<p>ಬೆಂಗಳೂರು: ಕಾಡಾನೆ ಹಾವಳಿಯಿಂದ ಕೊಡಗು ಜಿಲ್ಲೆಯ ಬತ್ತ, ಕಾಫಿ ಬೆಳೆ ನಾಶವಾಗುತ್ತಿರುವ ಕುರಿತು ಜೆಡಿಎಸ್ನ ಎಂ.ಸಿ. ನಾಣಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ನೀಡಿದ ಉತ್ತರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಯಿತು. ಈ ಉತ್ತರ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ವಿಮಲಾ ಗೌಡ ಅವರಿಗೆ `ತಮಾಷೆ~ ಎಂದೆನಿಸಿತು!<br /> <br /> ಕಾಡಾನೆಗಳ ಹಾವಳಿಯಿಂದ ಬೆಳೆ ನಾಶ ಮತ್ತು ಪ್ರಾಣ ಹಾನಿ ಸಂಭವಿಸಿರುವ ಕುರಿತು ನಾಣಯ್ಯ ಸೋಮವಾರ ಪರಿಷತ್ತಿನ ಗಮನ ಸೆಳೆದರು. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಯೋಗೇಶ್ವರ್, `ಮೇವಿಗಾಗಿ ಕಾಡಿನಲ್ಲಿ ದನ-ಕರುಗಳು ಮತ್ತು ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಬತ್ತ, ತೆಂಗು, ಬಾಳೆ, ಹಲಸು ಬೆಳೆಗಳನ್ನು ಕೊಡಗಿನ ಕೃಷಿ ಭೂಮಿಯಲ್ಲಿ ಬೆಳೆಸುತ್ತಿರುವುದು ಕಾಡಾನೆಗಳನ್ನು ಆಕರ್ಷಿಸುತ್ತಿದೆ~ ಎಂದರು.<br /> <br /> ಸಚಿವರು ನೀಡಿದ ಉತ್ತರ ನಾಣಯ್ಯ ಅವರನ್ನು ತೀವ್ರವಾಗಿ ಕೆರಳಿಸಿತು. `ಕೊಡಗಿನ ಕುರಿತು ಅರಿವು ಇದ್ದಿದ್ದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಉತ್ತರ ಬರೆದುಕೊಡುತ್ತಿರಲಿಲ್ಲ. ಆ ಉತ್ತರಕ್ಕೆ ಸಹಿ ಮಾಡಿ, ಸಚಿವರು ಸದನದಲ್ಲಿ ಮಂಡಿಸುತ್ತಿರಲಿಲ್ಲ. ಹತ್ತು ವರ್ಷಗಳಿಂದೀಚೆಗೆ ಕೊಡಗಿನಲ್ಲಿ ಕಾಡಾನೆ ಹಾವಳಿ ಕಂಡುಬರುತ್ತಿದೆ. ಆದರೆ ಬತ್ತವನ್ನು ತಲೆತಲಾಂತರದಿಂದ ಬೆಳೆಯಲಾಗುತ್ತಿದೆ. ಹಿಂದೆ ಕಾಡಾನೆ ಕಾಟ ಇರಲಿಲ್ಲ~ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.<br /> <br /> `ತೆಂಗು, ಹಲಸು, ಬಾಳೆ ಕೊಡಗಿನ ಮೂಲ ಬೆಳೆ ಅಲ್ಲ. ಅವುಗಳನ್ನು ಮನೆಯ ಸುತ್ತ ಅಲ್ಪ ಪ್ರಮಾಣದಲ್ಲಿ ಮಾತ್ರ ಬೆಳೆಯಲಾಗುತ್ತದೆ, ತೋಟದ ರೂಪದಲ್ಲಿ ಅದನ್ನು ಕೊಡಗಿನಲ್ಲಿ ಬೆಳೆಯುವುದಿಲ್ಲ. ಅವು ಆನೆಗಳನ್ನು ಆಕರ್ಷಿಸುವುದು ಹೇಗೆ?~ ಎಂದು ಪ್ರಶ್ನಿಸಿದ ನಾಣಯ್ಯ, `ಇಂಥ ಉತ್ತರ ಬರೆದುಕೊಟ್ಟ ಅಧಿಕಾರಿಗಳಿಗೆ ಹಕ್ಕುಚ್ಯುತಿ ನೋಟಿಸ್ ನೀಡಬೇಕು. ತಮ್ಮ ಇಲಾಖೆ ಏನು ಎಂಬುದನ್ನು ಸಚಿವರೂ ಅರ್ಥ ಮಾಡಿಕೊಳ್ಳಬೇಕು~ ಎಂದು ಗುಡುಗಿದರು.<br /> <br /> ಆನೆ ಹಾವಳಿ ಇರುವ ಪ್ರದೇಶಗಳ ಅಂಚಿನಲ್ಲಿ ಸೌರಬೇಲಿ (237 ಕಿ.ಮೀ) ನಿರ್ಮಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ, ಸೌರಬೇಲಿ ಹಾಳುಬಿದ್ದಿದೆ. ಆನೆ ಬಾರದಂತೆ ತಡೆಯುವ ಕಂದಕಗಳ ನಿರ್ಮಾಣವೂ ದೊಡ್ಡ ದಂಧೆಯ ಸ್ವರೂಪ ಪಡೆದಿದೆ ಎಂದು ದೂರಿದರು.<br /> <br /> ಕಾಡಾನೆ ಹಾವಳಿಗೆ ಮೂರು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಕೊಡಗಿನ ಜನ ಕಾನೂನು ಕೈಗೆತ್ತಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.<br /> <br /> <strong>`ತಮಾಷೆ ಎನಿಸುತ್ತಿದೆ!~</strong>: ಈ ಸಂದರ್ಭದಲ್ಲಿ ಸಭಾಪತಿಗಳ ಸ್ಥಾನದಲ್ಲಿದ್ದ ವಿಮಲಾ ಗೌಡ ಅವರು, `ಸಚಿವರು ನೀಡಿರುವ ಉತ್ತರ ತಮಾಷೆ ಎನಿಸುತ್ತಿದೆ. ಆನೆಗಳು ಮೇವಿಗಾಗಿ ದನಕರುಗಳ ಜೊತೆ ಪೈಪೋಟಿಗೆ ಇಳಿಯುತ್ತವೆಯಾ? ಈಉತ್ತರಕ್ಕೆ ಸಹಿ ಹಾಕುವ ಮುನ್ನ ಸಚಿವರು ಒಮ್ಮೆ ನೋಡಬೇಕಿತ್ತು~ ಎಂದು ಸಲಹೆ ನೀಡಿದರು.<br /> <br /> `ಅಧಿವೇಶನ ಮುಗಿದ ನಂತರ ನಾವು ಕೊಡಗಿಗೇ ಬರುತ್ತೇವೆ. ಸ್ಥಳೀಯರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಕಾಡಾನೆ ಹಾವಳಿಯಿಂದ ನಾಶವಾದ ಬೆಳೆಗೆ ಮಾರುಕಟ್ಟೆ ಬೆಲೆ ನೀಡುವ ನಿರ್ಧಾರ ಕೈಗೊಂಡಿದ್ದೇವೆ~ ಎಂದು ಸಚಿವರು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕಾಡಾನೆ ಹಾವಳಿಯಿಂದ ಕೊಡಗು ಜಿಲ್ಲೆಯ ಬತ್ತ, ಕಾಫಿ ಬೆಳೆ ನಾಶವಾಗುತ್ತಿರುವ ಕುರಿತು ಜೆಡಿಎಸ್ನ ಎಂ.ಸಿ. ನಾಣಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ನೀಡಿದ ಉತ್ತರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಯಿತು. ಈ ಉತ್ತರ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ವಿಮಲಾ ಗೌಡ ಅವರಿಗೆ `ತಮಾಷೆ~ ಎಂದೆನಿಸಿತು!<br /> <br /> ಕಾಡಾನೆಗಳ ಹಾವಳಿಯಿಂದ ಬೆಳೆ ನಾಶ ಮತ್ತು ಪ್ರಾಣ ಹಾನಿ ಸಂಭವಿಸಿರುವ ಕುರಿತು ನಾಣಯ್ಯ ಸೋಮವಾರ ಪರಿಷತ್ತಿನ ಗಮನ ಸೆಳೆದರು. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಯೋಗೇಶ್ವರ್, `ಮೇವಿಗಾಗಿ ಕಾಡಿನಲ್ಲಿ ದನ-ಕರುಗಳು ಮತ್ತು ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಬತ್ತ, ತೆಂಗು, ಬಾಳೆ, ಹಲಸು ಬೆಳೆಗಳನ್ನು ಕೊಡಗಿನ ಕೃಷಿ ಭೂಮಿಯಲ್ಲಿ ಬೆಳೆಸುತ್ತಿರುವುದು ಕಾಡಾನೆಗಳನ್ನು ಆಕರ್ಷಿಸುತ್ತಿದೆ~ ಎಂದರು.<br /> <br /> ಸಚಿವರು ನೀಡಿದ ಉತ್ತರ ನಾಣಯ್ಯ ಅವರನ್ನು ತೀವ್ರವಾಗಿ ಕೆರಳಿಸಿತು. `ಕೊಡಗಿನ ಕುರಿತು ಅರಿವು ಇದ್ದಿದ್ದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಉತ್ತರ ಬರೆದುಕೊಡುತ್ತಿರಲಿಲ್ಲ. ಆ ಉತ್ತರಕ್ಕೆ ಸಹಿ ಮಾಡಿ, ಸಚಿವರು ಸದನದಲ್ಲಿ ಮಂಡಿಸುತ್ತಿರಲಿಲ್ಲ. ಹತ್ತು ವರ್ಷಗಳಿಂದೀಚೆಗೆ ಕೊಡಗಿನಲ್ಲಿ ಕಾಡಾನೆ ಹಾವಳಿ ಕಂಡುಬರುತ್ತಿದೆ. ಆದರೆ ಬತ್ತವನ್ನು ತಲೆತಲಾಂತರದಿಂದ ಬೆಳೆಯಲಾಗುತ್ತಿದೆ. ಹಿಂದೆ ಕಾಡಾನೆ ಕಾಟ ಇರಲಿಲ್ಲ~ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.<br /> <br /> `ತೆಂಗು, ಹಲಸು, ಬಾಳೆ ಕೊಡಗಿನ ಮೂಲ ಬೆಳೆ ಅಲ್ಲ. ಅವುಗಳನ್ನು ಮನೆಯ ಸುತ್ತ ಅಲ್ಪ ಪ್ರಮಾಣದಲ್ಲಿ ಮಾತ್ರ ಬೆಳೆಯಲಾಗುತ್ತದೆ, ತೋಟದ ರೂಪದಲ್ಲಿ ಅದನ್ನು ಕೊಡಗಿನಲ್ಲಿ ಬೆಳೆಯುವುದಿಲ್ಲ. ಅವು ಆನೆಗಳನ್ನು ಆಕರ್ಷಿಸುವುದು ಹೇಗೆ?~ ಎಂದು ಪ್ರಶ್ನಿಸಿದ ನಾಣಯ್ಯ, `ಇಂಥ ಉತ್ತರ ಬರೆದುಕೊಟ್ಟ ಅಧಿಕಾರಿಗಳಿಗೆ ಹಕ್ಕುಚ್ಯುತಿ ನೋಟಿಸ್ ನೀಡಬೇಕು. ತಮ್ಮ ಇಲಾಖೆ ಏನು ಎಂಬುದನ್ನು ಸಚಿವರೂ ಅರ್ಥ ಮಾಡಿಕೊಳ್ಳಬೇಕು~ ಎಂದು ಗುಡುಗಿದರು.<br /> <br /> ಆನೆ ಹಾವಳಿ ಇರುವ ಪ್ರದೇಶಗಳ ಅಂಚಿನಲ್ಲಿ ಸೌರಬೇಲಿ (237 ಕಿ.ಮೀ) ನಿರ್ಮಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ, ಸೌರಬೇಲಿ ಹಾಳುಬಿದ್ದಿದೆ. ಆನೆ ಬಾರದಂತೆ ತಡೆಯುವ ಕಂದಕಗಳ ನಿರ್ಮಾಣವೂ ದೊಡ್ಡ ದಂಧೆಯ ಸ್ವರೂಪ ಪಡೆದಿದೆ ಎಂದು ದೂರಿದರು.<br /> <br /> ಕಾಡಾನೆ ಹಾವಳಿಗೆ ಮೂರು ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಕೊಡಗಿನ ಜನ ಕಾನೂನು ಕೈಗೆತ್ತಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.<br /> <br /> <strong>`ತಮಾಷೆ ಎನಿಸುತ್ತಿದೆ!~</strong>: ಈ ಸಂದರ್ಭದಲ್ಲಿ ಸಭಾಪತಿಗಳ ಸ್ಥಾನದಲ್ಲಿದ್ದ ವಿಮಲಾ ಗೌಡ ಅವರು, `ಸಚಿವರು ನೀಡಿರುವ ಉತ್ತರ ತಮಾಷೆ ಎನಿಸುತ್ತಿದೆ. ಆನೆಗಳು ಮೇವಿಗಾಗಿ ದನಕರುಗಳ ಜೊತೆ ಪೈಪೋಟಿಗೆ ಇಳಿಯುತ್ತವೆಯಾ? ಈಉತ್ತರಕ್ಕೆ ಸಹಿ ಹಾಕುವ ಮುನ್ನ ಸಚಿವರು ಒಮ್ಮೆ ನೋಡಬೇಕಿತ್ತು~ ಎಂದು ಸಲಹೆ ನೀಡಿದರು.<br /> <br /> `ಅಧಿವೇಶನ ಮುಗಿದ ನಂತರ ನಾವು ಕೊಡಗಿಗೇ ಬರುತ್ತೇವೆ. ಸ್ಥಳೀಯರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಕಾಡಾನೆ ಹಾವಳಿಯಿಂದ ನಾಶವಾದ ಬೆಳೆಗೆ ಮಾರುಕಟ್ಟೆ ಬೆಲೆ ನೀಡುವ ನಿರ್ಧಾರ ಕೈಗೊಂಡಿದ್ದೇವೆ~ ಎಂದು ಸಚಿವರು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>