<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯಕ್ಕಿಂತ ಹೆಚ್ಚಿನ ಆದ್ಯತೆಯನ್ನು ನಾಡಿನ ಜನಶಕ್ತಿಯ ಕ್ರೋಡೀಕರಣಕ್ಕೆ ನೀಡಬೇಕು. ಸಾಹಿತ್ಯ ಕುರಿತು ಆಳವಾದ ತಿಳಿವಳಿಕೆ ಇರುವವರೇ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು.<br /> <br /> ಕನ್ನಡ ವೇದಿಕೆ, ಶಾಸಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಇಂದಿನ ಅನೇಕ ಸಾಹಿತಿಗಳು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತಿಲ್ಲ. ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ~ ಎಂದು ಲೇವಡಿ ಮಾಡಿದರು.<br /> <br /> ರಾಜ್ಯದಲ್ಲಿ ಇಲ್ಲಿಯವರೆಗೆ `ಕರ್ನಾಟಕ ಸರ್ಕಾರ~ ಆಡಳಿತ ನಡೆಸಿದೆಯೇ ವಿನಃ `ಕನ್ನಡದ ಸರ್ಕಾರ~ ಅಲ್ಲ. ಕನ್ನಡದ ಸರ್ಕಾರ ಆಡಳಿತಕ್ಕೆ ಬರುವವರೆಗೆ ರಾಜ್ಯಕ್ಕೆ ಒಳಿತಿಲ್ಲ. ರಾಷ್ಟ್ರೀಯ ಪಕ್ಷಗಳು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವತನಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದರು.<br /> <br /> `ಚಂಪಾ~ ಅವರನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, `ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಚಾಮರಾಜನಗರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಆ ಜಿಲ್ಲೆಗೆ ಪ್ರತ್ಯೇಕ ರಾಜ್ಯದ ಸ್ಥಾನ ನೀಡಲಿ. ಚಾಮರಾಜನಗರಕ್ಕೆ ಭೇಟಿ ನೀಡಲು ಯಾವ ಮುಖ್ಯಮಂತ್ರಿಯೂ ಮನಸ್ಸು ಮಾಡಿಲ್ಲ. ಅಲ್ಲಿಗೆ ಭೇಟಿ ನೀಡುವಂತೆ ಸದಾನಂದ ಗೌಡರನ್ನು ಒಂದು ವಾರದಲ್ಲಿ ಕೋರಲಾಗುವುದು~ ಎಂದು ಹೇಳಿದರು.<br /> <br /> ನಾಡಿನ ಸಮಸ್ಯೆಗಳ ವಿರುದ್ಧ ತೀವ್ರ ಹೋರಾಟಕ್ಕೆ ಅಣಿಯಾಗಬೇಕಿದೆ. ಸಾಹಿತಿಗಳು, ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಡಲು ಸಿದ್ಧರಾಗಬೇಕು. ಕನ್ನಡ ಚಳವಳಿ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂದು ಹೇಳಿದರು. ನಾಡಿನ ಚರ್ಚುಗಳಲ್ಲೂ ಕನ್ನಡದಲ್ಲಿ ಪೂಜೆ ಆರಂಭವಾಗಬೇಕು. ಈ ನಿಟ್ಟಿನಲ್ಲೂ ಹೋರಾಟ ಆರಂಭಿಸಲಾಗುವುದು ಎಂದರು. ಪಂಪ ಪ್ರಶಸ್ತಿಯ ಹಿನ್ನೆಲೆಯಲ್ಲಿ ಚಂಪಾ ಅವರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.<br /> <br /> ಸಾಹಿತಿ `ಪುಸ್ತಕಮನೆ~ ಹರಿಹರಪ್ರಿಯ ಮಾತನಾಡಿ, `ಕೆಲವು ಬುದ್ಧಿಜೀವಿಗಳು ಕನ್ನಡದ ಮಾನ ಹರಾಜಿಗಿಟ್ಟಿದ್ದಾರೆ. ಒಂದು ಬಾರಿ ಕಸಾಪ ಅಧ್ಯಕ್ಷರಾದವರು ಮತ್ತೊಮ್ಮೆ ಅದೇ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಹೇಳಿರುವುದು ಸರಿಯಲ್ಲ~ ಎಂದು ವಾಗ್ದಾಳಿ ಆರಂಭಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ವಾಟಾಳ್, `ಇಲ್ಲಿ ಚಂಪಾ ಅವರ ಕುರಿತು ಮಾತನಾಡೋಣ. <br /> <br /> ಹಿರಿಯರಾದ ವೆಂಕಟಸುಬ್ಬಯ್ಯ ಅವರನ್ನು ಇಲ್ಲಿ ವಾಗ್ದಾಳಿಗೆ ಈಡು ಮಾಡುವುದು ಬೇಡ~ ಎಂದು ಹರಿಹರಪ್ರಿಯ ಅವರ ಮಾತಿಗೆ ತಡೆ ಒಡ್ಡಿದರು.ನಂತರ ಮಾತು ಮುಂದುವರಿಸಿದ ಹರಿಹರಪ್ರಿಯ, `ಕಸಾಪದಲ್ಲಿ ಕೇವಲ ಮೇಲ್ವರ್ಗದವರೇ ಇದ್ದರು. ಅಲ್ಲಿ ಅಖಂಡ ಕರ್ನಾಟಕವನ್ನು ಪ್ರತಿನಿಧಿಸಿದವರು ಚಂಪಾ~ ಎಂದು ಹೇಳಿದರು. `ಅಹಿಂದ~ ಮುಖಂಡ ಪ್ರೊ. ನರಸಿಂಹಯ್ಯ, ಕನ್ನಡ ವೇದಿಕೆ ಅಧ್ಯಕ್ಷ ಕೆ. ಪ್ರಭಾಕರ ರೆಡ್ಡಿ, ಸಾಹಿತಿ ಕೆ.ಎಸ್.ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯಕ್ಕಿಂತ ಹೆಚ್ಚಿನ ಆದ್ಯತೆಯನ್ನು ನಾಡಿನ ಜನಶಕ್ತಿಯ ಕ್ರೋಡೀಕರಣಕ್ಕೆ ನೀಡಬೇಕು. ಸಾಹಿತ್ಯ ಕುರಿತು ಆಳವಾದ ತಿಳಿವಳಿಕೆ ಇರುವವರೇ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು.<br /> <br /> ಕನ್ನಡ ವೇದಿಕೆ, ಶಾಸಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಇಂದಿನ ಅನೇಕ ಸಾಹಿತಿಗಳು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತಿಲ್ಲ. ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ~ ಎಂದು ಲೇವಡಿ ಮಾಡಿದರು.<br /> <br /> ರಾಜ್ಯದಲ್ಲಿ ಇಲ್ಲಿಯವರೆಗೆ `ಕರ್ನಾಟಕ ಸರ್ಕಾರ~ ಆಡಳಿತ ನಡೆಸಿದೆಯೇ ವಿನಃ `ಕನ್ನಡದ ಸರ್ಕಾರ~ ಅಲ್ಲ. ಕನ್ನಡದ ಸರ್ಕಾರ ಆಡಳಿತಕ್ಕೆ ಬರುವವರೆಗೆ ರಾಜ್ಯಕ್ಕೆ ಒಳಿತಿಲ್ಲ. ರಾಷ್ಟ್ರೀಯ ಪಕ್ಷಗಳು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವತನಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದರು.<br /> <br /> `ಚಂಪಾ~ ಅವರನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, `ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಚಾಮರಾಜನಗರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಆ ಜಿಲ್ಲೆಗೆ ಪ್ರತ್ಯೇಕ ರಾಜ್ಯದ ಸ್ಥಾನ ನೀಡಲಿ. ಚಾಮರಾಜನಗರಕ್ಕೆ ಭೇಟಿ ನೀಡಲು ಯಾವ ಮುಖ್ಯಮಂತ್ರಿಯೂ ಮನಸ್ಸು ಮಾಡಿಲ್ಲ. ಅಲ್ಲಿಗೆ ಭೇಟಿ ನೀಡುವಂತೆ ಸದಾನಂದ ಗೌಡರನ್ನು ಒಂದು ವಾರದಲ್ಲಿ ಕೋರಲಾಗುವುದು~ ಎಂದು ಹೇಳಿದರು.<br /> <br /> ನಾಡಿನ ಸಮಸ್ಯೆಗಳ ವಿರುದ್ಧ ತೀವ್ರ ಹೋರಾಟಕ್ಕೆ ಅಣಿಯಾಗಬೇಕಿದೆ. ಸಾಹಿತಿಗಳು, ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಡಲು ಸಿದ್ಧರಾಗಬೇಕು. ಕನ್ನಡ ಚಳವಳಿ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂದು ಹೇಳಿದರು. ನಾಡಿನ ಚರ್ಚುಗಳಲ್ಲೂ ಕನ್ನಡದಲ್ಲಿ ಪೂಜೆ ಆರಂಭವಾಗಬೇಕು. ಈ ನಿಟ್ಟಿನಲ್ಲೂ ಹೋರಾಟ ಆರಂಭಿಸಲಾಗುವುದು ಎಂದರು. ಪಂಪ ಪ್ರಶಸ್ತಿಯ ಹಿನ್ನೆಲೆಯಲ್ಲಿ ಚಂಪಾ ಅವರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.<br /> <br /> ಸಾಹಿತಿ `ಪುಸ್ತಕಮನೆ~ ಹರಿಹರಪ್ರಿಯ ಮಾತನಾಡಿ, `ಕೆಲವು ಬುದ್ಧಿಜೀವಿಗಳು ಕನ್ನಡದ ಮಾನ ಹರಾಜಿಗಿಟ್ಟಿದ್ದಾರೆ. ಒಂದು ಬಾರಿ ಕಸಾಪ ಅಧ್ಯಕ್ಷರಾದವರು ಮತ್ತೊಮ್ಮೆ ಅದೇ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಹೇಳಿರುವುದು ಸರಿಯಲ್ಲ~ ಎಂದು ವಾಗ್ದಾಳಿ ಆರಂಭಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ವಾಟಾಳ್, `ಇಲ್ಲಿ ಚಂಪಾ ಅವರ ಕುರಿತು ಮಾತನಾಡೋಣ. <br /> <br /> ಹಿರಿಯರಾದ ವೆಂಕಟಸುಬ್ಬಯ್ಯ ಅವರನ್ನು ಇಲ್ಲಿ ವಾಗ್ದಾಳಿಗೆ ಈಡು ಮಾಡುವುದು ಬೇಡ~ ಎಂದು ಹರಿಹರಪ್ರಿಯ ಅವರ ಮಾತಿಗೆ ತಡೆ ಒಡ್ಡಿದರು.ನಂತರ ಮಾತು ಮುಂದುವರಿಸಿದ ಹರಿಹರಪ್ರಿಯ, `ಕಸಾಪದಲ್ಲಿ ಕೇವಲ ಮೇಲ್ವರ್ಗದವರೇ ಇದ್ದರು. ಅಲ್ಲಿ ಅಖಂಡ ಕರ್ನಾಟಕವನ್ನು ಪ್ರತಿನಿಧಿಸಿದವರು ಚಂಪಾ~ ಎಂದು ಹೇಳಿದರು. `ಅಹಿಂದ~ ಮುಖಂಡ ಪ್ರೊ. ನರಸಿಂಹಯ್ಯ, ಕನ್ನಡ ವೇದಿಕೆ ಅಧ್ಯಕ್ಷ ಕೆ. ಪ್ರಭಾಕರ ರೆಡ್ಡಿ, ಸಾಹಿತಿ ಕೆ.ಎಸ್.ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>