<p><strong>ಬೆಂಗಳೂರು:</strong> `ತತ್ಕಾಲ್~ ಅರ್ಜಿಗೆ ಐಎಫ್ಎಸ್ ಅಧಿಕಾರಿ ಸಹಿಯನ್ನು ನಕಲು ಮಾಡಿ (ಫೋರ್ಜರಿ) ಪಾಸ್ಪೋರ್ಟ್ ಮಾಡಿಸಿ ಕೊಡುತ್ತಿದ್ದ ಆರೋಪದ ಮೇಲೆ ವಸಂತನಗರದ ಸುಭಾಷ್ (37) ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.</p>.<p>ವಕೀಲನಾಗಿರುವ ಸುಭಾಷ್, ತತ್ಕಾಲ್ ಅರ್ಜಿಗೆ ಐಎಫ್ಎಸ್ ಅಧಿಕಾರಿ ಶ್ರೀನಿವಾಸುಲು ಅವರ ಸಹಿಯನ್ನು ನಕಲು ಮಾಡಿ ಸುಮಾರು 28 ಮಂದಿಗೆ ಪಾಸ್ಪೋರ್ಟ್ ಮಾಡಿಸಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> ಆತ, ಅದೇ ರೀತಿ ಇತ್ತೀಚೆಗೆ ವ್ಯಕ್ತಿಯೊಬ್ಬರ ತತ್ಕಾಲ್ ಅರ್ಜಿಗೆ ನಕಲು ಸಹಿ ಮಾಡಿದ್ದ. ಆದರೆ, ಶ್ರೀನಿವಾಸುಲು ಅವರು ಯಾವ `ಬ್ಯಾಚ್~ನ ಅಧಿಕಾರಿ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕೋರಮಂಗಲದ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳು ಠಾಣೆಗೆ ದೂರು ನೀಡಿದ್ದರು.</p>.<p>ಈ ದೂರು ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.</p>.<p>ಆರೋಪಿಯು ಅಖಿಲ್ ಮತ್ತು ನದೀಮ್ ಎಂಬ ಮಧ್ಯವರ್ತಿಗಳ ನೆರವಿನಿಂದ ಈ ಕೃತ್ಯ ಎಸಗುತ್ತಿದ್ದ. <br /> ಈ ವಂಚನೆ ಕೃತ್ಯದಿಂದ ಬಂದ ಹಣವನ್ನು ಈ ಮೂರೂ ಮಂದಿ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ತತ್ಕಾಲ್~ ಅರ್ಜಿಗೆ ಐಎಫ್ಎಸ್ ಅಧಿಕಾರಿ ಸಹಿಯನ್ನು ನಕಲು ಮಾಡಿ (ಫೋರ್ಜರಿ) ಪಾಸ್ಪೋರ್ಟ್ ಮಾಡಿಸಿ ಕೊಡುತ್ತಿದ್ದ ಆರೋಪದ ಮೇಲೆ ವಸಂತನಗರದ ಸುಭಾಷ್ (37) ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.</p>.<p>ವಕೀಲನಾಗಿರುವ ಸುಭಾಷ್, ತತ್ಕಾಲ್ ಅರ್ಜಿಗೆ ಐಎಫ್ಎಸ್ ಅಧಿಕಾರಿ ಶ್ರೀನಿವಾಸುಲು ಅವರ ಸಹಿಯನ್ನು ನಕಲು ಮಾಡಿ ಸುಮಾರು 28 ಮಂದಿಗೆ ಪಾಸ್ಪೋರ್ಟ್ ಮಾಡಿಸಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.<br /> ಆತ, ಅದೇ ರೀತಿ ಇತ್ತೀಚೆಗೆ ವ್ಯಕ್ತಿಯೊಬ್ಬರ ತತ್ಕಾಲ್ ಅರ್ಜಿಗೆ ನಕಲು ಸಹಿ ಮಾಡಿದ್ದ. ಆದರೆ, ಶ್ರೀನಿವಾಸುಲು ಅವರು ಯಾವ `ಬ್ಯಾಚ್~ನ ಅಧಿಕಾರಿ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕೋರಮಂಗಲದ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳು ಠಾಣೆಗೆ ದೂರು ನೀಡಿದ್ದರು.</p>.<p>ಈ ದೂರು ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.</p>.<p>ಆರೋಪಿಯು ಅಖಿಲ್ ಮತ್ತು ನದೀಮ್ ಎಂಬ ಮಧ್ಯವರ್ತಿಗಳ ನೆರವಿನಿಂದ ಈ ಕೃತ್ಯ ಎಸಗುತ್ತಿದ್ದ. <br /> ಈ ವಂಚನೆ ಕೃತ್ಯದಿಂದ ಬಂದ ಹಣವನ್ನು ಈ ಮೂರೂ ಮಂದಿ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>