತ ನೀಡಲು ಬಯಸಿದೆ. ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಇದು ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಮತ್ತು ಜೆ.ಎಸ್.ಪಟೇಲ್ ಕಟ್ಟಿ ಬೆಳಿಸಿದ ಪಕ್ಷ. ಜನರಿಗೆ ನಮ್ಮ ಪಕ್ಷದ ಬಗ್ಗೆ ವಿಶ್ವಾಸವಿದೆ’ ಎಂದೂ ಮಹಿಮ ಹೇಳಿದರು.