ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಣ್ಯ: ಜನೌಷಧಿ ಕೇಂದ್ರ ಪ್ರಾರಂಭ

Last Updated 12 ಫೆಬ್ರುವರಿ 2019, 19:14 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಇಲ್ಲಿನ ಬೈಲಪ್ಪ ಸರ್ಕಲ್ ಬಳಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿದರು.

ಬಳಿಕ ಸದಾನಂದಗೌಡ ಮಾತನಾಡಿ, ‘ಈ ಕೇಂದ್ರದಲ್ಲಿ 805 ವಿವಿಧ ಔಷಧಗಳಿವೆ. ಅತಿ ಕಡಿಮೆ ಎಂದರೆ ಶೇ 10 ರಿಂದ ಶೇ 80ರಷ್ಟು ರಿಯಾಯಿತಿ ದರದಲ್ಲಿ ಸುಲಭವಾಗಿ ಸಿಗಲಿವೆ. ಔಷಧಿಯ ಗುಣಮಟ್ಟವನ್ನು ತನಿಖೆಯಿಂದ ಪರಿಶೀಲನೆ ಮಾಡಲಾಗಿದೆ. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದರು.

ಎಸ್.ಮುನಿರಾಜು ಮಾತನಾಡಿ 'ದಾಸರಹಳ್ಳಿಗೆ ಇದು ಮೊದಲನೇ ಜನೌಷಧಿ ಕೇಂದ್ರವಾಗಿದೆ. ಈ ಭಾಗದಲ್ಲಿ ಕಾರ್ಮಿಕರು ಹಾಗೂ ಹಿಂದುಳಿದ ಬಡಜನರು ಸಾಕಷ್ಟು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹತ್ತಾರು ಕಡೆ ಕೇಂದ್ರಗಳನ್ನು ತೆರೆಯಲಾಗುತ್ತದೆ' ಎಂದರು.

ಪಾಲಿಕೆ ಸದಸ್ಯರಾದ ಎನ್.ಲೋಕೇಶ್, ಉಮಾದೇವಿ ನಾಗರಾಜ್, ಯುವಮೋರ್ಚಾಅಧ್ಯಕ್ಷ ಸತೀಶ್, ಬಿಜೆಪಿ ಮುಖಂಡರಾದ ಎಂ.ಸಿದ್ದರಾಜು, ಬಿ.ಎಂ.ನಾರಾಯಣ್, ಬಿ.ಟಿ.ಶ್ರೀನಿವಾಸ್, ಆರ್.ಸಿ.ದೊರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT