<p><strong>ಬೆಂಗಳೂರು: </strong>`ಉದ್ಯಮ ಕ್ಷೇತ್ರದಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕವೇ ಭವಿಷ್ಯವಾಗಲಿದ್ದು, ಹೊಸ ಭರವಸೆ ಮೂಡಿಸಲಿದೆ' ಎಂದು ಪ್ರಧಾನಿ ಮೂಲಸೌಕರ್ಯಗಳ ಸಲಹೆಗಾರ ಸ್ಯಾಮ್ ಪಿತ್ರೋಡ ತಿಳಿಸಿದರು.<br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಂಥನ್'- ಉದ್ಯಮ ಯೋಜನೆಯ ಅವಾರ್ಡ್-2013' ಕಾರ್ಯಕ್ರಮದಲ್ಲಿ `ಸ್ಕೈಪ್' ತಂತ್ರಜ್ಞಾನದ ಮೂಲಕ ಸಂವಾದ ನಡೆಸಿದರು.<br /> <br /> `ದೇಶದಲ್ಲಿ 90 ಕೋಟಿಗಿಂತಲೂ ಅಧಿಕ ಮಂದಿ ಮೊಬೈಲ್ ಪೋನ್ಗಳ ಬಳಕೆದಾರರಿದ್ದಾರೆ. ಮುಂದೆ ಬ್ರಾಡ್ಬ್ಯಾಂಡ್ ಕೂಡ ಇದೇ ಮಾದರಿಯಲ್ಲಿ ಜನರನ್ನು ತಲುಪಲಿದೆ. ಇದರಿಂದ ಉದ್ಯಮದ ಸ್ವರೂಪ ಹಾಗೂ ಮಾರುಕಟ್ಟೆಯ ವ್ಯವಸ್ಥೆ ಬದಲಾಗಲಿದೆ' ಎಂದರು.</p>.<p>`ಬ್ರಾಡ್ಬ್ಯಾಂಡ್ ಸಂಪರ್ಕ ಕ್ರಾಂತಿಯಿಂದಾಗಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ವ್ಯಾಪ್ತಿ ಇನ್ನಷ್ಟು ಹಿಗ್ಗಲಿದೆ. ಯುವಸಮೂಹದ ಸಂಖ್ಯೆ ಹೆಚ್ಚಿರುವ ಈ ದೇಶದಲ್ಲಿ ಹೊಸ ವಿನ್ಯಾಸದ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯ ಎದ್ದು ಕಾಣುತ್ತಿದೆ' ಎಂದರು.<br /> <br /> `ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಿದೆ. ಅದರಲ್ಲೂ ಬೆಂಗಳೂರು ಮಹಾನಗರ ತಂತ್ರಜ್ಞಾನ ಕ್ಷೇತ್ರಕ್ಕೆ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಆದರೆ, ವಾಹನ ದಟ್ಟಣೆಯಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ತೊಡೆದುಹಾಕುವತ್ತ ಚಿಂತನೆ ನಡೆಯಬೇಕು' ಎಂದು ಪ್ರತಿಕ್ರಿಯಿಸಿದರು.<br /> <br /> `ತರಗತಿಗಳಲ್ಲಿ ಕುಳಿತು ಕೇವಲ ಪಠ್ಯವನ್ನು ಅರಗಿಸಿಕೊಳ್ಳುವುದರ ಜತೆಯಲ್ಲಿ ಪ್ರಾಯೋಗಿಕ ಹಂತವನ್ನು ತಲುಪಬೇಕು. ಜೀವನದಲ್ಲಿ ಸುಖಾಸುಮ್ಮನೆ ತಪ್ಪುಗಳನ್ನು ಮಾಡುತ್ತಲೇ ಕಲಿಕೆ ಆರಂಭಿಸಿ. ಗಳಿಸಿರುವ ಪದವಿಯ ವಿಷಯದಲ್ಲೇ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಸಾಮಾನ್ಯ ತತ್ವ ಪಕ್ಕಕ್ಕಿಟ್ಟು ವಿಭಿನ್ನವಾಗಿ ಚಿಂತಿಸಿ' ಎಂದು ಸಲಹೆ ನೀಡಿದರು.<br /> <br /> `ಈಗಾಗಲೇ ಕೇಂದ್ರದ ಇನ್ನೊವೇಟಿವ್ ಕಾನ್ಸುಲೇಟ್ ತಾಂತ್ರಿಕ ಹೊಸತನವನ್ನು ಉತ್ತೇಜಿಸುವ ಸಲುವಾಗಿ 25ಸಾವಿರಕ್ಕೂ ಅಧಿಕ ಶಾಲೆಗಳನ್ನು ಆರಿಸಿಕೊಂಡಿದ್ದು, ಸಾಮಾನ್ಯ ಮಕ್ಕಳಲ್ಲಿರುವ ಅಗಾಧ ಪ್ರತಿಭೆಯನ್ನು ಹೊರತರುವತ್ತ ಹೆಜ್ಜೆ ಇಟ್ಟಿದೆ. ರಾಜ್ಯದ ಕಾನ್ಸುಲೇಟ್ ಕೂಡ ಈ ಮಾದರಿಯನ್ನು ಅನುಸರಿಸಲಿ' ಎಂದು ಆಶಿಸಿದರು.<br /> <br /> ಗೃಹ ಸಚಿವ ಕೆ.ಜೆ.ಜಾರ್ಜ್, `ವಿದ್ಯಾರ್ಥಿ ಸಮೂಹವು ತಂತ್ರಜ್ಞಾನ ಬಳಸಿಕೊಂಡು ಹೊಸತನ್ನು ಸಾಧಿಸುವ ಪ್ರಕ್ರಿಯೆಗೆ ಎಫ್ಕೆಸಿಸಿಐ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.<br /> <br /> ಮಂಥನ್ನಲ್ಲಿ ಅಂತಿಮ ಸುತ್ತಿನಲ್ಲಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡಾ.ಜಿ.ಗೌತಮ್ ಮತ್ತು ಡಾ.ಮಹೇಶ್ ಕಡಗಿ ಅವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ ನೀಡಲಾಯಿತು.</p>.<p>ಶಿವಮೊಗ್ಗದ ಜವಾಹರ್ಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜಿನ ಸೈಯದ್ ಸಲೀಂ, ಡಿ.ಎಸ್, ವಿನಯ್ ಅವರಿಗೆ 30 ಸಾವಿರ (ದ್ವಿತೀಯ), ಅದೇ ಕಾಲೇಜಿನ ಎಸ್.ವಿ. ಕಾರ್ತಿಕ್ ಮತ್ತು ವಿ.ಆರ್.ನವೀನ್ ಅವರಿಗೆ 20 ಸಾವಿರ (ತೃತೀಯ) ನೀಡಲಾಯಿತು. </p>.<p>ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ರೋಹಿತ್ ಕಶ್ಯಪ್, ಸಂಧ್ಯಾ ರಾಮ್ ಅವರಿಗೆ ಸಮಧಾನಕಾರ ಬಹುಮಾನ ನೀಡಲಾಯಿತು.<br /> ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಸಡಗೋಪನ್, ಮಹಾಸಂಸ್ಥೆಯ ಅಧ್ಯಕ್ಷ ಕೆ.ಶಿವಷಣ್ಮುಗಂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಉದ್ಯಮ ಕ್ಷೇತ್ರದಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕವೇ ಭವಿಷ್ಯವಾಗಲಿದ್ದು, ಹೊಸ ಭರವಸೆ ಮೂಡಿಸಲಿದೆ' ಎಂದು ಪ್ರಧಾನಿ ಮೂಲಸೌಕರ್ಯಗಳ ಸಲಹೆಗಾರ ಸ್ಯಾಮ್ ಪಿತ್ರೋಡ ತಿಳಿಸಿದರು.<br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಂಥನ್'- ಉದ್ಯಮ ಯೋಜನೆಯ ಅವಾರ್ಡ್-2013' ಕಾರ್ಯಕ್ರಮದಲ್ಲಿ `ಸ್ಕೈಪ್' ತಂತ್ರಜ್ಞಾನದ ಮೂಲಕ ಸಂವಾದ ನಡೆಸಿದರು.<br /> <br /> `ದೇಶದಲ್ಲಿ 90 ಕೋಟಿಗಿಂತಲೂ ಅಧಿಕ ಮಂದಿ ಮೊಬೈಲ್ ಪೋನ್ಗಳ ಬಳಕೆದಾರರಿದ್ದಾರೆ. ಮುಂದೆ ಬ್ರಾಡ್ಬ್ಯಾಂಡ್ ಕೂಡ ಇದೇ ಮಾದರಿಯಲ್ಲಿ ಜನರನ್ನು ತಲುಪಲಿದೆ. ಇದರಿಂದ ಉದ್ಯಮದ ಸ್ವರೂಪ ಹಾಗೂ ಮಾರುಕಟ್ಟೆಯ ವ್ಯವಸ್ಥೆ ಬದಲಾಗಲಿದೆ' ಎಂದರು.</p>.<p>`ಬ್ರಾಡ್ಬ್ಯಾಂಡ್ ಸಂಪರ್ಕ ಕ್ರಾಂತಿಯಿಂದಾಗಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ವ್ಯಾಪ್ತಿ ಇನ್ನಷ್ಟು ಹಿಗ್ಗಲಿದೆ. ಯುವಸಮೂಹದ ಸಂಖ್ಯೆ ಹೆಚ್ಚಿರುವ ಈ ದೇಶದಲ್ಲಿ ಹೊಸ ವಿನ್ಯಾಸದ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯ ಎದ್ದು ಕಾಣುತ್ತಿದೆ' ಎಂದರು.<br /> <br /> `ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಿದೆ. ಅದರಲ್ಲೂ ಬೆಂಗಳೂರು ಮಹಾನಗರ ತಂತ್ರಜ್ಞಾನ ಕ್ಷೇತ್ರಕ್ಕೆ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಆದರೆ, ವಾಹನ ದಟ್ಟಣೆಯಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ತೊಡೆದುಹಾಕುವತ್ತ ಚಿಂತನೆ ನಡೆಯಬೇಕು' ಎಂದು ಪ್ರತಿಕ್ರಿಯಿಸಿದರು.<br /> <br /> `ತರಗತಿಗಳಲ್ಲಿ ಕುಳಿತು ಕೇವಲ ಪಠ್ಯವನ್ನು ಅರಗಿಸಿಕೊಳ್ಳುವುದರ ಜತೆಯಲ್ಲಿ ಪ್ರಾಯೋಗಿಕ ಹಂತವನ್ನು ತಲುಪಬೇಕು. ಜೀವನದಲ್ಲಿ ಸುಖಾಸುಮ್ಮನೆ ತಪ್ಪುಗಳನ್ನು ಮಾಡುತ್ತಲೇ ಕಲಿಕೆ ಆರಂಭಿಸಿ. ಗಳಿಸಿರುವ ಪದವಿಯ ವಿಷಯದಲ್ಲೇ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಸಾಮಾನ್ಯ ತತ್ವ ಪಕ್ಕಕ್ಕಿಟ್ಟು ವಿಭಿನ್ನವಾಗಿ ಚಿಂತಿಸಿ' ಎಂದು ಸಲಹೆ ನೀಡಿದರು.<br /> <br /> `ಈಗಾಗಲೇ ಕೇಂದ್ರದ ಇನ್ನೊವೇಟಿವ್ ಕಾನ್ಸುಲೇಟ್ ತಾಂತ್ರಿಕ ಹೊಸತನವನ್ನು ಉತ್ತೇಜಿಸುವ ಸಲುವಾಗಿ 25ಸಾವಿರಕ್ಕೂ ಅಧಿಕ ಶಾಲೆಗಳನ್ನು ಆರಿಸಿಕೊಂಡಿದ್ದು, ಸಾಮಾನ್ಯ ಮಕ್ಕಳಲ್ಲಿರುವ ಅಗಾಧ ಪ್ರತಿಭೆಯನ್ನು ಹೊರತರುವತ್ತ ಹೆಜ್ಜೆ ಇಟ್ಟಿದೆ. ರಾಜ್ಯದ ಕಾನ್ಸುಲೇಟ್ ಕೂಡ ಈ ಮಾದರಿಯನ್ನು ಅನುಸರಿಸಲಿ' ಎಂದು ಆಶಿಸಿದರು.<br /> <br /> ಗೃಹ ಸಚಿವ ಕೆ.ಜೆ.ಜಾರ್ಜ್, `ವಿದ್ಯಾರ್ಥಿ ಸಮೂಹವು ತಂತ್ರಜ್ಞಾನ ಬಳಸಿಕೊಂಡು ಹೊಸತನ್ನು ಸಾಧಿಸುವ ಪ್ರಕ್ರಿಯೆಗೆ ಎಫ್ಕೆಸಿಸಿಐ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.<br /> <br /> ಮಂಥನ್ನಲ್ಲಿ ಅಂತಿಮ ಸುತ್ತಿನಲ್ಲಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡಾ.ಜಿ.ಗೌತಮ್ ಮತ್ತು ಡಾ.ಮಹೇಶ್ ಕಡಗಿ ಅವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ ನೀಡಲಾಯಿತು.</p>.<p>ಶಿವಮೊಗ್ಗದ ಜವಾಹರ್ಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜಿನ ಸೈಯದ್ ಸಲೀಂ, ಡಿ.ಎಸ್, ವಿನಯ್ ಅವರಿಗೆ 30 ಸಾವಿರ (ದ್ವಿತೀಯ), ಅದೇ ಕಾಲೇಜಿನ ಎಸ್.ವಿ. ಕಾರ್ತಿಕ್ ಮತ್ತು ವಿ.ಆರ್.ನವೀನ್ ಅವರಿಗೆ 20 ಸಾವಿರ (ತೃತೀಯ) ನೀಡಲಾಯಿತು. </p>.<p>ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ರೋಹಿತ್ ಕಶ್ಯಪ್, ಸಂಧ್ಯಾ ರಾಮ್ ಅವರಿಗೆ ಸಮಧಾನಕಾರ ಬಹುಮಾನ ನೀಡಲಾಯಿತು.<br /> ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಸಡಗೋಪನ್, ಮಹಾಸಂಸ್ಥೆಯ ಅಧ್ಯಕ್ಷ ಕೆ.ಶಿವಷಣ್ಮುಗಂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>