<p><strong>ಬೆಂಗಳೂರು: </strong>‘ಪ್ರಕೃತಿ ಕುರಿತ ಅದ್ಯಮ ಕುತೂಹಲದಷ್ಟೇ ಯಂತ್ರ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬಹುತೇಕ ಬರಹಗಾರರಿಗಿಂತ ಭಿನ್ನವಾಗಿ ಯೋಚಿಸಿ, ಅದರಂತೆಯೇ ಬದುಕಿದ್ದರು’ ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.<br /> <br /> ಸಪ್ನ ಬುಕ್ ಹೌಸ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬುಕ್ ಹೌಸ್ನ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ ಅವರು ಸಂಪಾದಿಸಿದ ‘ತೇಜಸ್ವಿಯನ್ನು ಹುಡುಕುತ್ತಾ...’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<table align="right" border="1" cellpadding="1" cellspacing="1" style="width: 350px;"> <thead> <tr> <th scope="col"> <strong>ಮುಖ್ಯಾಂಶಗಳು</strong></th> </tr> </thead> <tbody> <tr> <td> <br /> *ಬಿಡುಗಡೆಯಾದ ಪುಸ್ತಕ: ತೇಜಸ್ವಿಯನ್ನು ಹುಡುಕುತ್ತಾ...<br /> * ಬೆಲೆ: ₨250</td> </tr> </tbody> </table>.<p>‘ತಂದೆ ಕುವೆಂಪು ಅವರಿಗಿಂತ ಭಿನ್ನವಾದ ದಾರಿಯಲ್ಲಿ ಬದುಕಿದರೂ ಅವರಂತೆಯೇ ಸಾಹಿತ್ಯಕ್ಕೆ ತಮ್ಮನ್ನು ಸಣ್ಣ ವಯಸ್ಸಿನಲ್ಲಿಯೇ ಅರ್ಪಿಸಿಕೊಂಡ ತೇಜಸ್ವಿ ಅವರು ಗಾಂಭಿರ್ಯ ಮತ್ತು ವಿನೋದ ಎರಡನ್ನು ಒಳಗೊಂಡ ಶೈಲಿಯನ್ನು ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.<br /> <br /> <strong>*</strong>‘ಬಹುಮುಖ ಪ್ರತಿಭೆಯಾಗಿದ್ದ ತೇಜಸ್ವಿ ಅವರಲ್ಲಿ ಅಗಾಧ ವಿಸ್ಮಯಗಳ ಹುಡುಕಾಟದ ಗುಣವಿತ್ತು. 1973ರಲ್ಲಿ ನವ್ಯ ಸಾಹಿತ್ಯದಿಂದ ಬಿಡಿಸಿಕೊಂಡು ವೈಜ್ಞಾನಿಕ ಬರಹಗಳತ್ತ ಒಲವು ತೋರಿದ ಅವರು ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಂಡರು. ಮಲೆನಾಡಿನ ಸೌಂದರ್ಯದೊಂದಿಗೆ ಅಲ್ಲಿನ ಸಮಸ್ಯೆಗಳನ್ನು ತಮ್ಮ ಕೃತಿಗಳ ಮೂಲಕ ತೆರೆದಿಟ್ಟರು’<br /> <strong>ಡಾ.ದೇ.ಜವರೇಗೌಡ, ಸಾಹಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಪ್ರಕೃತಿ ಕುರಿತ ಅದ್ಯಮ ಕುತೂಹಲದಷ್ಟೇ ಯಂತ್ರ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬಹುತೇಕ ಬರಹಗಾರರಿಗಿಂತ ಭಿನ್ನವಾಗಿ ಯೋಚಿಸಿ, ಅದರಂತೆಯೇ ಬದುಕಿದ್ದರು’ ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.<br /> <br /> ಸಪ್ನ ಬುಕ್ ಹೌಸ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬುಕ್ ಹೌಸ್ನ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೆಗೌಡ ಅವರು ಸಂಪಾದಿಸಿದ ‘ತೇಜಸ್ವಿಯನ್ನು ಹುಡುಕುತ್ತಾ...’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<table align="right" border="1" cellpadding="1" cellspacing="1" style="width: 350px;"> <thead> <tr> <th scope="col"> <strong>ಮುಖ್ಯಾಂಶಗಳು</strong></th> </tr> </thead> <tbody> <tr> <td> <br /> *ಬಿಡುಗಡೆಯಾದ ಪುಸ್ತಕ: ತೇಜಸ್ವಿಯನ್ನು ಹುಡುಕುತ್ತಾ...<br /> * ಬೆಲೆ: ₨250</td> </tr> </tbody> </table>.<p>‘ತಂದೆ ಕುವೆಂಪು ಅವರಿಗಿಂತ ಭಿನ್ನವಾದ ದಾರಿಯಲ್ಲಿ ಬದುಕಿದರೂ ಅವರಂತೆಯೇ ಸಾಹಿತ್ಯಕ್ಕೆ ತಮ್ಮನ್ನು ಸಣ್ಣ ವಯಸ್ಸಿನಲ್ಲಿಯೇ ಅರ್ಪಿಸಿಕೊಂಡ ತೇಜಸ್ವಿ ಅವರು ಗಾಂಭಿರ್ಯ ಮತ್ತು ವಿನೋದ ಎರಡನ್ನು ಒಳಗೊಂಡ ಶೈಲಿಯನ್ನು ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.<br /> <br /> <strong>*</strong>‘ಬಹುಮುಖ ಪ್ರತಿಭೆಯಾಗಿದ್ದ ತೇಜಸ್ವಿ ಅವರಲ್ಲಿ ಅಗಾಧ ವಿಸ್ಮಯಗಳ ಹುಡುಕಾಟದ ಗುಣವಿತ್ತು. 1973ರಲ್ಲಿ ನವ್ಯ ಸಾಹಿತ್ಯದಿಂದ ಬಿಡಿಸಿಕೊಂಡು ವೈಜ್ಞಾನಿಕ ಬರಹಗಳತ್ತ ಒಲವು ತೋರಿದ ಅವರು ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಂಡರು. ಮಲೆನಾಡಿನ ಸೌಂದರ್ಯದೊಂದಿಗೆ ಅಲ್ಲಿನ ಸಮಸ್ಯೆಗಳನ್ನು ತಮ್ಮ ಕೃತಿಗಳ ಮೂಲಕ ತೆರೆದಿಟ್ಟರು’<br /> <strong>ಡಾ.ದೇ.ಜವರೇಗೌಡ, ಸಾಹಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>