ವೃಕ್ಷಗಳ ಸ್ಥಳಾಂತರ ಸಫಲವಾದ ಹಿನ್ನೆಲೆ ಸತ್ಯ ಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಗ್ರೀನ್ ಸೆಂಚುರಿ ಹೆಸರಿನಡಿ ಶನಿವಾರ ಕಾರ್ಯಕ್ರಮ ನಡೆಸಲಾಗಿತ್ತು. ಸತ್ಯ ಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಡಿ.ಸಿ. ಸುಂದರೇಶ್ ದಾಬಿರ್, ಮೆಟ್ರೊ ಅಧಿಕಾರಿಗಳು ಮತ್ತು ಪರಿಸರವಾದಿ ಸುರೇಶ್ ಹೆಬ್ಲೀಕರ್ ಭಾಗವಹಿಸಿದ್ದರು.