<p><strong>ಬೆಂಗಳೂರು: </strong>ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರು ಶೀಘ್ರಗತಿಯಲ್ಲಿ ಕೋರ್ಟ್ ಕಲಾಪ ನಡೆದು ನ್ಯಾಯ ದೊರೆಯಬೇಕೆಂದು ಶನಿವಾರ ಆಗ್ರಹಿಸಿದರು.<br /> <br /> `ಮಕ್ಕಳು ಸಂಪೂರ್ಣವಾಗಿ ತಂದೆಯ ಸುಪರ್ದಿಯಲ್ಲಿ ಇಲ್ಲದೇ ಇದ್ದರೂ ಆರೋಪ ಎದುರಿಸಿದ ಸಂದರ್ಭದಲ್ಲಿ ಕನಿಷ್ಠ ಮಕ್ಕಳನ್ನು ಭೇಟಿಯಾಗುವ ಅವಕಾಶ ನೀಡಬೇಕು.</p>.<p>ಮಕ್ಕಳ ಪಾಲನೆಯಲ್ಲಿ ತಂದೆಯ ಪಾತ್ರವೂ ಮುಖ್ಯವಿದೆ. ಇಲ್ಲದಿದ್ದರೆ ದೋಷಮುಕ್ತನಾದ ನಂತರ ಮಕ್ಕಳ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಕಾಡುತ್ತದೆ. ಮಕ್ಕಳಿಂದ ದೂರನಾಗಿ ಪರಕೀಯ ಭಾವನೆಯನ್ನು ಎದುರಿಸಬೇಕಾಗುತ್ತದೆ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ಪ್ಯಾರೀಸ್ನ ವಕೀಲರಾದ ಒಲಿವರ್ ಸುರ್, `ತಂದೆಯನ್ನು ಭೇಟಿಯಾಗುವ ಹಕ್ಕು ಮಕ್ಕಳಿಗಿರುತ್ತದೆ. ಆದರೆ ಪಾಸ್ಕಲ್ ಪ್ರಕರಣದಲ್ಲಿ ತಾಯಿಯೇ ತನ್ನ ಮಕ್ಕಳಿಗೆ ಈ ಅವಕಾಶವನ್ನು ನೀಡಿರಲಿಲ್ಲ' ಎಂದು ತಿಳಿಸಿದರು.ಕ್ಲೆಮೆನ್ಸ್ ವಿಟ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಅವರು ಶೀಘ್ರಗತಿಯಲ್ಲಿ ಕೋರ್ಟ್ ಕಲಾಪ ನಡೆದು ನ್ಯಾಯ ದೊರೆಯಬೇಕೆಂದು ಶನಿವಾರ ಆಗ್ರಹಿಸಿದರು.<br /> <br /> `ಮಕ್ಕಳು ಸಂಪೂರ್ಣವಾಗಿ ತಂದೆಯ ಸುಪರ್ದಿಯಲ್ಲಿ ಇಲ್ಲದೇ ಇದ್ದರೂ ಆರೋಪ ಎದುರಿಸಿದ ಸಂದರ್ಭದಲ್ಲಿ ಕನಿಷ್ಠ ಮಕ್ಕಳನ್ನು ಭೇಟಿಯಾಗುವ ಅವಕಾಶ ನೀಡಬೇಕು.</p>.<p>ಮಕ್ಕಳ ಪಾಲನೆಯಲ್ಲಿ ತಂದೆಯ ಪಾತ್ರವೂ ಮುಖ್ಯವಿದೆ. ಇಲ್ಲದಿದ್ದರೆ ದೋಷಮುಕ್ತನಾದ ನಂತರ ಮಕ್ಕಳ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಕಾಡುತ್ತದೆ. ಮಕ್ಕಳಿಂದ ದೂರನಾಗಿ ಪರಕೀಯ ಭಾವನೆಯನ್ನು ಎದುರಿಸಬೇಕಾಗುತ್ತದೆ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ಪ್ಯಾರೀಸ್ನ ವಕೀಲರಾದ ಒಲಿವರ್ ಸುರ್, `ತಂದೆಯನ್ನು ಭೇಟಿಯಾಗುವ ಹಕ್ಕು ಮಕ್ಕಳಿಗಿರುತ್ತದೆ. ಆದರೆ ಪಾಸ್ಕಲ್ ಪ್ರಕರಣದಲ್ಲಿ ತಾಯಿಯೇ ತನ್ನ ಮಕ್ಕಳಿಗೆ ಈ ಅವಕಾಶವನ್ನು ನೀಡಿರಲಿಲ್ಲ' ಎಂದು ತಿಳಿಸಿದರು.ಕ್ಲೆಮೆನ್ಸ್ ವಿಟ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>