‘ಒಪಿಎಸ್ ಜಾರಿಗೆ ತರುವುದಾಗಿ ನೀವು ಪ್ರಣಾಳಿಕೆಯಲ್ಲಿ ಹೇಳಿದ್ದಿರಿ. ಆದಷ್ಟು ಬೇಗ ಆ ಕೆಲಸ ಮಾಡಬೇಕು. ಹಾಗೆಯೇ, ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರ ಮಾದರಿಯಲ್ಲೇ ವೇತನ ನಿಗದಿ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟೆವು. ಮನವಿ ಆಲಿಸಿದ ಮುಖ್ಯಮಂತ್ರಿ, ಅಧಿಕಾರಗಳ ತುರ್ತು ಸಭೆ ಕರೆದು ಈ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಮು ಹೇಳಿದರು.