ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜಿ.ಎಸ್.ನಾರಾಯಣ ಸ್ವಾಮಿ ಮಾತನಾಡಿ, `ರಾಜ್ಯದಲ್ಲಿನ ಮೂರು ಕೋಟಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದೆ~ ಎಂದರು.
ಕಾರ್ಮಿಕ ರಾಜ್ಯ ವಿಮಾ ನಿಗಮದ ಆಯುಕ್ತ ಡಾ. ಬಿ.ಆರ್.ಕವಿ ಶೆಟ್ಟಿ ಮಾತನಾಡಿದರು. ವಿಮಾ ಯೋಜನೆಯ ನಿರ್ದೇಶಕಿ ಡಾ. ರಹೀಮುನ್ನೀಸಾ, ಪ್ರಾದೇಶಿಕ ನಿರ್ದೇಶಕ ಕೆ.ಎಫ್.ಜಾನ್ವೇಕರ್, ಎಂವಿಜೆ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆಯ ಅಧ್ಯಕ್ಷ ಡಾ. ಎಂ.ಜೆ.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.