<p><strong>ಬೆಂಗಳೂರು: </strong>ಸಾವಿನ ಸಖ್ಯ ಬದುಕಿನ ಮೌಲ್ಯವನ್ನು ಪರಿಚಯಿಸುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.<br /> ಭಾನುವಾರ ನಡೆದ ಬಿ.ವಿ.ಭಾರತಿ ಅವರ ‘ಸಾಸಿವೆ ತಂದವಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಸಾವಿನಿಂದ ಬದುಕಿನೆಡೆಗಿನ ಪಯಣವಾಗಿ ಈ ಪುಸ್ತಕ ಮೂಡಿಬಂದಿದೆ. ಸಾವು ಬದುಕುವುದನ್ನು ಕಲಿಸುತ್ತದೆ. ಬದುಕನ್ನು ಅರ್ಥಮಾಡಿಕೊಳ್ಳಲು ಅನಾರೋಗ್ಯ ಅಥವಾ ಸಾವು ಬರಲೇಬೇಕೇನೊ’ ಎಂದು ಅವರು ಸೋಜಿಗಪಟ್ಟರು.<br /> <br /> ಪುಸ್ತಕವನ್ನು ಬಿಡುಗಡೆ ಮಾಡಿದ ಶಂಕರ ಕ್ಯಾನ್ಸರ್ ಫೌಂಡೇಶನ್ನ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ.ಶ್ರೀನಾಥ್, ‘ಇತ್ತೀಚೆಗೆ ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಅದಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಜನರಲ್ಲಿ ಕ್ಯಾನ್ಸರ್ ಬಗ್ಗೆ ಆತಂಕವಿದೆ. ಕ್ಯಾನ್ಸರ್ ಪೀಡಿತರ ಮನೋಸ್ಥೈರ್ಯವೇ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ’ ಎಂದರು.<br /> <br /> ಪುಸ್ತಕದ ಲೇಖಕಿ ಬಿ.ವಿ.ಭಾರತಿ ಅವರು ಮಾತನಾಡಿ ‘ಸಾವಿನ ಬಾಗಿಲಲ್ಲಿ ನಿಂತು ಬದುಕನ್ನು ಪ್ರೀತಿಸುವ ಅನುಭವವನ್ನು ಬರಹವಾಗಿಸಿದ್ದೇನೆ. ಬುದ್ಧನಿಗೆ ಸಾಸಿವೆ ತಂದವಳು ಎಂಬುದು ಉದ್ಧಟ--ತನದ ಮಾತಲ್ಲ. ಒಂದು ದಿನದ ಮಟ್ಟಿಗೆ ಸಾವನ್ನು ಮುಂದೂಡಿದೆ ಎಂಬ ಬದುಕಿನ ಪ್ರೀತಿಯಷ್ಟೆ’ ಎಂದರು.<br /> <br /> ಲೇಖಕಿ ನೇಮಿಚಂದ್ರ ಅವರು ಮಾತನಾಡಿ ‘ಕ್ಯಾನ್ಸರ್ ಪೀಡಿತರಿಗೆ ಮಾನಸಿಕ ಧೈರ್ಯ ತುಂಬುವ ಕೇಂದ್ರಗಳ ಅವಶ್ವಕತೆಯಿದೆ. ಅವರನ್ನು ರೋಗಿಗಳೆಂದು ಕರೆಯದೆ ಕ್ಯಾನ್ಸರ್ ಹೋರಾಟಗಾರರು ಎಂದು ಕರೆಯೋಣ’ ಎಂದರು.<br /> ಅಹರ್ನಿಶಿ ಪ್ರಕಾಶನದ ಅಕ್ಷತಾ ಮತ್ತು ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಾವಿನ ಸಖ್ಯ ಬದುಕಿನ ಮೌಲ್ಯವನ್ನು ಪರಿಚಯಿಸುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.<br /> ಭಾನುವಾರ ನಡೆದ ಬಿ.ವಿ.ಭಾರತಿ ಅವರ ‘ಸಾಸಿವೆ ತಂದವಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಸಾವಿನಿಂದ ಬದುಕಿನೆಡೆಗಿನ ಪಯಣವಾಗಿ ಈ ಪುಸ್ತಕ ಮೂಡಿಬಂದಿದೆ. ಸಾವು ಬದುಕುವುದನ್ನು ಕಲಿಸುತ್ತದೆ. ಬದುಕನ್ನು ಅರ್ಥಮಾಡಿಕೊಳ್ಳಲು ಅನಾರೋಗ್ಯ ಅಥವಾ ಸಾವು ಬರಲೇಬೇಕೇನೊ’ ಎಂದು ಅವರು ಸೋಜಿಗಪಟ್ಟರು.<br /> <br /> ಪುಸ್ತಕವನ್ನು ಬಿಡುಗಡೆ ಮಾಡಿದ ಶಂಕರ ಕ್ಯಾನ್ಸರ್ ಫೌಂಡೇಶನ್ನ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ.ಶ್ರೀನಾಥ್, ‘ಇತ್ತೀಚೆಗೆ ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಅದಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿದ್ದರೂ ಜನರಲ್ಲಿ ಕ್ಯಾನ್ಸರ್ ಬಗ್ಗೆ ಆತಂಕವಿದೆ. ಕ್ಯಾನ್ಸರ್ ಪೀಡಿತರ ಮನೋಸ್ಥೈರ್ಯವೇ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ’ ಎಂದರು.<br /> <br /> ಪುಸ್ತಕದ ಲೇಖಕಿ ಬಿ.ವಿ.ಭಾರತಿ ಅವರು ಮಾತನಾಡಿ ‘ಸಾವಿನ ಬಾಗಿಲಲ್ಲಿ ನಿಂತು ಬದುಕನ್ನು ಪ್ರೀತಿಸುವ ಅನುಭವವನ್ನು ಬರಹವಾಗಿಸಿದ್ದೇನೆ. ಬುದ್ಧನಿಗೆ ಸಾಸಿವೆ ತಂದವಳು ಎಂಬುದು ಉದ್ಧಟ--ತನದ ಮಾತಲ್ಲ. ಒಂದು ದಿನದ ಮಟ್ಟಿಗೆ ಸಾವನ್ನು ಮುಂದೂಡಿದೆ ಎಂಬ ಬದುಕಿನ ಪ್ರೀತಿಯಷ್ಟೆ’ ಎಂದರು.<br /> <br /> ಲೇಖಕಿ ನೇಮಿಚಂದ್ರ ಅವರು ಮಾತನಾಡಿ ‘ಕ್ಯಾನ್ಸರ್ ಪೀಡಿತರಿಗೆ ಮಾನಸಿಕ ಧೈರ್ಯ ತುಂಬುವ ಕೇಂದ್ರಗಳ ಅವಶ್ವಕತೆಯಿದೆ. ಅವರನ್ನು ರೋಗಿಗಳೆಂದು ಕರೆಯದೆ ಕ್ಯಾನ್ಸರ್ ಹೋರಾಟಗಾರರು ಎಂದು ಕರೆಯೋಣ’ ಎಂದರು.<br /> ಅಹರ್ನಿಶಿ ಪ್ರಕಾಶನದ ಅಕ್ಷತಾ ಮತ್ತು ಕಾರ್ಯಕ್ರಮದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>