<p><strong>ಬೆಂಗಳೂರು</strong>: ಸಿಲಿಂಡರ್ ಸ್ಫೋಟಗೊಂಡು ಕಲ್ಯಾಣ ಮಂಟಪದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಮತ್ತು ಕಟ್ಟಡ ಕುಸಿದ ನಂತರ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಅಕ್ಷರಶಃ ಪ್ರಾಣ ಪಣಕ್ಕಿಟ್ಟು ಹೋರಾಡಿದರು.<br /> <br /> ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಮೂರು ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದರು. ಆ ವೇಳೆಗಾಗಲೇ ಇಡೀ ಕಟ್ಟಡವೇ ಹೊತ್ತಿ ಉರಿಯುತ್ತಿತ್ತು. ಬೆಂಕಿ ಜ್ವಾಲೆಗಳು ವ್ಯಾಪಿಸುತ್ತಿದ್ದವು. ದಟ್ಟ ಹೊಗೆ ಸಹ ಆವರಿಸಿದ್ದರಿಂದ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕಟ್ಟಡದ ಒಳಗೆ ಇನ್ನೂ ಹಲವು ಸಿಲಿಂಡರ್ಗಳಿದ್ದವು.<br /> <br /> ಅಂತಹ ಸಂದರ್ಭದಲ್ಲಿ ಕಟ್ಟಡದೊಳಗೆ ಹೋಗುವುದು ಸಾವಿನ ಮನೆ ಪ್ರವೇಶಿಸಿದಂತೇ ಆಗಿತ್ತು. ಆದರೂ ಎದೆಗುಂದದ ಸುಮಾರು ಹತ್ತು ಮಂದಿ ಸಿಬ್ಬಂದಿ ತಂಡ ಧೈರ್ಯದಿಂದ ಒಳ ನುಗ್ಗಿ ಬೆಂಕಿ ನಂದಿಸಲಾರಂಭಿಸಿತು. ಅದಾಗಲೇ ಬೆಂಕಿಯಿಂದ ಶಿಥಿಲವಾಗಿದ್ದ ಕಟ್ಟಡ ಕುಸಿದು ಸಿಬ್ಬಂದಿ ಮೇಲೆ ಬಿತ್ತು. <br /> <br /> ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಐದು ಮಂದಿ ಗಾಯಾಳುಗಳಲ್ಲಿ ಕೆಲವರ ತಲೆಗೆ, ಎದೆಗೆ, ಕೈಗೆ ಪೆಟ್ಟು ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಗೋವಿಂದಪ್ಪ ಅವರ ಎರಡೂ ಕಾಲುಗಳ ಮೇಲೆ ಕಟ್ಟಡದ ಅವಶೇಷ ಬಿದ್ದ ಪರಿಣಾಮ ಮುಳೆ ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.|<br /> <br /> ಕಲ್ಯಾಣ ಮಂಟಪದ ಕಟ್ಟಡ ಕುಸಿದು ನಾಲ್ಕು ಮನೆಗಳ ಮೇಲೆ ಬಿದ್ದಿದ್ದರಿಂದ ಮನೆಗಳು ನೆಲಸಮವಾದವು. ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂದು ಗೊತ್ತಿರಲಿಲ್ಲ. ಇಬ್ಬರು ಸಿಲುಕಿರಬಹುದು ಎಂಬ ಸಂಶಯದಿಂದಲೇ ಸಿಬ್ಬಂದಿ ಅವಶೇಷಗಳನ್ನು ತೆರವು ಮಾಡಿದರು. ಸತತ ಆರೇಳು ಗಂಟೆ ಬಿಡುವಿಲ್ಲದಂತೆ ಕೆಲಸ ಮಾಡಿದರು.<br /> <br /> `ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಅಗ್ನಿಶಾಮಕ ಸಿಬ್ಬಂದಿ ಒಳಗೆ ನುಗ್ಗಿದ್ದು ನೋಡಿ ಆಶ್ಚರ್ಯವಾಯಿತು. ಅವರ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಲೇಬೇಕು~ ಎಂದು ಸ್ಥಳೀಯ ನಿವಾಸಿ ಮಹೇಶ್ ಹೇಳಿದರು.<br /> <br /> ಅಗ್ನಿಶಾಮಕ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, ತಾಂತ್ರಿಕ ನಿರ್ದೇಶಕ ಬಿ.ಕೆ.ಹಂಪಗೋಳ್ ಅವರು ಇತರೆ ಸಿಬ್ಬಂದಿಯಂತೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಿಲಿಂಡರ್ ಸ್ಫೋಟಗೊಂಡು ಕಲ್ಯಾಣ ಮಂಟಪದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಮತ್ತು ಕಟ್ಟಡ ಕುಸಿದ ನಂತರ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಅಕ್ಷರಶಃ ಪ್ರಾಣ ಪಣಕ್ಕಿಟ್ಟು ಹೋರಾಡಿದರು.<br /> <br /> ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಮೂರು ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದರು. ಆ ವೇಳೆಗಾಗಲೇ ಇಡೀ ಕಟ್ಟಡವೇ ಹೊತ್ತಿ ಉರಿಯುತ್ತಿತ್ತು. ಬೆಂಕಿ ಜ್ವಾಲೆಗಳು ವ್ಯಾಪಿಸುತ್ತಿದ್ದವು. ದಟ್ಟ ಹೊಗೆ ಸಹ ಆವರಿಸಿದ್ದರಿಂದ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕಟ್ಟಡದ ಒಳಗೆ ಇನ್ನೂ ಹಲವು ಸಿಲಿಂಡರ್ಗಳಿದ್ದವು.<br /> <br /> ಅಂತಹ ಸಂದರ್ಭದಲ್ಲಿ ಕಟ್ಟಡದೊಳಗೆ ಹೋಗುವುದು ಸಾವಿನ ಮನೆ ಪ್ರವೇಶಿಸಿದಂತೇ ಆಗಿತ್ತು. ಆದರೂ ಎದೆಗುಂದದ ಸುಮಾರು ಹತ್ತು ಮಂದಿ ಸಿಬ್ಬಂದಿ ತಂಡ ಧೈರ್ಯದಿಂದ ಒಳ ನುಗ್ಗಿ ಬೆಂಕಿ ನಂದಿಸಲಾರಂಭಿಸಿತು. ಅದಾಗಲೇ ಬೆಂಕಿಯಿಂದ ಶಿಥಿಲವಾಗಿದ್ದ ಕಟ್ಟಡ ಕುಸಿದು ಸಿಬ್ಬಂದಿ ಮೇಲೆ ಬಿತ್ತು. <br /> <br /> ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಐದು ಮಂದಿ ಗಾಯಾಳುಗಳಲ್ಲಿ ಕೆಲವರ ತಲೆಗೆ, ಎದೆಗೆ, ಕೈಗೆ ಪೆಟ್ಟು ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಗೋವಿಂದಪ್ಪ ಅವರ ಎರಡೂ ಕಾಲುಗಳ ಮೇಲೆ ಕಟ್ಟಡದ ಅವಶೇಷ ಬಿದ್ದ ಪರಿಣಾಮ ಮುಳೆ ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.|<br /> <br /> ಕಲ್ಯಾಣ ಮಂಟಪದ ಕಟ್ಟಡ ಕುಸಿದು ನಾಲ್ಕು ಮನೆಗಳ ಮೇಲೆ ಬಿದ್ದಿದ್ದರಿಂದ ಮನೆಗಳು ನೆಲಸಮವಾದವು. ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂದು ಗೊತ್ತಿರಲಿಲ್ಲ. ಇಬ್ಬರು ಸಿಲುಕಿರಬಹುದು ಎಂಬ ಸಂಶಯದಿಂದಲೇ ಸಿಬ್ಬಂದಿ ಅವಶೇಷಗಳನ್ನು ತೆರವು ಮಾಡಿದರು. ಸತತ ಆರೇಳು ಗಂಟೆ ಬಿಡುವಿಲ್ಲದಂತೆ ಕೆಲಸ ಮಾಡಿದರು.<br /> <br /> `ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಅಗ್ನಿಶಾಮಕ ಸಿಬ್ಬಂದಿ ಒಳಗೆ ನುಗ್ಗಿದ್ದು ನೋಡಿ ಆಶ್ಚರ್ಯವಾಯಿತು. ಅವರ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಲೇಬೇಕು~ ಎಂದು ಸ್ಥಳೀಯ ನಿವಾಸಿ ಮಹೇಶ್ ಹೇಳಿದರು.<br /> <br /> ಅಗ್ನಿಶಾಮಕ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, ತಾಂತ್ರಿಕ ನಿರ್ದೇಶಕ ಬಿ.ಕೆ.ಹಂಪಗೋಳ್ ಅವರು ಇತರೆ ಸಿಬ್ಬಂದಿಯಂತೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>