<p>ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮ್ಮವರನ್ನು ನೋಡಲು ಬಂದ ಹತ್ತಾರು ಮಂದಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿಚಾರಣೆಯ ಹಿನ್ನೆಲೆಯಲ್ಲಿ ಪರಿತಪಿಸಬೇಕಾಯಿತು. ತಮ್ಮ ಕಡೆಯವರಿಗೆಂದು ಊಟ, ತಿಂಡಿ ಹೊತ್ತು ತಂದಿದ್ದ ಅವರೆಲ್ಲ ಅದನ್ನು ನೀಡಲಾಗದೇ ದಿನವಿಡೀ ಯಾತನೆ ಅನುಭವಿಸಿದರು.<br /> <br /> ಕೇಂದ್ರ ಕಾರಾಗೃಹದ ಎದುರಿನ ಕಟ್ಟಡದಲ್ಲೇ ಜಯಲಲಿತಾ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಇದರಿಂದಾಗಿ ಇಡೀ ದಿನ ಕಾರಾಗೃಹದ ರಸ್ತೆಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಇದು ತಮ್ಮವರನ್ನು ಕಾಣಲು ಬಂದ ಜನಸಾಮಾನ್ಯರಿಗೆ ಕಣ್ಣೀರು ತಂದಿತು.<br /> <br /> ಸುಂಕದಕಟ್ಟೆಯ ಉಮಾ ಎಂಬ ಗರ್ಭಿಣಿ ಅಲ್ಲಿ ಪತಿಯ ಬಿಡುಗಡೆಗಾಗಿ ದಿನವಿಡೀ ಕಾದರು. ಒಂದು ವರ್ಷದಿಂದ ಕಾರಾಗೃಹದಲ್ಲಿರುವ ಪತಿ ರಾಜೇಶ್ ಗುರುವಾರ ಬಿಡುಗಡೆ ಹೊಂದುವವರಿದ್ದರು. ಪತಿಯನ್ನು ಬರಮಾಡಿಕೊಳ್ಳಲು ಅವರು ಬೆಳಿಗ್ಗೆಯೇ ಬಂದಿದ್ದರು.<br /> <br /> ಸಂಜೆಯವರೆಗೂ ಪತಿಯನ್ನು ಭೇಟಿ ಮಾಡಲಾಗದ ಕಾರಣದಿಂದ ತೀವ್ರ ಬೇಸರಗೊಂಡಿದ್ದ ಅವರು, `ವಿಚಾರಣೆ ನಡೆಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಅವರ ವಿಚಾರಣೆಗಾಗಿ ನಮಗೇಕೆ ಶಿಕ್ಷೆ ನೀಡಬೇಕು~ ಎಂದು ಪ್ರಶ್ನಿಸಿದರು.<br /> <br /> ಜೈಲಿನಲ್ಲಿರುವ ಪತಿಗೆ ಊಟ ನೀಡಲೆಂದು ಬಂದಿದ್ದ ಯಲಹಂಕದ ನಿಂಗನಹಳ್ಳಿಯ ರತ್ನಮ್ಮ ಅವರ ಗೋಳು ಕೂಡ ಇದೇ ಆಗಿತ್ತು. ಪತಿ ಮತ್ತು ಸಂಬಂಧಿಗಾಗಿ ಕೋಳಿ ಸಾರು ತಂದಿದ್ದ ಅವರು ಸಂಜೆ ಅದನ್ನು ಹಿಡಿದು ಮನೆಯತ್ತ ಹೆಜ್ಜೆ ಹಾಕಿದರು.<br /> <br /> 22 ವರ್ಷದ ಪುತ್ರ ಜೈಲಿನಿಂದ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ರಾಜಗೋಪಾಲನಗರದ ಕಲಾವತಿ ಎಂಬುವರು ಕೂಡ ಜಯಲಲಿತಾ ವಿಚಾರಣೆಯ `ಬಿಸಿ~ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮ್ಮವರನ್ನು ನೋಡಲು ಬಂದ ಹತ್ತಾರು ಮಂದಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿಚಾರಣೆಯ ಹಿನ್ನೆಲೆಯಲ್ಲಿ ಪರಿತಪಿಸಬೇಕಾಯಿತು. ತಮ್ಮ ಕಡೆಯವರಿಗೆಂದು ಊಟ, ತಿಂಡಿ ಹೊತ್ತು ತಂದಿದ್ದ ಅವರೆಲ್ಲ ಅದನ್ನು ನೀಡಲಾಗದೇ ದಿನವಿಡೀ ಯಾತನೆ ಅನುಭವಿಸಿದರು.<br /> <br /> ಕೇಂದ್ರ ಕಾರಾಗೃಹದ ಎದುರಿನ ಕಟ್ಟಡದಲ್ಲೇ ಜಯಲಲಿತಾ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಇದರಿಂದಾಗಿ ಇಡೀ ದಿನ ಕಾರಾಗೃಹದ ರಸ್ತೆಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಇದು ತಮ್ಮವರನ್ನು ಕಾಣಲು ಬಂದ ಜನಸಾಮಾನ್ಯರಿಗೆ ಕಣ್ಣೀರು ತಂದಿತು.<br /> <br /> ಸುಂಕದಕಟ್ಟೆಯ ಉಮಾ ಎಂಬ ಗರ್ಭಿಣಿ ಅಲ್ಲಿ ಪತಿಯ ಬಿಡುಗಡೆಗಾಗಿ ದಿನವಿಡೀ ಕಾದರು. ಒಂದು ವರ್ಷದಿಂದ ಕಾರಾಗೃಹದಲ್ಲಿರುವ ಪತಿ ರಾಜೇಶ್ ಗುರುವಾರ ಬಿಡುಗಡೆ ಹೊಂದುವವರಿದ್ದರು. ಪತಿಯನ್ನು ಬರಮಾಡಿಕೊಳ್ಳಲು ಅವರು ಬೆಳಿಗ್ಗೆಯೇ ಬಂದಿದ್ದರು.<br /> <br /> ಸಂಜೆಯವರೆಗೂ ಪತಿಯನ್ನು ಭೇಟಿ ಮಾಡಲಾಗದ ಕಾರಣದಿಂದ ತೀವ್ರ ಬೇಸರಗೊಂಡಿದ್ದ ಅವರು, `ವಿಚಾರಣೆ ನಡೆಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಅವರ ವಿಚಾರಣೆಗಾಗಿ ನಮಗೇಕೆ ಶಿಕ್ಷೆ ನೀಡಬೇಕು~ ಎಂದು ಪ್ರಶ್ನಿಸಿದರು.<br /> <br /> ಜೈಲಿನಲ್ಲಿರುವ ಪತಿಗೆ ಊಟ ನೀಡಲೆಂದು ಬಂದಿದ್ದ ಯಲಹಂಕದ ನಿಂಗನಹಳ್ಳಿಯ ರತ್ನಮ್ಮ ಅವರ ಗೋಳು ಕೂಡ ಇದೇ ಆಗಿತ್ತು. ಪತಿ ಮತ್ತು ಸಂಬಂಧಿಗಾಗಿ ಕೋಳಿ ಸಾರು ತಂದಿದ್ದ ಅವರು ಸಂಜೆ ಅದನ್ನು ಹಿಡಿದು ಮನೆಯತ್ತ ಹೆಜ್ಜೆ ಹಾಕಿದರು.<br /> <br /> 22 ವರ್ಷದ ಪುತ್ರ ಜೈಲಿನಿಂದ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ರಾಜಗೋಪಾಲನಗರದ ಕಲಾವತಿ ಎಂಬುವರು ಕೂಡ ಜಯಲಲಿತಾ ವಿಚಾರಣೆಯ `ಬಿಸಿ~ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>