<p>ಬೆಂಗಳೂರು: `ನನಗೂ ಕವಿತೆ ರಚಿಸುವ ಕಲೆಯನ್ನು ಕಲಿಸಿಕೊಡಿ ಸ್ವಾಮಿ, ಅಗತ್ಯ ಬಿದ್ದಾಗ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳಲ್ಲಿ ನನ್ನ ಅಭಿಪ್ರಾಯವನ್ನು ಕವಿತೆಯ ಮೂಲಕ ಚುಟುಕಾಗಿ ಮಂಡಿಸುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಹಿತಿ ದೊಡ್ಡರಂಗೇಗೌಡ ಅವರಲ್ಲಿ ಮನವಿ ಮಾಡುವ ಮೂಲಕ ಹಾಸ್ಯ ಚಟಾಕಿಯನ್ನು ಹಾರಿಸಿದರು.<br /> <br /> ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡ ಅವರ ಒಂಬತ್ತು ಪುಸ್ತಕ ಹಾಗೂ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, `ವಿಧಾನಪರಿಷತ್ತಿನಲ್ಲಿ ದೊಡ್ಡರಂಗೇಗೌಡರು ವಿರೋಧಪಕ್ಷ ಮತ್ತು ಸ್ವಪಕ್ಷಗಳಿಗೆ ಉಂಟಾಗುವ ಮುಜುಗರ ಸಂದರ್ಭವನ್ನು ಬದಿಗಿರಿಸಿ ತಮ್ಮ ಅಭಿಪ್ರಾಯವನ್ನು ಕವಿತೆಯ ಮೂಲಕ ಸ್ಪಷ್ಟವಾಗಿ ಮಂಡಿಸುವ ಚಾಕಚಕ್ಯತೆಯನ್ನು ಪಡೆದಿದ್ದಾರೆ. ಈ ಕಲೆಯು ಎಲ್ಲರಿಗೂ ಒಲಿಯುವಂತದ್ದಲ್ಲ~ ಎಂದು ಹೇಳಿದರು. <br /> <br /> `ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಹಾಳಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಕ್ಷೇತ್ರವು ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ಕಾರ್ಯವನ್ನು ದೊಡ್ಡರಂಗೇಗೌಡರು 80ಕ್ಕಿಂತ ಹೆಚ್ಚು ಪುಸ್ತಕಗಳನ್ನು ವೈಚಾರಿಕ ನೆಲೆಯಲ್ಲಿ ರಚಿಸಿರುವ ಮೂಲಕ ಸಾಧಿಸಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸಲು ಹರ್ಷಿಸುತ್ತೇನೆ~ ಎಂದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಬದುಕು ಮತ್ತು ಬರಹಗಳ ನಡುವೆ ಹೆಚ್ಚು ಅಂತರವಿಲ್ಲದೇ ಬದುಕಿದವರು ದೊಡ್ಡರಂಗೇಗೌಡರು. ಹಳೆಯ ತಲೆಮಾರಿನ ಕಾವ್ಯ ಮಾರ್ಗವನ್ನು ಅನುಸಂಧಾನ ಮಾಡಿಕೊಂಡಿದ್ದರೂ ಸಹ ಸ್ವಂತ ಕಾವ್ಯಪ್ರಕಾರವನ್ನು ಸೃಷ್ಟಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ~ ಎಂದರು. <br /> <br /> ಇದೇ ಸಂದರ್ಭದಲ್ಲಿ ದೊಡ್ಡರಂಗೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಎಂ.ವಿ.ರಾಜಶೇಖರನ್, ಎನ್.ತಿಪ್ಪಣ್ಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಗೀತರಚನಕಾರ ವಿ.ಮನೋಹರ್, ಕಾದಂಬರಿಗಾರ್ತಿ ಪ್ರೇಮಾ ಭಟ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ನನಗೂ ಕವಿತೆ ರಚಿಸುವ ಕಲೆಯನ್ನು ಕಲಿಸಿಕೊಡಿ ಸ್ವಾಮಿ, ಅಗತ್ಯ ಬಿದ್ದಾಗ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳಲ್ಲಿ ನನ್ನ ಅಭಿಪ್ರಾಯವನ್ನು ಕವಿತೆಯ ಮೂಲಕ ಚುಟುಕಾಗಿ ಮಂಡಿಸುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಹಿತಿ ದೊಡ್ಡರಂಗೇಗೌಡ ಅವರಲ್ಲಿ ಮನವಿ ಮಾಡುವ ಮೂಲಕ ಹಾಸ್ಯ ಚಟಾಕಿಯನ್ನು ಹಾರಿಸಿದರು.<br /> <br /> ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡ ಅವರ ಒಂಬತ್ತು ಪುಸ್ತಕ ಹಾಗೂ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, `ವಿಧಾನಪರಿಷತ್ತಿನಲ್ಲಿ ದೊಡ್ಡರಂಗೇಗೌಡರು ವಿರೋಧಪಕ್ಷ ಮತ್ತು ಸ್ವಪಕ್ಷಗಳಿಗೆ ಉಂಟಾಗುವ ಮುಜುಗರ ಸಂದರ್ಭವನ್ನು ಬದಿಗಿರಿಸಿ ತಮ್ಮ ಅಭಿಪ್ರಾಯವನ್ನು ಕವಿತೆಯ ಮೂಲಕ ಸ್ಪಷ್ಟವಾಗಿ ಮಂಡಿಸುವ ಚಾಕಚಕ್ಯತೆಯನ್ನು ಪಡೆದಿದ್ದಾರೆ. ಈ ಕಲೆಯು ಎಲ್ಲರಿಗೂ ಒಲಿಯುವಂತದ್ದಲ್ಲ~ ಎಂದು ಹೇಳಿದರು. <br /> <br /> `ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಹಾಳಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಕ್ಷೇತ್ರವು ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ಕಾರ್ಯವನ್ನು ದೊಡ್ಡರಂಗೇಗೌಡರು 80ಕ್ಕಿಂತ ಹೆಚ್ಚು ಪುಸ್ತಕಗಳನ್ನು ವೈಚಾರಿಕ ನೆಲೆಯಲ್ಲಿ ರಚಿಸಿರುವ ಮೂಲಕ ಸಾಧಿಸಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸಲು ಹರ್ಷಿಸುತ್ತೇನೆ~ ಎಂದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಬದುಕು ಮತ್ತು ಬರಹಗಳ ನಡುವೆ ಹೆಚ್ಚು ಅಂತರವಿಲ್ಲದೇ ಬದುಕಿದವರು ದೊಡ್ಡರಂಗೇಗೌಡರು. ಹಳೆಯ ತಲೆಮಾರಿನ ಕಾವ್ಯ ಮಾರ್ಗವನ್ನು ಅನುಸಂಧಾನ ಮಾಡಿಕೊಂಡಿದ್ದರೂ ಸಹ ಸ್ವಂತ ಕಾವ್ಯಪ್ರಕಾರವನ್ನು ಸೃಷ್ಟಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ~ ಎಂದರು. <br /> <br /> ಇದೇ ಸಂದರ್ಭದಲ್ಲಿ ದೊಡ್ಡರಂಗೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಎಂ.ವಿ.ರಾಜಶೇಖರನ್, ಎನ್.ತಿಪ್ಪಣ್ಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಗೀತರಚನಕಾರ ವಿ.ಮನೋಹರ್, ಕಾದಂಬರಿಗಾರ್ತಿ ಪ್ರೇಮಾ ಭಟ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>