ದೇವರ ವಿಗ್ರಹ ಮೆರವಣಿಗೆ ಮೂಲಕ ಅಗ್ನಿಕುಂಡಕ್ಕೆ ತರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಗುರುಲಿಂಗ ಶಿವಾಚಾರ್ಯರು ಚಂದನ ಕಟ್ಟಿಗೆ ಮತ್ತು ತುಪ್ಪದಿಂದ ಅಗ್ನಿ ಹೊತ್ತಿಸಿದರು. ಈ ವೇಳೆ ನೆರೆದಿದ್ದ ಭಕ್ತರು ‘ವೀರಭದ್ರೇಶ್ವರ ಮಹಾರಾಜ ಕೀ ಜೈ’, ‘ಹರಹರ ಮಹಾದೇವ’ ಎಂದು ಘೋಷಣೆ ಕೂಗುತ್ತ ಅಗ್ನಿ ಕುಂಡ ಸುತ್ತು ಹಾಕಿದರು. ಪಕ್ಕದಲ್ಲಿದ್ದ ನಂದಿ ಬಸವಣ್ಣನಿಗೆ ನೈವೇದ್ಯ ಅರ್ಪಿಸಿದರು.