<p><strong>ಬೆಂಗಳೂರು: `</strong>ಕವಿಗಳು ಕವನ ರಚನೆ ಮಾಡುವುದರ ಜೊತೆಗೆ ಕವನ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಕಿವಿ ಮಾತು ಹೇಳಿದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯವು `ಪುಸ್ತಕ ಪ್ರಪಂಚ- 2011~ ರ ಅಂಗವಾಗಿ ಇಂಡ್ಯಾ ಕಾಮಿಕ್ಸ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕವಿಗಳು ಕವನಗಳನ್ನು ರಚಿಸುವ ಕಡೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಕವನ ವಾಚನ ಮಾಡುವತ್ತ ಚಿತ್ತ ಹರಿಸುವುದಿಲ್ಲ. ತಾವು ರಚಿಸಿದ ಕವನಗಳನ್ನು ಇತರರಿಗೆ ವಾಚನ ಮಾಡಬೇಕು. ಇದರಿಂದ ಕವನಗಳಲ್ಲಿನ ತಪ್ಪು- ಒಪ್ಪುಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ~ ಎಂದು ಹೇಳಿದರು.<br /> <br /> `ಕನ್ನಡ ಸಾಹಿತ್ಯದಲ್ಲಿ ಬರವಣಿಗೆಗೆ ನಿಂತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ರೀತಿ ಹೇಳುವರರು ಕುರುಡರಾಗಿದ್ದಾರೆ. ಆಧುನಿಕ ಸಾಹಿತ್ಯದಲ್ಲಿ ಉತ್ತಮ ಕವನಗಳು ರಚನೆಯಾಗುತ್ತಿವೆ. ಇಂತಹ ಕವನಗಳು ಪ್ರಕಟವಾಗುತ್ತಿರುವದನ್ನು ಗಮನಿಸಿದರೆ ಕನ್ನಡ ಸಾಹಿತ್ಯದ ಬರವಣಿಗೆ ನಿಂತಿಲ್ಲ ಎಂಬುದಕ್ಕೆ ಸಾಕ್ಷಿ~ ಎಂದು ಅಭಿಪ್ರಾಯಪಟ್ಟರು.<br /> <br /> ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆಲ ತಿಂಗಳ ಹಿಂದೆ ಬಳ್ಳಾರಿಯ ಸಂಡೂರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರಂತೆ. ಗಣಿಗಾರಿಕೆಯಿಂದ ಅಲ್ಲಿನ ಸನ್ನಿವೇಶಗಳನ್ನು ತಮ್ಮ ಕವನದಲ್ಲಿ ವಾಚನ ಮಾಡಿದ್ದು ಹೀಗೆ;<br /> <br /> `ನಾವು ಬಂದಿಳಿದಾಗ ಸಂಡೂರಿಗೆ ಚುಮು ಚುಮು ಬೆಳಗು, ಬೆಳಗಾ ಬೆಳಿಗ್ಗೆ ಆವರಸಿತ್ತು ಕೆಂಧೂಳು, ಕಾರಿನ ಒಳಗೂ ಹೊರಗೂ, ಸಂಭವಿಸಿತ್ತು ಊರಿಗೂರೇ ಕೆಳಪಟ್ಟು, ಮಣ್ಣುಟ್ಟು~... ಈ ಕವನ ವಾಚನದ ಮೂಲಕ ಸಂಡೂರಿನಲ್ಲಿ ಗಣಿಗಾರಿಕೆಯಿಂದ ಆಗಿರುವ ಅಲ್ಲಿನ ಪರಿಸರದ ಚಿತ್ರಣವನ್ನು ವಾಚನ ಮಾಡಿದರು.<br /> <br /> ಕಾರ್ಯಕ್ರಮದಲ್ಲಿ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಸುಬ್ಬು ಹೊಲೆಯಾರ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ತಮ್ಮ ಕವನಗಳನ್ನು ವಾಚನ ಮಾಡಿದರು.<br /> <br /> <strong>ಎಲ್ಲಾ ರಸ್ತೆಗಳಂತಲ್ಲ...<br /> </strong>ಎಲ್ಲಾ ರಸ್ತೆಗಳಂತಲ್ಲ ಈ ಎಂ.ಜಿ.ರಸ್ತೆ, ಮಹಾತ್ಮಗಾಂಧಿ ರಸ್ತೆ, ನಮ್ಮ ಮಹಾತ್ಮನಂತೆ ಸದಾ ಬೆತ್ತಲಲ್ಲ. ಹಗಲು ಕತ್ತಲು, ರಾತ್ರಿ ಬೆತ್ತಲು, ಸುತ್ತಲು ಹಿತ್ತಲು... ಹೀಗೆ ತಾವು 35 ವರ್ಷಗಳಿಂದ ಕಂಡ ನಗರದ ಎಂ.ಜಿ.ರಸ್ತೆಯ ಬದಲಾವಣೆಗಳನ್ನು ಕವಿ ಡಾ.ಎಲ್.ಹನುಮಂತಯ್ಯ ತಮ್ಮ ಕವನದ ಮೂಲಕ ವಾಚನ ಮಾಡಿದ್ದು ಗೋಷ್ಠಿಯಲ್ಲಿ ವಿಶೇಷವಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಕವಿಗಳು ಕವನ ರಚನೆ ಮಾಡುವುದರ ಜೊತೆಗೆ ಕವನ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಕಿವಿ ಮಾತು ಹೇಳಿದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯವು `ಪುಸ್ತಕ ಪ್ರಪಂಚ- 2011~ ರ ಅಂಗವಾಗಿ ಇಂಡ್ಯಾ ಕಾಮಿಕ್ಸ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕವಿಗಳು ಕವನಗಳನ್ನು ರಚಿಸುವ ಕಡೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಕವನ ವಾಚನ ಮಾಡುವತ್ತ ಚಿತ್ತ ಹರಿಸುವುದಿಲ್ಲ. ತಾವು ರಚಿಸಿದ ಕವನಗಳನ್ನು ಇತರರಿಗೆ ವಾಚನ ಮಾಡಬೇಕು. ಇದರಿಂದ ಕವನಗಳಲ್ಲಿನ ತಪ್ಪು- ಒಪ್ಪುಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ~ ಎಂದು ಹೇಳಿದರು.<br /> <br /> `ಕನ್ನಡ ಸಾಹಿತ್ಯದಲ್ಲಿ ಬರವಣಿಗೆಗೆ ನಿಂತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ರೀತಿ ಹೇಳುವರರು ಕುರುಡರಾಗಿದ್ದಾರೆ. ಆಧುನಿಕ ಸಾಹಿತ್ಯದಲ್ಲಿ ಉತ್ತಮ ಕವನಗಳು ರಚನೆಯಾಗುತ್ತಿವೆ. ಇಂತಹ ಕವನಗಳು ಪ್ರಕಟವಾಗುತ್ತಿರುವದನ್ನು ಗಮನಿಸಿದರೆ ಕನ್ನಡ ಸಾಹಿತ್ಯದ ಬರವಣಿಗೆ ನಿಂತಿಲ್ಲ ಎಂಬುದಕ್ಕೆ ಸಾಕ್ಷಿ~ ಎಂದು ಅಭಿಪ್ರಾಯಪಟ್ಟರು.<br /> <br /> ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆಲ ತಿಂಗಳ ಹಿಂದೆ ಬಳ್ಳಾರಿಯ ಸಂಡೂರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರಂತೆ. ಗಣಿಗಾರಿಕೆಯಿಂದ ಅಲ್ಲಿನ ಸನ್ನಿವೇಶಗಳನ್ನು ತಮ್ಮ ಕವನದಲ್ಲಿ ವಾಚನ ಮಾಡಿದ್ದು ಹೀಗೆ;<br /> <br /> `ನಾವು ಬಂದಿಳಿದಾಗ ಸಂಡೂರಿಗೆ ಚುಮು ಚುಮು ಬೆಳಗು, ಬೆಳಗಾ ಬೆಳಿಗ್ಗೆ ಆವರಸಿತ್ತು ಕೆಂಧೂಳು, ಕಾರಿನ ಒಳಗೂ ಹೊರಗೂ, ಸಂಭವಿಸಿತ್ತು ಊರಿಗೂರೇ ಕೆಳಪಟ್ಟು, ಮಣ್ಣುಟ್ಟು~... ಈ ಕವನ ವಾಚನದ ಮೂಲಕ ಸಂಡೂರಿನಲ್ಲಿ ಗಣಿಗಾರಿಕೆಯಿಂದ ಆಗಿರುವ ಅಲ್ಲಿನ ಪರಿಸರದ ಚಿತ್ರಣವನ್ನು ವಾಚನ ಮಾಡಿದರು.<br /> <br /> ಕಾರ್ಯಕ್ರಮದಲ್ಲಿ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಸುಬ್ಬು ಹೊಲೆಯಾರ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ತಮ್ಮ ಕವನಗಳನ್ನು ವಾಚನ ಮಾಡಿದರು.<br /> <br /> <strong>ಎಲ್ಲಾ ರಸ್ತೆಗಳಂತಲ್ಲ...<br /> </strong>ಎಲ್ಲಾ ರಸ್ತೆಗಳಂತಲ್ಲ ಈ ಎಂ.ಜಿ.ರಸ್ತೆ, ಮಹಾತ್ಮಗಾಂಧಿ ರಸ್ತೆ, ನಮ್ಮ ಮಹಾತ್ಮನಂತೆ ಸದಾ ಬೆತ್ತಲಲ್ಲ. ಹಗಲು ಕತ್ತಲು, ರಾತ್ರಿ ಬೆತ್ತಲು, ಸುತ್ತಲು ಹಿತ್ತಲು... ಹೀಗೆ ತಾವು 35 ವರ್ಷಗಳಿಂದ ಕಂಡ ನಗರದ ಎಂ.ಜಿ.ರಸ್ತೆಯ ಬದಲಾವಣೆಗಳನ್ನು ಕವಿ ಡಾ.ಎಲ್.ಹನುಮಂತಯ್ಯ ತಮ್ಮ ಕವನದ ಮೂಲಕ ವಾಚನ ಮಾಡಿದ್ದು ಗೋಷ್ಠಿಯಲ್ಲಿ ವಿಶೇಷವಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>