<p><strong>ಅಂಕೋಲಾ (ಉ.ಕ.ಜಿಲ್ಲೆ):</strong> ಇಲ್ಲಿಗೆ ಸಮೀಪದ ಹೊನ್ನಿಬೈಲ್ ಕಡಲ ತೀರದ ಹನಿಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ಆಕಸ್ಮಿಕವಾಗಿ ಮುಳುಗಿ ಮೂವರು ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.<br /> <br /> ಇವರನ್ನು ಬೆಂಗಳೂರು ವೈಟ್ಫೀಲ್ಡ್ ಮತ್ತು ತಿಪ್ಪಸಂದ್ರದ ಅಮಿತ್ ವಿಷ್ಣುಕುಮಾರ ಮರಾರ್ಕ್ (35), ಪ್ರವೀಣ ನೆವಿತಾ (35) ಮತ್ತು ಇವರ ಪತ್ನಿ ಸಂಜಲಿ (30) ಎಂದು ಗುರುತಿಸಲಾಗಿದೆ.<br /> <br /> ಇವರು ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ ಆಗಮಿಸಿ ರೆಸಾರ್ಟ್ನಲ್ಲಿ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಡಲ ತೀರದ ಇಳಿಜಾರಿನಲ್ಲಿರುವ ಬಂಡೆಯ ಮೇಲೆ ನಿಂತುಕೊಂಡಿದ್ದ ಇವರು ಅಲೆಗಳು ಅಪ್ಪಳಿಸಿದ್ದರಿಂದ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. <br /> <br /> ದುರ್ಘಟನೆಯಲ್ಲಿ ಅಮಿತ್ ಅವರ ಪತ್ನಿ ದಿವ್ಯಾ ಮತ್ತು ಪ್ರವೀಣ-ಸಂಜಲಿ ದಂಪತಿ ಪುತ್ರಿ ಮೂರು ವರ್ಷದ ಅನುಷ್ಕಾ ಬದುಕುಳಿದಿದ್ದಾರೆ.</p>.<p>ಅಗ್ನಿಶಾಮಕ ದಳ, ಕೋಸ್ಟ್ ಗಾರ್ಡ್ ಸಿಬ್ಬಂದಿ ಶವಗಳ ಪತ್ತೆ ಕಾರ್ಯದಲ್ಲಿ ಸ್ಥಳೀಯ ಪೊಲೀಸರಿಗೆ ನೆರವಾಗುತ್ತಿದ್ದಾರೆ. <br /> <br /> ಸಂಜೆಯವರೆಗೆ ಶವಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಕೋಲಾ (ಉ.ಕ.ಜಿಲ್ಲೆ):</strong> ಇಲ್ಲಿಗೆ ಸಮೀಪದ ಹೊನ್ನಿಬೈಲ್ ಕಡಲ ತೀರದ ಹನಿಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ಆಕಸ್ಮಿಕವಾಗಿ ಮುಳುಗಿ ಮೂವರು ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.<br /> <br /> ಇವರನ್ನು ಬೆಂಗಳೂರು ವೈಟ್ಫೀಲ್ಡ್ ಮತ್ತು ತಿಪ್ಪಸಂದ್ರದ ಅಮಿತ್ ವಿಷ್ಣುಕುಮಾರ ಮರಾರ್ಕ್ (35), ಪ್ರವೀಣ ನೆವಿತಾ (35) ಮತ್ತು ಇವರ ಪತ್ನಿ ಸಂಜಲಿ (30) ಎಂದು ಗುರುತಿಸಲಾಗಿದೆ.<br /> <br /> ಇವರು ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ ಆಗಮಿಸಿ ರೆಸಾರ್ಟ್ನಲ್ಲಿ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಡಲ ತೀರದ ಇಳಿಜಾರಿನಲ್ಲಿರುವ ಬಂಡೆಯ ಮೇಲೆ ನಿಂತುಕೊಂಡಿದ್ದ ಇವರು ಅಲೆಗಳು ಅಪ್ಪಳಿಸಿದ್ದರಿಂದ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. <br /> <br /> ದುರ್ಘಟನೆಯಲ್ಲಿ ಅಮಿತ್ ಅವರ ಪತ್ನಿ ದಿವ್ಯಾ ಮತ್ತು ಪ್ರವೀಣ-ಸಂಜಲಿ ದಂಪತಿ ಪುತ್ರಿ ಮೂರು ವರ್ಷದ ಅನುಷ್ಕಾ ಬದುಕುಳಿದಿದ್ದಾರೆ.</p>.<p>ಅಗ್ನಿಶಾಮಕ ದಳ, ಕೋಸ್ಟ್ ಗಾರ್ಡ್ ಸಿಬ್ಬಂದಿ ಶವಗಳ ಪತ್ತೆ ಕಾರ್ಯದಲ್ಲಿ ಸ್ಥಳೀಯ ಪೊಲೀಸರಿಗೆ ನೆರವಾಗುತ್ತಿದ್ದಾರೆ. <br /> <br /> ಸಂಜೆಯವರೆಗೆ ಶವಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>