<p>ಬೆಂಗಳೂರು: ‘ಪರಿಸರದಲ್ಲಿನ ಸೂಕ್ಷ್ಮತೆಯನ್ನು ಅವಲೋಕಿಸಿ ಅದನ್ನು ಗ್ರಹಿಸಿದಾಗ ಮಾತ್ರ ಕವಿತೆ ಹುಟ್ಟಲು ಸಾಧ್ಯ’ ಎಂದು ಕವಯತ್ರಿ ಮಮತಾ ಜಿ ಸಾಗರ ಹೇಳಿದರು.<br /> <br /> ಪಂಚಮುಖಿ ನಟರ ಸಮೂಹವು ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಆಮೋದ ರಂಗೋತ್ಸವ’ದಲ್ಲಿ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ‘ಕವಿತೆಗಳಿಗೆ ಆರಂಭ ಇರುತ್ತದೆಯೇ ವಿನಾ ಅಂತ್ಯ ಇರುವುದಿಲ್ಲ. ಕವಿತೆಗಳನ್ನು ರಚಿಸುವಾಗ ಅದನ್ನು ನಿರೂಪಿಸುವ ಶೈಲಿ ಉತ್ತಮವಾಗಿದ್ದರೆ ಮಾತ್ರ ಕಾವ್ಯಪ್ರಿಯರಿಗೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ’ ಎಂದರು. ಕವಿಗೋಷ್ಠಿಯಲ್ಲಿ 11 ಯುವಕವಿಗಳು ವಿವಿಧ ಭಾಷೆಯ ಕವಿತೆ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಪರಿಸರದಲ್ಲಿನ ಸೂಕ್ಷ್ಮತೆಯನ್ನು ಅವಲೋಕಿಸಿ ಅದನ್ನು ಗ್ರಹಿಸಿದಾಗ ಮಾತ್ರ ಕವಿತೆ ಹುಟ್ಟಲು ಸಾಧ್ಯ’ ಎಂದು ಕವಯತ್ರಿ ಮಮತಾ ಜಿ ಸಾಗರ ಹೇಳಿದರು.<br /> <br /> ಪಂಚಮುಖಿ ನಟರ ಸಮೂಹವು ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಆಮೋದ ರಂಗೋತ್ಸವ’ದಲ್ಲಿ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.<br /> <br /> ‘ಕವಿತೆಗಳಿಗೆ ಆರಂಭ ಇರುತ್ತದೆಯೇ ವಿನಾ ಅಂತ್ಯ ಇರುವುದಿಲ್ಲ. ಕವಿತೆಗಳನ್ನು ರಚಿಸುವಾಗ ಅದನ್ನು ನಿರೂಪಿಸುವ ಶೈಲಿ ಉತ್ತಮವಾಗಿದ್ದರೆ ಮಾತ್ರ ಕಾವ್ಯಪ್ರಿಯರಿಗೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ’ ಎಂದರು. ಕವಿಗೋಷ್ಠಿಯಲ್ಲಿ 11 ಯುವಕವಿಗಳು ವಿವಿಧ ಭಾಷೆಯ ಕವಿತೆ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>