<p><strong>ಬೆಂಗಳೂರು:</strong> ಪಿ.ಡಿ.ದಿನಕರನ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ 2009ರಲ್ಲಿ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಸಿಬ್ಬಂದಿಗೆ ನೀಡಿರುವ ಬಡ್ತಿಯು ಸರಿಯೇ, ಅಲ್ಲವೇ ಎಂಬ ಬಗ್ಗೆ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ನಿಲುವು ತಳೆದಿದ್ದಾರೆ.<br /> <br /> ಸೆಕ್ಷನ್ ಆಫೀಸರ್, ರಿಜಿಸ್ಟ್ರಾರ್, ಪ್ರಥಮ- ದ್ವಿತೀಯ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹೀಗೆ ವಿವಿಧ ಶ್ರೇಣಿಗಳ ಸಿಬ್ಬಂದಿಯ ಬಡ್ತಿಗೆ ಸಂಬಂಧಿಸಿದಂತೆ ಹಿಂದೆ ಇದ್ದ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಗೆ ಮಾಡಿ ತಿದ್ದುಪಡಿ ಮಾಡಿರುವ ಪ್ರಕರಣ ಇದಾಗಿದೆ.<br /> <br /> ಬಡ್ತಿಯು ಸರಿಯಾಗಿ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ಹಾಗೂ ಬಡ್ತಿ ಪಡೆದ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಗೆ ನ್ಯಾಯಮೂರ್ತಿಗಳಾದ ಆನಂದ ಬೈರಾರೆಡ್ಡಿ ಹಾಗೂ ಸುಭಾಷ್ ಬಿ. ಅಡಿ ಅವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<br /> <br /> ಇದರಿಂದ ಪ್ರಕರಣದ ವಿಚಾರಣೆಯನ್ನು ಮೂರನೆಯ ನ್ಯಾಯಮೂರ್ತಿಗಳು ನಡೆಸಬೇಕಿದೆ. <br /> ಅವರು ನೀಡುವ ತೀರ್ಪು ನ್ಯಾಯಾಲಯದ ನೂರಾರು ಸಿಬ್ಬಂದಿಯ `ಭವಿಷ್ಯ~ವನ್ನು ನಿರ್ಧರಿಸಲಿದೆ.<br /> <br /> <strong>ಕೋರ್ಟ್ ಹೇಳಿದ್ದೇನು?</strong><br /> `ಮುಖ್ಯ ನ್ಯಾಯಮೂರ್ತಿಗಳಿಗೆ ಸಂವಿಧಾನ 229ನೇ ವಿಧಿಯ ಪ್ರಕಾರ ನಿಯಮಕ್ಕೆ ತಿದ್ದುಪಡಿ ತಂದು ಬಡ್ತಿಗೆ ಹೆಚ್ಚಿನ ಶೈಕ್ಷಣಿಕ ಅರ್ಹತೆ ಗೊತ್ತುಮಾಡುವ ಅಧಿಕಾರ ಇದೆ. ಇದಕ್ಕೆ ರಾಜ್ಯಪಾಲರ ಅನುಮತಿ ಅಗತ್ಯವೂ ಇಲ್ಲ~ ಎಂದು ಇಬ್ಬರೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.<br /> <br /> ಆದರೆ ನ್ಯಾ. ಬೈರಾರೆಡ್ಡಿ ಅವರು, `ಈ ತಿದ್ದುಪಡಿಯನ್ನು ಹಾಲಿ ಇರುವ ಸಿಬ್ಬಂದಿಗೆ ಅನ್ವಯ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ 2009ರಲ್ಲಿ ತಿದ್ದುಪಡಿ ಬರುವ ಮುನ್ನ ತೆರವುಗೊಂಡಿದ್ದ ಸ್ಥಾನಗಳಿಗೆ ನೀಡಲಾದ ಬಡ್ತಿಯನ್ನು ರದ್ದುಗೊಳಿಸಬೇಕು. ನಿಯಮಾನುಸಾರ ಬಡ್ತಿ ನೀಡುವವರೆಗೆ ಈಗ ಬಡ್ತಿ ಹೊಂದಿರುವ ಸಿಬ್ಬಂದಿ ತಮ್ಮ ಹುದ್ದೆಯಲ್ಲಿ ಉಸ್ತುವಾರಿಯಾಗಿ ಮುಂದುವರಿಯಬೇಕು~ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ<br /> <br /> ಆದರೆ ನ್ಯಾ.ಅಡಿ ಅವರು, `ತಿದ್ದುಪಡಿ ಬರುವ ಪೂರ್ವದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಭರ್ತಿ ಮಾಡುವಾಗ ತಿದ್ದುಪಡಿ ನಂತರದ ನಿಯಮ ಅನ್ವಯ ಮಾಡಿರುವುದು ಸರಿಯಲ್ಲ. ಹಾಗೆಯೇ, ತಿದ್ದುಪಡಿ ನಂತರದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಹಳೆಯ ನಿಯಮ ಅನ್ವಯ ಮಾಡಿರುವುದು ಕಾನೂನುಬಾಹಿರ. ಇದನ್ನು ಮೀರಿ ಬಡ್ತಿ ಪಡೆದಿರುವ ಸಿಬ್ಬಂದಿಯ ಬಡ್ತಿಯು ರದ್ದುಗೊಳ್ಳಬೇಕು~ ಎಂದಿದ್ದಾರೆ. ಮೂರನೆಯ ನ್ಯಾಯಮೂರ್ತಿಗಳು, ಈ ಎರಡು ತೀರ್ಪಿನಲ್ಲಿ ಒಂದನ್ನು ಎತ್ತಿಹಿಡಿಯಬೇಕಿದೆ.<br /> <br /> <strong>ಏನಿದು ವಿವಾದ:</strong>ಹೈಕೋರ್ಟ್ ಕಾಯ್ದೆಯ ಕೆಲವು ನಿಯಮಗಳಿಗೆ 2009ರಲ್ಲಿ ತಿದ್ದುಪಡಿ ತಂದಿದ್ದ ನ್ಯಾ. ದಿನಕರನ್ ಆ ತಿದ್ದುಪಡಿ ಅನ್ವಯ ಹಲವರಿಗೆ ಬಡ್ತಿ ನೀಡಿದ್ದರು.ನಿಯಮಾನುಸಾರ ಬಡ್ತಿಗೆ ಅರ್ಹರಾದವರನ್ನು ಕಡೆಗಣಿಸಿ, ತಮ್ಮ ಆಪ್ತರು ಎಂಬ ಕಾರಣಕ್ಕೆ ಕೆಲವು ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ಬಡ್ತಿ ವಂಚಿತ ಸಿಬ್ಬಂದಿ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಈ ಸಿಬ್ಬಂದಿ ಪರವಾಗಿ ಪೀಠ ಆದೇಶ ಹೊರಡಿಸಿತ್ತು. <br /> ಈ ಆದೇಶವನ್ನು ಈಗ ಮೇಲ್ಮನವಿ ಮೂಲಕ ಪ್ರಶ್ನಿಸಲಾಗಿದೆ.</p>.<p><strong>ನ್ಯಾಯಮೂರ್ತಿಗಳ ವಸತಿಗಾಗಿ ಜಾಗ</strong><br /> ಹೈಕೋರ್ಟ್ ನ್ಯಾಯಮೂರ್ತಿಗಳ ವಸತಿಗಾಗಿ ನಾಲ್ಕು ಕಡೆಗಳಲ್ಲಿ ಜಾಗ ಗೊತ್ತು ಮಾಡಿರುವ ಸರ್ಕಾರ, ಈ ಮಾಹಿತಿಯನ್ನು ಬುಧವಾರ ನ್ಯಾಯಾಲಯದ ಮುಂದಿಟ್ಟಿದೆ.<br /> <br /> ಕೆ.ಆರ್.ಪುರ ಹೋಬಳಿಯ ಬೈರತಿಖಾನೆ ಗ್ರಾಮದ ಅರ್ಕಾವತಿ ಲೇಔಟ್ ಬಳಿ 8 ಎಕರೆ (ಇದು ಹೈಕೋರ್ಟ್ನಿಂದ 14 ಕಿ.ಮೀ. ಅಂತರದಲ್ಲಿದೆ); ಭೂಪಸಂದ್ರದ ಬಳಿ 6.38 ಎಕರೆ (9.5 ಕಿ.ಮೀ. ಅಂತರದಲ್ಲಿದೆ); ನಾಗಾವರದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಹಾಗೂ ಹೆಣ್ಣೂರು- ಬಾಣಸವಾಡಿ 3ನೇ ಹಂತದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಜಾಗ ಗೊತ್ತು ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು. ಈ ಪೈಕಿ ಅರ್ಕಾವತಿ ಲೇಔಟ್ ಬಳಿ ಜಾಗ ಪ್ರಶಸ್ತವಾಗಿದ್ದು, ಅಲ್ಲಿಯೇ ವಸತಿ ನಿರ್ಮಾಣ ಮಾಡಬಹುದು ಎಂಬ ಮಾಹಿತಿಯನ್ನು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಪೀಠಕ್ಕೆ ನೀಡಿದರು.<br /> <br /> ಎಚ್ಎಸ್ಆರ್ ಲೇಔಟ್, ಹೆಬ್ಬಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಈ ಹಿಂದೆ ಗೊತ್ತು ಮಾಡಿದ್ದ ಜಾಗಗಳು ಒಂದಿಲ್ಲೊಂದು ಕಾರಣದಿಂದ ವಿವಾದಕ್ಕೆ ಒಳಗಾದ ಹಿನ್ನೆಲೆಯಲ್ಲಿ ಈ ನಾಲ್ಕು ಜಾಗಗಳನ್ನು ಈಗ ಗೊತ್ತು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪಿ.ಡಿ.ದಿನಕರನ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ 2009ರಲ್ಲಿ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಸಿಬ್ಬಂದಿಗೆ ನೀಡಿರುವ ಬಡ್ತಿಯು ಸರಿಯೇ, ಅಲ್ಲವೇ ಎಂಬ ಬಗ್ಗೆ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ನಿಲುವು ತಳೆದಿದ್ದಾರೆ.<br /> <br /> ಸೆಕ್ಷನ್ ಆಫೀಸರ್, ರಿಜಿಸ್ಟ್ರಾರ್, ಪ್ರಥಮ- ದ್ವಿತೀಯ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹೀಗೆ ವಿವಿಧ ಶ್ರೇಣಿಗಳ ಸಿಬ್ಬಂದಿಯ ಬಡ್ತಿಗೆ ಸಂಬಂಧಿಸಿದಂತೆ ಹಿಂದೆ ಇದ್ದ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಗೆ ಮಾಡಿ ತಿದ್ದುಪಡಿ ಮಾಡಿರುವ ಪ್ರಕರಣ ಇದಾಗಿದೆ.<br /> <br /> ಬಡ್ತಿಯು ಸರಿಯಾಗಿ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ಹಾಗೂ ಬಡ್ತಿ ಪಡೆದ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಗೆ ನ್ಯಾಯಮೂರ್ತಿಗಳಾದ ಆನಂದ ಬೈರಾರೆಡ್ಡಿ ಹಾಗೂ ಸುಭಾಷ್ ಬಿ. ಅಡಿ ಅವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<br /> <br /> ಇದರಿಂದ ಪ್ರಕರಣದ ವಿಚಾರಣೆಯನ್ನು ಮೂರನೆಯ ನ್ಯಾಯಮೂರ್ತಿಗಳು ನಡೆಸಬೇಕಿದೆ. <br /> ಅವರು ನೀಡುವ ತೀರ್ಪು ನ್ಯಾಯಾಲಯದ ನೂರಾರು ಸಿಬ್ಬಂದಿಯ `ಭವಿಷ್ಯ~ವನ್ನು ನಿರ್ಧರಿಸಲಿದೆ.<br /> <br /> <strong>ಕೋರ್ಟ್ ಹೇಳಿದ್ದೇನು?</strong><br /> `ಮುಖ್ಯ ನ್ಯಾಯಮೂರ್ತಿಗಳಿಗೆ ಸಂವಿಧಾನ 229ನೇ ವಿಧಿಯ ಪ್ರಕಾರ ನಿಯಮಕ್ಕೆ ತಿದ್ದುಪಡಿ ತಂದು ಬಡ್ತಿಗೆ ಹೆಚ್ಚಿನ ಶೈಕ್ಷಣಿಕ ಅರ್ಹತೆ ಗೊತ್ತುಮಾಡುವ ಅಧಿಕಾರ ಇದೆ. ಇದಕ್ಕೆ ರಾಜ್ಯಪಾಲರ ಅನುಮತಿ ಅಗತ್ಯವೂ ಇಲ್ಲ~ ಎಂದು ಇಬ್ಬರೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.<br /> <br /> ಆದರೆ ನ್ಯಾ. ಬೈರಾರೆಡ್ಡಿ ಅವರು, `ಈ ತಿದ್ದುಪಡಿಯನ್ನು ಹಾಲಿ ಇರುವ ಸಿಬ್ಬಂದಿಗೆ ಅನ್ವಯ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ 2009ರಲ್ಲಿ ತಿದ್ದುಪಡಿ ಬರುವ ಮುನ್ನ ತೆರವುಗೊಂಡಿದ್ದ ಸ್ಥಾನಗಳಿಗೆ ನೀಡಲಾದ ಬಡ್ತಿಯನ್ನು ರದ್ದುಗೊಳಿಸಬೇಕು. ನಿಯಮಾನುಸಾರ ಬಡ್ತಿ ನೀಡುವವರೆಗೆ ಈಗ ಬಡ್ತಿ ಹೊಂದಿರುವ ಸಿಬ್ಬಂದಿ ತಮ್ಮ ಹುದ್ದೆಯಲ್ಲಿ ಉಸ್ತುವಾರಿಯಾಗಿ ಮುಂದುವರಿಯಬೇಕು~ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ<br /> <br /> ಆದರೆ ನ್ಯಾ.ಅಡಿ ಅವರು, `ತಿದ್ದುಪಡಿ ಬರುವ ಪೂರ್ವದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಭರ್ತಿ ಮಾಡುವಾಗ ತಿದ್ದುಪಡಿ ನಂತರದ ನಿಯಮ ಅನ್ವಯ ಮಾಡಿರುವುದು ಸರಿಯಲ್ಲ. ಹಾಗೆಯೇ, ತಿದ್ದುಪಡಿ ನಂತರದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಹಳೆಯ ನಿಯಮ ಅನ್ವಯ ಮಾಡಿರುವುದು ಕಾನೂನುಬಾಹಿರ. ಇದನ್ನು ಮೀರಿ ಬಡ್ತಿ ಪಡೆದಿರುವ ಸಿಬ್ಬಂದಿಯ ಬಡ್ತಿಯು ರದ್ದುಗೊಳ್ಳಬೇಕು~ ಎಂದಿದ್ದಾರೆ. ಮೂರನೆಯ ನ್ಯಾಯಮೂರ್ತಿಗಳು, ಈ ಎರಡು ತೀರ್ಪಿನಲ್ಲಿ ಒಂದನ್ನು ಎತ್ತಿಹಿಡಿಯಬೇಕಿದೆ.<br /> <br /> <strong>ಏನಿದು ವಿವಾದ:</strong>ಹೈಕೋರ್ಟ್ ಕಾಯ್ದೆಯ ಕೆಲವು ನಿಯಮಗಳಿಗೆ 2009ರಲ್ಲಿ ತಿದ್ದುಪಡಿ ತಂದಿದ್ದ ನ್ಯಾ. ದಿನಕರನ್ ಆ ತಿದ್ದುಪಡಿ ಅನ್ವಯ ಹಲವರಿಗೆ ಬಡ್ತಿ ನೀಡಿದ್ದರು.ನಿಯಮಾನುಸಾರ ಬಡ್ತಿಗೆ ಅರ್ಹರಾದವರನ್ನು ಕಡೆಗಣಿಸಿ, ತಮ್ಮ ಆಪ್ತರು ಎಂಬ ಕಾರಣಕ್ಕೆ ಕೆಲವು ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ಬಡ್ತಿ ವಂಚಿತ ಸಿಬ್ಬಂದಿ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಈ ಸಿಬ್ಬಂದಿ ಪರವಾಗಿ ಪೀಠ ಆದೇಶ ಹೊರಡಿಸಿತ್ತು. <br /> ಈ ಆದೇಶವನ್ನು ಈಗ ಮೇಲ್ಮನವಿ ಮೂಲಕ ಪ್ರಶ್ನಿಸಲಾಗಿದೆ.</p>.<p><strong>ನ್ಯಾಯಮೂರ್ತಿಗಳ ವಸತಿಗಾಗಿ ಜಾಗ</strong><br /> ಹೈಕೋರ್ಟ್ ನ್ಯಾಯಮೂರ್ತಿಗಳ ವಸತಿಗಾಗಿ ನಾಲ್ಕು ಕಡೆಗಳಲ್ಲಿ ಜಾಗ ಗೊತ್ತು ಮಾಡಿರುವ ಸರ್ಕಾರ, ಈ ಮಾಹಿತಿಯನ್ನು ಬುಧವಾರ ನ್ಯಾಯಾಲಯದ ಮುಂದಿಟ್ಟಿದೆ.<br /> <br /> ಕೆ.ಆರ್.ಪುರ ಹೋಬಳಿಯ ಬೈರತಿಖಾನೆ ಗ್ರಾಮದ ಅರ್ಕಾವತಿ ಲೇಔಟ್ ಬಳಿ 8 ಎಕರೆ (ಇದು ಹೈಕೋರ್ಟ್ನಿಂದ 14 ಕಿ.ಮೀ. ಅಂತರದಲ್ಲಿದೆ); ಭೂಪಸಂದ್ರದ ಬಳಿ 6.38 ಎಕರೆ (9.5 ಕಿ.ಮೀ. ಅಂತರದಲ್ಲಿದೆ); ನಾಗಾವರದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಹಾಗೂ ಹೆಣ್ಣೂರು- ಬಾಣಸವಾಡಿ 3ನೇ ಹಂತದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಜಾಗ ಗೊತ್ತು ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು. ಈ ಪೈಕಿ ಅರ್ಕಾವತಿ ಲೇಔಟ್ ಬಳಿ ಜಾಗ ಪ್ರಶಸ್ತವಾಗಿದ್ದು, ಅಲ್ಲಿಯೇ ವಸತಿ ನಿರ್ಮಾಣ ಮಾಡಬಹುದು ಎಂಬ ಮಾಹಿತಿಯನ್ನು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಪೀಠಕ್ಕೆ ನೀಡಿದರು.<br /> <br /> ಎಚ್ಎಸ್ಆರ್ ಲೇಔಟ್, ಹೆಬ್ಬಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಈ ಹಿಂದೆ ಗೊತ್ತು ಮಾಡಿದ್ದ ಜಾಗಗಳು ಒಂದಿಲ್ಲೊಂದು ಕಾರಣದಿಂದ ವಿವಾದಕ್ಕೆ ಒಳಗಾದ ಹಿನ್ನೆಲೆಯಲ್ಲಿ ಈ ನಾಲ್ಕು ಜಾಗಗಳನ್ನು ಈಗ ಗೊತ್ತು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>