<p>ಬೆಂಗಳೂರು: ‘ಕುತೂಹಲಗಳ ಜತೆಯಲ್ಲಿ ನಿರೂಪಣಾ ಶೈಲಿಯಿಂದಲೇ ಓದುಗನನ್ನು ಹಿಡಿದಿಡುವ ಶಕ್ತಿ ‘ಪ್ರಸ್ಥಾನ’ ಕಾದಂಬರಿಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ತಿಳಿಸಿದರು.<br /> <br /> ಸಿವಿಜಿ ಇಂಡಿಯಾ ಸಂಸ್ಥೆಯು ಉದಯಭಾನು ಕಲಾಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸುರೇಶ ಪಾಟೀಲರ ‘ಪ್ರಸ್ಥಾನ’ ಕಾದಂಬರಿಬಿಡುಗಡೆ ಮಾಡಿ ಮಾತನಾಡಿದರು.<br /> <br /> ‘ನವೋದಯ, ನವ್ಯ ಹಾಗೂ ನವ್ಯೋತ್ತರ ಸೇರಿದಂತೆ ಎಲ್ಲ ಪರಂಪರೆಗಳಿಗೂ ದಕ್ಕುವ ಶ್ರೇಷ್ಠ ಕೃತಿ ಇದಾಗಿದ್ದು, ವಿಮರ್ಶಾ ವಲಯದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಬೇಕು’ ಎಂದು ಹೇಳಿದರು.<br /> <br /> ‘ಸಾಹಿತ್ಯ ಅರಿವಿನ ವಿಸ್ತಾರವನ್ನು ಹೆಚ್ಚಿಸಬೇಕೆ ಅಥವಾ ಮನೋರಂಜನೆ ವಸ್ತುವಾಗಬೇಕೆ ಎಂಬುದು ಇಂದಿಗೂ ಚರ್ಚಿತ ವಿಷಯವೇ. ಆದರೆ ಮನೋರಂಜನೆಯ ಧಾಟಿಯನ್ನು ಬಳಸದೇ, ರೋಚಕ ಶೈಲಿ ಅನುಸರಿಸದೇ ಕುತೂಹಲ ಮೂಡಿಸುವ ಕಥನ ಶೈಲಿಗೆ ಬೆರಗಾಗಿದ್ದೇನೆ’ ಎಂದು ಶ್ಲಾಘಿಸಿದರು.<br /> <br /> ‘ವೈದ್ಯಕೀಯ ಹಾಗೂ ಮಾಧ್ಯಮ ಕ್ಷೇತ್ರಗಳ ಧಾವಂತಗಳ ಮಧ್ಯೆ ಆದರ್ಶವನ್ನೇ ಹೊತ್ತಕೊಂಡ ನಾಯಕನ ಕಥಾವಸ್ತು ಪ್ರಸ್ತುತ ಸಮಾಜವನ್ನು ನೈಜವಾಗಿ ಬಿಂಬಿಸುವಲ್ಲಿ ಯಶ್ವಸಿಯಾಗಿದೆ’ ಎಂದರು.<br /> <br /> ಕತೆಗಾರ ಡಾ.ಕೆ.ಸತ್ಯನಾರಾಯಣ, ‘ಸುರೇಶ ಅವರು ಸಂಬಂಧಗಳ ಸಂಕೀರ್ಣತೆ ಹಾಗೂ ಆದರ್ಶಗಳ ಜಟಿಲತೆಯನ್ನು ನವಿರಾದ ಕಥಾ ವಿನ್ಯಾಸದ ಮೂಲಕ ಸೆರೆಹಿಡಿದಿದ್ದಾರೆ’ ಎಂದರು.<br /> <br /> ಚಿಂತಕ ಡಾ.ಬೈರಮಂಗಲ ರಾಮೇಗೌಡ, ‘ಸಾಹಿತ್ಯ ಕ್ಷೇತ್ರದಲ್ಲಿ ಜಾತಿ ಹಾಗೂ ಗುಂಪುಗಾರಿಕೆ ಹೆಚ್ಚಾಗಿರುವುದರಿಂದ ಯೋಗ್ಯ ಕೃತಿಗಳ ಬಗ್ಗೆ ಸಮರ್ಪಕ ವಿಮರ್ಶೆ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಕುತೂಹಲಗಳ ಜತೆಯಲ್ಲಿ ನಿರೂಪಣಾ ಶೈಲಿಯಿಂದಲೇ ಓದುಗನನ್ನು ಹಿಡಿದಿಡುವ ಶಕ್ತಿ ‘ಪ್ರಸ್ಥಾನ’ ಕಾದಂಬರಿಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ತಿಳಿಸಿದರು.<br /> <br /> ಸಿವಿಜಿ ಇಂಡಿಯಾ ಸಂಸ್ಥೆಯು ಉದಯಭಾನು ಕಲಾಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸುರೇಶ ಪಾಟೀಲರ ‘ಪ್ರಸ್ಥಾನ’ ಕಾದಂಬರಿಬಿಡುಗಡೆ ಮಾಡಿ ಮಾತನಾಡಿದರು.<br /> <br /> ‘ನವೋದಯ, ನವ್ಯ ಹಾಗೂ ನವ್ಯೋತ್ತರ ಸೇರಿದಂತೆ ಎಲ್ಲ ಪರಂಪರೆಗಳಿಗೂ ದಕ್ಕುವ ಶ್ರೇಷ್ಠ ಕೃತಿ ಇದಾಗಿದ್ದು, ವಿಮರ್ಶಾ ವಲಯದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಬೇಕು’ ಎಂದು ಹೇಳಿದರು.<br /> <br /> ‘ಸಾಹಿತ್ಯ ಅರಿವಿನ ವಿಸ್ತಾರವನ್ನು ಹೆಚ್ಚಿಸಬೇಕೆ ಅಥವಾ ಮನೋರಂಜನೆ ವಸ್ತುವಾಗಬೇಕೆ ಎಂಬುದು ಇಂದಿಗೂ ಚರ್ಚಿತ ವಿಷಯವೇ. ಆದರೆ ಮನೋರಂಜನೆಯ ಧಾಟಿಯನ್ನು ಬಳಸದೇ, ರೋಚಕ ಶೈಲಿ ಅನುಸರಿಸದೇ ಕುತೂಹಲ ಮೂಡಿಸುವ ಕಥನ ಶೈಲಿಗೆ ಬೆರಗಾಗಿದ್ದೇನೆ’ ಎಂದು ಶ್ಲಾಘಿಸಿದರು.<br /> <br /> ‘ವೈದ್ಯಕೀಯ ಹಾಗೂ ಮಾಧ್ಯಮ ಕ್ಷೇತ್ರಗಳ ಧಾವಂತಗಳ ಮಧ್ಯೆ ಆದರ್ಶವನ್ನೇ ಹೊತ್ತಕೊಂಡ ನಾಯಕನ ಕಥಾವಸ್ತು ಪ್ರಸ್ತುತ ಸಮಾಜವನ್ನು ನೈಜವಾಗಿ ಬಿಂಬಿಸುವಲ್ಲಿ ಯಶ್ವಸಿಯಾಗಿದೆ’ ಎಂದರು.<br /> <br /> ಕತೆಗಾರ ಡಾ.ಕೆ.ಸತ್ಯನಾರಾಯಣ, ‘ಸುರೇಶ ಅವರು ಸಂಬಂಧಗಳ ಸಂಕೀರ್ಣತೆ ಹಾಗೂ ಆದರ್ಶಗಳ ಜಟಿಲತೆಯನ್ನು ನವಿರಾದ ಕಥಾ ವಿನ್ಯಾಸದ ಮೂಲಕ ಸೆರೆಹಿಡಿದಿದ್ದಾರೆ’ ಎಂದರು.<br /> <br /> ಚಿಂತಕ ಡಾ.ಬೈರಮಂಗಲ ರಾಮೇಗೌಡ, ‘ಸಾಹಿತ್ಯ ಕ್ಷೇತ್ರದಲ್ಲಿ ಜಾತಿ ಹಾಗೂ ಗುಂಪುಗಾರಿಕೆ ಹೆಚ್ಚಾಗಿರುವುದರಿಂದ ಯೋಗ್ಯ ಕೃತಿಗಳ ಬಗ್ಗೆ ಸಮರ್ಪಕ ವಿಮರ್ಶೆ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>