<p><strong>ಬೆಂಗಳೂರು:</strong> ಮೆಟ್ರೊ ರೈಲು ಕಾಮಗಾರಿಗಾಗಿ ಕಬ್ಬನ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಮೂರು ವರ್ಷಗಳ ಕಾಲ ನಿರ್ಬಂಧಿಸಿರುವುದರಿಂದ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಲಿದೆ. <br /> <br /> ಶಿವಾಜಿನಗರದಿಂದ ಎಚ್ಎಎಲ್, ಮಾರತ್ಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ಬೆಳ್ಳಂದೂರು, ಬನ್ನೇರುಘಟ್ಟ, ಜಯನಗರ ಪ್ರದೇಶಗಳಿಗೆ ಹೊರಡುವ ಬಸ್ಗಳು ಸಾಕಷ್ಟು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.<br /> <br /> ‘ಕಬ್ಬನ್ ರಸ್ತೆಯನ್ನು ಮುಚ್ಚಿದ ನಂತರ ಬಸ್ಗಳು ವಿಧಾನಸೌಧ ರಸ್ತೆಯ ಮೂಲಕ ಹಡ್ಸನ್ ವೃತ್ತ ಬಳಸಿಕೊಂಡು ಸಂಚರಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಮಾರ್ಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಬಸ್ ಸೇವೆ ತಪ್ಪಿಹೋಗಲಿದೆ’ ಎಂದು ಬಿಎಂಟಿಸಿ ಸಹಾಯಕ ಸಂಚಾರ ನಿರೀಕ್ಷಕ ಎಚ್.ಸಿ.ರಾಜಶೇಖರಯ್ಯ ಹೇಳಿದರು.<br /> <br /> ‘ಇನ್ನೊಂದು ಮಾರ್ಗವೆಂದರೆ, ಬೌರಿಂಗ್ ಆಸ್ಪತ್ರೆಯ ಮೂಲಕ ಬಸ್ಗಳನ್ನು ಓಡಿಸುವುದು. ಸದ್ಯಕ್ಕೆ ಈ ಮಾರ್ಗ ಏಕಮುಖ ಸಂಚಾರವಾಗಿದ್ದು, ಇದನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಿ ಬಸ್ಗಳ ಸಂಚಾರಕ್ಕೆ ಅನುವು ನೀಡಬಹುದಾಗಿದೆ’ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೆಟ್ರೊ ರೈಲು ಕಾಮಗಾರಿಗಾಗಿ ಕಬ್ಬನ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಮೂರು ವರ್ಷಗಳ ಕಾಲ ನಿರ್ಬಂಧಿಸಿರುವುದರಿಂದ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಲಿದೆ. <br /> <br /> ಶಿವಾಜಿನಗರದಿಂದ ಎಚ್ಎಎಲ್, ಮಾರತ್ಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ಬೆಳ್ಳಂದೂರು, ಬನ್ನೇರುಘಟ್ಟ, ಜಯನಗರ ಪ್ರದೇಶಗಳಿಗೆ ಹೊರಡುವ ಬಸ್ಗಳು ಸಾಕಷ್ಟು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.<br /> <br /> ‘ಕಬ್ಬನ್ ರಸ್ತೆಯನ್ನು ಮುಚ್ಚಿದ ನಂತರ ಬಸ್ಗಳು ವಿಧಾನಸೌಧ ರಸ್ತೆಯ ಮೂಲಕ ಹಡ್ಸನ್ ವೃತ್ತ ಬಳಸಿಕೊಂಡು ಸಂಚರಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಮಾರ್ಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಬಸ್ ಸೇವೆ ತಪ್ಪಿಹೋಗಲಿದೆ’ ಎಂದು ಬಿಎಂಟಿಸಿ ಸಹಾಯಕ ಸಂಚಾರ ನಿರೀಕ್ಷಕ ಎಚ್.ಸಿ.ರಾಜಶೇಖರಯ್ಯ ಹೇಳಿದರು.<br /> <br /> ‘ಇನ್ನೊಂದು ಮಾರ್ಗವೆಂದರೆ, ಬೌರಿಂಗ್ ಆಸ್ಪತ್ರೆಯ ಮೂಲಕ ಬಸ್ಗಳನ್ನು ಓಡಿಸುವುದು. ಸದ್ಯಕ್ಕೆ ಈ ಮಾರ್ಗ ಏಕಮುಖ ಸಂಚಾರವಾಗಿದ್ದು, ಇದನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸಿ ಬಸ್ಗಳ ಸಂಚಾರಕ್ಕೆ ಅನುವು ನೀಡಬಹುದಾಗಿದೆ’ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>