<p><strong>ಬೆಂಗಳೂರು: </strong>ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ನ್ಯಾಯಾಧೀಶರ ಎದುರೇ ಎಳೆದಾಡಿ ಹೊರ ದಬ್ಬಿದ ಘಟನೆ ನಗರದ ನೃಪತುಂಗ ರಸ್ತೆಯ ಒಂದನೇ ಎಸಿಎಂಎಂ ನ್ಯಾಯಾಲಯದ ಆವರ ಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.<br /> <br /> ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರು ನ್ಯಾಯಾಲಯದ ಕೊಠಡಿಗೆ ಪ್ರವೇಶಿಸುವ ಮುನ್ನವೇ ಸಾಕಷ್ಟು ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೊಠಡಿಯಲ್ಲಿ ಹಾಜರಿದ್ದರು. <br /> <br /> ಈ ಸಂದರ್ಭದಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ವಾಗ್ವಾದ ನಡೆಸಿ ಕೊಠಡಿಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ಎಳೆದಾಡಿದರು. <br /> <br /> ಇದೇ ವೇಳೆಗೆ ಕೊಠಡಿ ಪ್ರವೇಶಿಸಿದ ನ್ಯಾಯಾಧೀಶರ ಎದುರೇ ವಕೀಲರು ಮಾಧ್ಯಮ ಪ್ರತಿನಿಧಿಗಳನ್ನು ಕೊಠಡಿ ಯಿಂದ ಹೊರ ದಬ್ಬಿದರು. ಅಲ್ಲದೇ ನ್ಯಾಯಾಲಯದ ಆವರಣಕ್ಕೆ ಎಳೆದೊಯ್ದು ಬಟ್ಟೆಗಳನ್ನು ಹರಿದು ಹಾಕಿ ಥಳಿಸಿದರು.<br /> <br /> <strong>ವಿವಸ್ತ್ರಗೊಳಿಸುವ ಬೆದರಿಕೆ: </strong>ವಿಚಾರಣೆಗೆ ಹಾಜರಾಗಲು ಬಂದಿದ್ದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನ್ಯಾಯಾಲಯದ ಕಟ್ಟಡವನ್ನು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮ ಛಾಯಾಗ್ರಾಹಕರ ಮೇಲೂ ವಕೀಲರು ಹಲ್ಲೆ ನಡೆಸಿದರು. ಅಲ್ಲದೇ ಕ್ಯಾಮೆರಾಗಳನ್ನು ಕಸಿದು ಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದರು.<br /> <br /> ಈ ಹಂತದಲ್ಲಿ ಮಧ್ಯಪ್ರವೇಶಿಸಿ ಜಗಳ ಪರಿಹರಿಸಲು ಮುಂದಾದ ವರದಿಗಾ ರ್ತಿಯ ಜತೆ ಕೆಲ ವಕೀಲರು ಅನುಚಿತ ವಾಗಿ ವರ್ತಿಸಿದರು. ಇದರಿಂದಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು. <br /> ಈ ಹಂತದಲ್ಲಿ ವಕೀಲರ ಗುಂಪೊಂದು ವರದಿಗಾರ್ತಿಯನ್ನು ವಿವಸ್ತ್ರಗೊಳಿ ಸುವುದಾಗಿ ಬೆದರಿಕೆ ಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ನ್ಯಾಯಾಧೀಶರ ಎದುರೇ ಎಳೆದಾಡಿ ಹೊರ ದಬ್ಬಿದ ಘಟನೆ ನಗರದ ನೃಪತುಂಗ ರಸ್ತೆಯ ಒಂದನೇ ಎಸಿಎಂಎಂ ನ್ಯಾಯಾಲಯದ ಆವರ ಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.<br /> <br /> ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರು ನ್ಯಾಯಾಲಯದ ಕೊಠಡಿಗೆ ಪ್ರವೇಶಿಸುವ ಮುನ್ನವೇ ಸಾಕಷ್ಟು ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೊಠಡಿಯಲ್ಲಿ ಹಾಜರಿದ್ದರು. <br /> <br /> ಈ ಸಂದರ್ಭದಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ವಾಗ್ವಾದ ನಡೆಸಿ ಕೊಠಡಿಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ಎಳೆದಾಡಿದರು. <br /> <br /> ಇದೇ ವೇಳೆಗೆ ಕೊಠಡಿ ಪ್ರವೇಶಿಸಿದ ನ್ಯಾಯಾಧೀಶರ ಎದುರೇ ವಕೀಲರು ಮಾಧ್ಯಮ ಪ್ರತಿನಿಧಿಗಳನ್ನು ಕೊಠಡಿ ಯಿಂದ ಹೊರ ದಬ್ಬಿದರು. ಅಲ್ಲದೇ ನ್ಯಾಯಾಲಯದ ಆವರಣಕ್ಕೆ ಎಳೆದೊಯ್ದು ಬಟ್ಟೆಗಳನ್ನು ಹರಿದು ಹಾಕಿ ಥಳಿಸಿದರು.<br /> <br /> <strong>ವಿವಸ್ತ್ರಗೊಳಿಸುವ ಬೆದರಿಕೆ: </strong>ವಿಚಾರಣೆಗೆ ಹಾಜರಾಗಲು ಬಂದಿದ್ದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನ್ಯಾಯಾಲಯದ ಕಟ್ಟಡವನ್ನು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮ ಛಾಯಾಗ್ರಾಹಕರ ಮೇಲೂ ವಕೀಲರು ಹಲ್ಲೆ ನಡೆಸಿದರು. ಅಲ್ಲದೇ ಕ್ಯಾಮೆರಾಗಳನ್ನು ಕಸಿದು ಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದರು.<br /> <br /> ಈ ಹಂತದಲ್ಲಿ ಮಧ್ಯಪ್ರವೇಶಿಸಿ ಜಗಳ ಪರಿಹರಿಸಲು ಮುಂದಾದ ವರದಿಗಾ ರ್ತಿಯ ಜತೆ ಕೆಲ ವಕೀಲರು ಅನುಚಿತ ವಾಗಿ ವರ್ತಿಸಿದರು. ಇದರಿಂದಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು. <br /> ಈ ಹಂತದಲ್ಲಿ ವಕೀಲರ ಗುಂಪೊಂದು ವರದಿಗಾರ್ತಿಯನ್ನು ವಿವಸ್ತ್ರಗೊಳಿ ಸುವುದಾಗಿ ಬೆದರಿಕೆ ಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>