‘ಲೇಖಕ ಇಂದು ನಗರ ಜೀವನದ ಬಗ್ಗೆ ಬರೆಯಲು ಅಣಿಯಾದರೆ, ಈವರೆಗೆ ಬರೆದಿದ್ದನ್ನೆಲ್ಲ ಬಿಟ್ಟು, ಬೇರೆಯದನ್ನೇ ಬರೆಯಬೇಕಾಗುತ್ತದೆ. ಹಳ್ಳಿ ನಮ್ಮೆಲ್ಲರಿಂದ ದೂರವಾಗಿದೆ. ಹಾಗಾಗಿ ಅದರ ಬಗ್ಗೆ ಬರೆಯುವುದು ರಂಜನೀಯ ಅನುಭವ ನೀಡುತ್ತದೆ. ನಗರ ಜನಜೀವನವನ್ನು ಸೂಕ್ತವಾಗಿ ವಿವರಿ
ಸಲು ಪದಗಳು ಸಿಗುತ್ತಿಲ್ಲ. ಆದರೆ, ಈ ಸವಾಲನ್ನು ನಾವು ಎದುರಿಸಲೇಬೇಕು. ಇಂಥ ಸವಾಲನ್ನು ಎದುರಿಸಬೇಕಾಗಿರುವುದು ಲೇಖಕನ ಕೆಲಸ’ ಎಂದು ತಮ್ಮ ಕೃತಿಯ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.