<p><strong>ಬೆಂಗಳೂರು</strong>: ಮಡಿವಾಳ ಕೆರೆ ಆವರಣದಲ್ಲಿ ಶನಿವಾರ ನಡೆದ ‘ಕೆರೆ ಹಬ್ಬ’ದಲ್ಲಿ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸುಮಾರು 500 ನಾಗರಿಕರು ರ್್ಯಾಲಿ ನಡೆಸಿದರು.<br /> <br /> ‘ನಮ್ಮ ಬೆಂಗಳೂರು ಪ್ರತಿಷ್ಠಾನ’, ‘ಬೆಟರ್ ಬೆಂಗಳೂರು 76’ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ದಿನವೀಡಿ ನಡೆದ ಹಬ್ಬದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.<br /> <br /> ಪಕ್ಷಿ ವೀಕ್ಷಣೆ, ಸೈಕ್ಲಿಂಗ್, ಯೋಗ, ಚಿತ್ರಕಲೆ, ಸಮುದಾಯ ನೃತ್ಯ, ಕಥೆ ಹೇಳುವಿಕೆ, ಛಾಯಾಚಿತ್ರ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು. ಮಕ್ಕಳಿಗಾಗಿ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು.<br /> <br /> ‘ಒನ್ ಬೆಂಗಳೂರು ಫಾರ್ ಲೇಕ್ಸ್’ ಸಂಸ್ಥೆಯ ಅರವಿಂದ ಗುಪ್ತಾ ಮಾತನಾಡಿ, ‘ವಲಸೆ ಹಕ್ಕಿಗಳ ತಾಣವಾದ ಇಂತಹ ಕೆರೆ ನಮ್ಮ ನೆರೆಹೊರೆಯಲ್ಲಿರುವುದು ನಮ್ಮ ಅದೃಷ್ಟ. ಈ ಕೆರೆ ಮತ್ತು ಇದರಲ್ಲಿ ಜೀವವೈವಿಧ್ಯವನ್ನು ರಕ್ಷಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.<br /> <br /> ಮಡಿವಾಳ ಕೆರೆ ಪ್ರತಿಷ್ಠಾನದ ಸದಸ್ಯ ಎ.ವಿದ್ಯಾಶಂಕರ್ ಮಾತನಾಡಿ, ‘ಕಳೆದ ವರ್ಷದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ವಲಸೆ ಹಕ್ಕಿಗಳ ತಾಣವಾದ ಈ ಕೆರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಡಿವಾಳ ಕೆರೆ ಆವರಣದಲ್ಲಿ ಶನಿವಾರ ನಡೆದ ‘ಕೆರೆ ಹಬ್ಬ’ದಲ್ಲಿ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸುಮಾರು 500 ನಾಗರಿಕರು ರ್್ಯಾಲಿ ನಡೆಸಿದರು.<br /> <br /> ‘ನಮ್ಮ ಬೆಂಗಳೂರು ಪ್ರತಿಷ್ಠಾನ’, ‘ಬೆಟರ್ ಬೆಂಗಳೂರು 76’ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ದಿನವೀಡಿ ನಡೆದ ಹಬ್ಬದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.<br /> <br /> ಪಕ್ಷಿ ವೀಕ್ಷಣೆ, ಸೈಕ್ಲಿಂಗ್, ಯೋಗ, ಚಿತ್ರಕಲೆ, ಸಮುದಾಯ ನೃತ್ಯ, ಕಥೆ ಹೇಳುವಿಕೆ, ಛಾಯಾಚಿತ್ರ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು. ಮಕ್ಕಳಿಗಾಗಿ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು.<br /> <br /> ‘ಒನ್ ಬೆಂಗಳೂರು ಫಾರ್ ಲೇಕ್ಸ್’ ಸಂಸ್ಥೆಯ ಅರವಿಂದ ಗುಪ್ತಾ ಮಾತನಾಡಿ, ‘ವಲಸೆ ಹಕ್ಕಿಗಳ ತಾಣವಾದ ಇಂತಹ ಕೆರೆ ನಮ್ಮ ನೆರೆಹೊರೆಯಲ್ಲಿರುವುದು ನಮ್ಮ ಅದೃಷ್ಟ. ಈ ಕೆರೆ ಮತ್ತು ಇದರಲ್ಲಿ ಜೀವವೈವಿಧ್ಯವನ್ನು ರಕ್ಷಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.<br /> <br /> ಮಡಿವಾಳ ಕೆರೆ ಪ್ರತಿಷ್ಠಾನದ ಸದಸ್ಯ ಎ.ವಿದ್ಯಾಶಂಕರ್ ಮಾತನಾಡಿ, ‘ಕಳೆದ ವರ್ಷದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ವಲಸೆ ಹಕ್ಕಿಗಳ ತಾಣವಾದ ಈ ಕೆರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>