<p><strong>ಬೆಂಗಳೂರು:</strong> ನಗರದ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ ನಡೆದಿದ್ದು, ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.<br /> <br /> ಮಧ್ಯಾಹ್ನ 3ಗಂಟೆವರೆಗೂ ಮತದಾನ ನಡೆಯಿತು. ನಂತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜಯನಗರದಲ್ಲಿ ನಡೆಯಿತು. ಉಳಿದಂತೆ ಬೆಂಗಳೂರು ಸೆಂಟ್ರಲ್ ಮತ್ತು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ರಾತ್ರಿ ಬಹುಹೊತ್ತಿನವರೆಗೂ ಮತ ಎಣಿಕೆ ನಡೆಯಿತು.<br /> <br /> ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಭಾಕರರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಆರ್.ನಾಯ್ಡು ಆಯ್ಕೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಗೌತಮ್ ಆಯ್ಕೆಯಾಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ರಾತ್ರಿ ಬಹುಹೊತ್ತಿನವರೆಗೂ ನಡೆಯಿತು.<br /> <br /> ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ವಿವರ:<br /> ರಾಜಾಜಿನಗರ- ಶಶಿವರ್ಧನ್, ಸಿ.ವಿ.ರಾಮನ್ನಗರ- ಆನಂದ್, ಗಾಂಧಿನಗರ- ಉಮೇಶ್, ಮಹದೇವಪುರ- ಅನಿಲ್, ಶಿವಾಜಿನಗರ- ನಟರಾಜ್, ಶಾಂತಿನಗರ- ಪಿಂಟೊ, ಪದ್ಮನಾಭನಗರ- ಹರೀಶ್, ಬೊಮ್ಮನಹಳ್ಳಿ- ಯೋಗೀಶ್ ಗೌಡ, ಬಿಟಿಎಂ ಲೇಔಟ್- ರಾಜೇಂದ್ರ, ವಿಜಯನಗರ- ವಾಸು, ಗೋವಿಂದರಾಜನಗರ-ಅಭಿಷೇಕ್, ಬಸವನಗುಡಿ- ಕಿರಣ್, ಜಯನಗರ- ಪ್ರಶಾಂತ್, ಚಿಕ್ಕಪೇಟೆ- ಯುವರಾಜ್.<br /> <br /> ದಾಸರಹಳ್ಳಿ- ಕುಮಾರಸಿಂಗ್, ಮಲ್ಲೇಶ್ವರ- ಸುರೇಶ, ಹೆಬ್ಬಾಳ- ಫೈರೋಜ್, ಬ್ಯಾಟರಾಯನಪುರ- ಗೌರೀಶ್, ಮಹಾಲಕ್ಷ್ಮೀಲೇಔಟ್- ಕೆ.ವಿ.ಸಂತೋಷ್, ಯಶವಂತಪುರ- ಪುಟ್ಟು, ಕೆ.ಆರ್.ಪುರ- ರವಿಕುಮಾರ್, ಪುಲಿಕೇಶಿನಗರ- ವರುಣ್.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ ನಡೆದಿದ್ದು, ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.<br /> <br /> ಮಧ್ಯಾಹ್ನ 3ಗಂಟೆವರೆಗೂ ಮತದಾನ ನಡೆಯಿತು. ನಂತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜಯನಗರದಲ್ಲಿ ನಡೆಯಿತು. ಉಳಿದಂತೆ ಬೆಂಗಳೂರು ಸೆಂಟ್ರಲ್ ಮತ್ತು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ರಾತ್ರಿ ಬಹುಹೊತ್ತಿನವರೆಗೂ ಮತ ಎಣಿಕೆ ನಡೆಯಿತು.<br /> <br /> ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಭಾಕರರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಆರ್.ನಾಯ್ಡು ಆಯ್ಕೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಗೌತಮ್ ಆಯ್ಕೆಯಾಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ರಾತ್ರಿ ಬಹುಹೊತ್ತಿನವರೆಗೂ ನಡೆಯಿತು.<br /> <br /> ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ವಿವರ:<br /> ರಾಜಾಜಿನಗರ- ಶಶಿವರ್ಧನ್, ಸಿ.ವಿ.ರಾಮನ್ನಗರ- ಆನಂದ್, ಗಾಂಧಿನಗರ- ಉಮೇಶ್, ಮಹದೇವಪುರ- ಅನಿಲ್, ಶಿವಾಜಿನಗರ- ನಟರಾಜ್, ಶಾಂತಿನಗರ- ಪಿಂಟೊ, ಪದ್ಮನಾಭನಗರ- ಹರೀಶ್, ಬೊಮ್ಮನಹಳ್ಳಿ- ಯೋಗೀಶ್ ಗೌಡ, ಬಿಟಿಎಂ ಲೇಔಟ್- ರಾಜೇಂದ್ರ, ವಿಜಯನಗರ- ವಾಸು, ಗೋವಿಂದರಾಜನಗರ-ಅಭಿಷೇಕ್, ಬಸವನಗುಡಿ- ಕಿರಣ್, ಜಯನಗರ- ಪ್ರಶಾಂತ್, ಚಿಕ್ಕಪೇಟೆ- ಯುವರಾಜ್.<br /> <br /> ದಾಸರಹಳ್ಳಿ- ಕುಮಾರಸಿಂಗ್, ಮಲ್ಲೇಶ್ವರ- ಸುರೇಶ, ಹೆಬ್ಬಾಳ- ಫೈರೋಜ್, ಬ್ಯಾಟರಾಯನಪುರ- ಗೌರೀಶ್, ಮಹಾಲಕ್ಷ್ಮೀಲೇಔಟ್- ಕೆ.ವಿ.ಸಂತೋಷ್, ಯಶವಂತಪುರ- ಪುಟ್ಟು, ಕೆ.ಆರ್.ಪುರ- ರವಿಕುಮಾರ್, ಪುಲಿಕೇಶಿನಗರ- ವರುಣ್.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>