ಅಂಕೋಲಾ (ಉ.ಕ.ಜಿಲ್ಲೆ): ಇಲ್ಲಿಗೆ ಸಮೀಪದ ಹೊನ್ನಿಬೈಲ್ ಕಡಲ ತೀರದ ಹನಿಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ಆಕಸ್ಮಿಕವಾಗಿ ಮುಳುಗಿ ಮೂವರು ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.
ಇವರನ್ನು ಬೆಂಗಳೂರು ವೈಟ್ಫೀಲ್ಡ್ ಮತ್ತು ತಿಪ್ಪಸಂದ್ರದ ಅಮಿತ್ ವಿಷ್ಣುಕುಮಾರ ಮರಾರ್ಕ್ (35), ಪ್ರವೀಣ ನೆವಿತಾ (35) ಮತ್ತು ಇವರ ಪತ್ನಿ ಸಂಜಲಿ (30) ಎಂದು ಗುರುತಿಸಲಾಗಿದೆ.
ಇವರು ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ ಆಗಮಿಸಿ ರೆಸಾರ್ಟ್ನಲ್ಲಿ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಡಲ ತೀರದ ಇಳಿಜಾರಿನಲ್ಲಿರುವ ಬಂಡೆಯ ಮೇಲೆ ನಿಂತುಕೊಂಡಿದ್ದ ಇವರು ಅಲೆಗಳು ಅಪ್ಪಳಿಸಿದ್ದರಿಂದ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ.
ದುರ್ಘಟನೆಯಲ್ಲಿ ಅಮಿತ್ ಅವರ ಪತ್ನಿ ದಿವ್ಯಾ ಮತ್ತು ಪ್ರವೀಣ-ಸಂಜಲಿ ದಂಪತಿ ಪುತ್ರಿ ಮೂರು ವರ್ಷದ ಅನುಷ್ಕಾ ಬದುಕುಳಿದಿದ್ದಾರೆ.