‘ಪತ್ನಿಯನ್ನು ಕೊಂದ ನಂತರ, ಮಕ್ಕಳನ್ನು ಕೊಂದು ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೆ. ಮಕ್ಕಳು ಓದುತ್ತಿದ್ದ ಶಾಲೆಗೆ ಹೋಗಿ, ‘ಅಮ್ಮ ಕರೆಯುತ್ತಿದ್ದಾರೆ. ಬನ್ನಿ...’ ಎಂದಿದ್ದೆ. ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ತೋಟದ ಮನೆಗೆ ಕರೆದೊಯ್ದಿದ್ದೆ. ಶುಕ್ರವಾರ(ಜೂನ್ 22) ಬೆಳಿಗ್ಗೆ ಮಕ್ಕಳ ಮೇಲೂ ಗುಂಡು ಹಾರಿಸಿದೆ. ‘ಅಪ್ಪ. ನಮಗೆ ಗುಂಡು ಏಕೆ ಹೊಡೆದ್ರಿ’ ಎಂದು ಮಕ್ಕಳು ಅಳಲಾರಂಭಿಸಿದರು. ಅವರ ಸಂಕಟ ನೋಡಿ ನೋವಾಯಿತು. ಅವರನ್ನು ಬದುಕಿಸಿಕೊಳ್ಳಬೇಕೆಂದು ತೀರ್ಮಾನಿಸಿ, ಕಾರಿನಲ್ಲಿ ಹತ್ತಿಸಿಕೊಂಡು ಆಸ್ಪತ್ರೆಯತ್ತ ಹೊರಟಿದ್ದೆ. ಅವಾಗಲೇ ಪೊಲೀಸರು ನನ್ನನ್ನು ಬಂಧಿಸಿದರು’ ಎಂದು ಗಣೇಶ್ ಹೇಳಿರುವುದಾಗಿ ಹಿರಿಯ ಅಧಿಕಾರಿ ವಿವರಿಸಿದರು.