ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಯಿಖಾನೆಗೆ ಸಾಗಿಸುತ್ತಿದ್ದ 11 ಜಾನುವಾರು ರಕ್ಷಣೆ

Last Updated 10 ಜುಲೈ 2021, 4:05 IST
ಅಕ್ಷರ ಗಾತ್ರ

ಚಿಟಗುಪ್ಪ: ಸಮೀಪದ ಸಿಂಧನಕೇರಾ ಗ್ರಾಮದಿಂದ ಪಟ್ಟಣದ ಕಸಾಯಿಖಾನೆಗೆ ಅನಧಿಕೃತವಾಗಿ ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 11 ಜಾನುವಾರುಗಳನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಪಿಎಸ್‌ಐ ಕಾಶಿನಾಥ್‌ ಹಾಗೂ ಸಿಬ್ಬಂದಿ ಜೊತೆಗೆ ರಾಜ್ಯ ಹೆದ್ದಾರಿ 75 ರ ಮೇಲೆ ಹಜರತ್‌ ದರ್ಗಾ ಎದುರುಗಡೆ ಜಾನುವಾರು ತುಂಬಿಕೊಂಡು
ಬರುತ್ತಿದ್ದ ಎರಡು ಲಾರಿಗಳನ್ನು ತಡೆದು ಒಳಗಿದ್ದ 4 ಎತ್ತು, 7 ಹೋರಿಗಳಿಗೆ ವಶಕ್ಕೆ ಪಡೆದು ಚಾಂಗಲೇರಾ ಗೋಶಾಲೆಗೆ ಕಳಿಸಿದ್ದಾರೆ.

ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೆಯಕ 2020 ಕಾಯ್ದೆ ಅಡಿ ಚಿಟಗುಪ್ಪ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT