<p><strong>ಬೆಂಗಳೂರು:</strong> ‘ಕುವೆಂಪು ಅವರನ್ನು ಮುಂದಿಟ್ಟುಕೊಂಡು ಸಾಹಿತಿ ದೇ. ಜವರೇಗೌಡ ಅವರು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ಆದರೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಕುವೆಂಪು ಅವರ ಅಪ್ಪಟ ಶಿಷ್ಯರಾಗಿಯೇ ಇದ್ದರು’ ಎಂದು ಸಾಹಿತಿ ಪ್ರೊ. ಎಲ್.ಎನ್.ಮುಕುಂದರಾಜ್ ಹೇಳಿದರು.<br /> <br /> ರಂಗಮಂಡಲ ಸಾಂಸ್ಕೃತಿಕ ಸಂಘ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವು... ಜಿ.ಎಸ್.ಶಿವರುದ್ರಪ್ಪ (ಜಿಎಸ್ಎಸ್) ಅವರ ನೆನಪು, ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲಿಂಗಾಯತರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಒಕ್ಕಲಿಗರ ಪ್ರಾಬಲ್ಯದ ನಡುವೆ ಕನ್ನಡ ಅಧ್ಯಯನ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯಾವುದೇ ಜಾತಿ ಸುಳಿದಿರಲಿಲ್ಲ. ಇದಕ್ಕೆ ಜಿಎಸ್ಎಸ್ ಅವರ ಜಾತ್ಯತೀತ ನಿಲುವು ಕಾರಣವಾಗಿತ್ತು’ ಎಂದರು.<br /> <br /> ‘ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಲ್ಲ ಜಾತಿಗಳಿಗೆ ಸೇರಿದ ಪ್ರಾಧ್ಯಾಪಕರನ್ನು ಜಿಎಸ್ಎಸ್ ನೇಮಿಸಿಕೊಂಡಿದ್ದರು. ಆದರೆ ಇಂದು ಅಲ್ಲಿ ಜಾತಿ ನೋಡಿ ಅಂಕ ನೀಡುವ ಪರಿಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಕವಯತ್ರಿ ಎಚ್.ಎಲ್.ಪುಷ್ಪಾ ಮಾತನಾಡಿ, ‘ನನ್ನ ಗುರುಪರಂಪರೆಯಲ್ಲಿ ಜಿಎಸ್ಎಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಜತೆಗಿನ ಒಡನಾಟ ಸುಂದರ ಸ್ವಪ್ನಗಳು’ ಎಂದು ಹೇಳಿದರು.<br /> <br /> ಜಿಎಸ್ಎಸ್ ಅವರ ಮೊಮ್ಮಗ, ಚಲನಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, ‘ತಾತನಿಂದ ಶಿಸ್ತು, ಪ್ರಾಮಾಣಿಕತೆಯನ್ನು ಕಲಿತಿದ್ದೇನೆ. ಅವರು ಸಿನಿಮಾ, ಸಾಕ್ಷ್ಯಚಿತ್ರ ವೀಕ್ಷಣೆಗೆ ಕರೆದೊಯ್ಯುತ್ತಿದ್ದರು. ಈ ಬಗ್ಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು’ ಎಂದರು.<br /> <br /> ‘ತಾತ ಪ್ರವಾಸವನ್ನು ಇಷ್ಟಪಡುತ್ತಿದ್ದರು. ಅವರೊಂದಿಗೆ ನಾನೂ ಪ್ರವಾಸ ಮಾಡಿದ್ದೇನೆ. ಆ ವೇಳೆ ಸಮಯ ಪಾಲನೆ ಮಾಡುತ್ತಿದ್ದರು. ಅವರು ನಿಧನರಾಗುವ ಕೆಲ ತಿಂಗಳ ಹಿಂದೆ ಶಿವನಸಮುದ್ರ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರಿಂದ ಅಲ್ಲಿಗೆ ಅವರನ್ನು ಕರೆದುಕೊಂಡು ಹೋಗಿದ್ದೆವು’ ಎಂದರು.<br /> <br /> ‘ಪ್ರವಾಸ, ಸಾಹಿತ್ಯದಷ್ಟೇ ಊಟವನ್ನು ತಾತ ಇಷ್ಟಪಡುತ್ತಿದ್ದರು. ಆರೋಗ್ಯಕರ ಪಥ್ಯ ಇರುತ್ತಿದ್ದರು. ಕೊನೆಯ ದಿನಗಳಲ್ಲೂ 2–3 ಒಬ್ಬಟ್ಟು ತಿನ್ನುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕುವೆಂಪು ಅವರನ್ನು ಮುಂದಿಟ್ಟುಕೊಂಡು ಸಾಹಿತಿ ದೇ. ಜವರೇಗೌಡ ಅವರು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ಆದರೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಕುವೆಂಪು ಅವರ ಅಪ್ಪಟ ಶಿಷ್ಯರಾಗಿಯೇ ಇದ್ದರು’ ಎಂದು ಸಾಹಿತಿ ಪ್ರೊ. ಎಲ್.ಎನ್.ಮುಕುಂದರಾಜ್ ಹೇಳಿದರು.<br /> <br /> ರಂಗಮಂಡಲ ಸಾಂಸ್ಕೃತಿಕ ಸಂಘ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವು... ಜಿ.ಎಸ್.ಶಿವರುದ್ರಪ್ಪ (ಜಿಎಸ್ಎಸ್) ಅವರ ನೆನಪು, ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲಿಂಗಾಯತರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಒಕ್ಕಲಿಗರ ಪ್ರಾಬಲ್ಯದ ನಡುವೆ ಕನ್ನಡ ಅಧ್ಯಯನ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯಾವುದೇ ಜಾತಿ ಸುಳಿದಿರಲಿಲ್ಲ. ಇದಕ್ಕೆ ಜಿಎಸ್ಎಸ್ ಅವರ ಜಾತ್ಯತೀತ ನಿಲುವು ಕಾರಣವಾಗಿತ್ತು’ ಎಂದರು.<br /> <br /> ‘ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಲ್ಲ ಜಾತಿಗಳಿಗೆ ಸೇರಿದ ಪ್ರಾಧ್ಯಾಪಕರನ್ನು ಜಿಎಸ್ಎಸ್ ನೇಮಿಸಿಕೊಂಡಿದ್ದರು. ಆದರೆ ಇಂದು ಅಲ್ಲಿ ಜಾತಿ ನೋಡಿ ಅಂಕ ನೀಡುವ ಪರಿಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಕವಯತ್ರಿ ಎಚ್.ಎಲ್.ಪುಷ್ಪಾ ಮಾತನಾಡಿ, ‘ನನ್ನ ಗುರುಪರಂಪರೆಯಲ್ಲಿ ಜಿಎಸ್ಎಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಜತೆಗಿನ ಒಡನಾಟ ಸುಂದರ ಸ್ವಪ್ನಗಳು’ ಎಂದು ಹೇಳಿದರು.<br /> <br /> ಜಿಎಸ್ಎಸ್ ಅವರ ಮೊಮ್ಮಗ, ಚಲನಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, ‘ತಾತನಿಂದ ಶಿಸ್ತು, ಪ್ರಾಮಾಣಿಕತೆಯನ್ನು ಕಲಿತಿದ್ದೇನೆ. ಅವರು ಸಿನಿಮಾ, ಸಾಕ್ಷ್ಯಚಿತ್ರ ವೀಕ್ಷಣೆಗೆ ಕರೆದೊಯ್ಯುತ್ತಿದ್ದರು. ಈ ಬಗ್ಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು’ ಎಂದರು.<br /> <br /> ‘ತಾತ ಪ್ರವಾಸವನ್ನು ಇಷ್ಟಪಡುತ್ತಿದ್ದರು. ಅವರೊಂದಿಗೆ ನಾನೂ ಪ್ರವಾಸ ಮಾಡಿದ್ದೇನೆ. ಆ ವೇಳೆ ಸಮಯ ಪಾಲನೆ ಮಾಡುತ್ತಿದ್ದರು. ಅವರು ನಿಧನರಾಗುವ ಕೆಲ ತಿಂಗಳ ಹಿಂದೆ ಶಿವನಸಮುದ್ರ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರಿಂದ ಅಲ್ಲಿಗೆ ಅವರನ್ನು ಕರೆದುಕೊಂಡು ಹೋಗಿದ್ದೆವು’ ಎಂದರು.<br /> <br /> ‘ಪ್ರವಾಸ, ಸಾಹಿತ್ಯದಷ್ಟೇ ಊಟವನ್ನು ತಾತ ಇಷ್ಟಪಡುತ್ತಿದ್ದರು. ಆರೋಗ್ಯಕರ ಪಥ್ಯ ಇರುತ್ತಿದ್ದರು. ಕೊನೆಯ ದಿನಗಳಲ್ಲೂ 2–3 ಒಬ್ಬಟ್ಟು ತಿನ್ನುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>