<p><strong>ಬೀದರ್</strong>: ಪೂರ್ವಾರಾಧನೆ ಅಂಗವಾಗಿ ಗುರು ರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಮೆರವಣಿಗೆ ನಗರದಲ್ಲಿ ಮಂಗಳವಾರ ಸಡಗರ, ಸಂಭ್ರಮದಿಂದ ಜರುಗಿತು.</p><p>ಅಲಂಕೃತ ಪಲ್ಲಕ್ಕಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.</p><p>ನಗರದ ಕೆಇಬಿ ರಾಘವೇಂದ್ರ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಶಹಾಗಂಜ್, ಚೌಬಾರ, ನಯಾಕಮಾನ್, ಬಸವೇಶ್ವರ ವೃತ್ತದ ಮೂಲಕ ಹಾದು ಪುನಃ ರಾಘವೇಂದ್ರ ಮಂದಿರದಲ್ಲಿ ಕೊನೆಗೊಂಡಿತು.</p><p>ಆನಂತರ ಮಂದಿರದಲ್ಲಿ ರಥೋತ್ಸವ, ಚಕ್ರಿ ಭಜನೆ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧಾಕರರಾವ್, ಸಂಸ್ಥಾನ ಸಾಧುಘಾಟ್ದ ಪಾಂಡುರಂಗ ಮಹಾರಾಜ, ಪ್ರಭಾಕರರಾವ್, ಕಲ್ಯಾಣರಾವ್, ರಮೇಶ ಜೋಶಿ, ಸುಧಾಕರ್ ರಾವ್ ಮತ್ತಿತರರು ಹಾಜರಿದ್ದರು. </p><p>ಬುಧವಾರ (ಆ.21) ಮಧ್ಯಾರಾಧನೆ, ಗುರುವಾರ (ಆ.22) ಉತ್ತರಾಧನೆ ಅಂಗವಾಗಿ ರಥೋತ್ಸವ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪಾಂಡುರಂಗ ಮಹಾರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಪೂರ್ವಾರಾಧನೆ ಅಂಗವಾಗಿ ಗುರು ರಾಘವೇಂದ್ರ ಸ್ವಾಮಿಗಳ ಪಲ್ಲಕ್ಕಿ ಮೆರವಣಿಗೆ ನಗರದಲ್ಲಿ ಮಂಗಳವಾರ ಸಡಗರ, ಸಂಭ್ರಮದಿಂದ ಜರುಗಿತು.</p><p>ಅಲಂಕೃತ ಪಲ್ಲಕ್ಕಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.</p><p>ನಗರದ ಕೆಇಬಿ ರಾಘವೇಂದ್ರ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಶಹಾಗಂಜ್, ಚೌಬಾರ, ನಯಾಕಮಾನ್, ಬಸವೇಶ್ವರ ವೃತ್ತದ ಮೂಲಕ ಹಾದು ಪುನಃ ರಾಘವೇಂದ್ರ ಮಂದಿರದಲ್ಲಿ ಕೊನೆಗೊಂಡಿತು.</p><p>ಆನಂತರ ಮಂದಿರದಲ್ಲಿ ರಥೋತ್ಸವ, ಚಕ್ರಿ ಭಜನೆ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧಾಕರರಾವ್, ಸಂಸ್ಥಾನ ಸಾಧುಘಾಟ್ದ ಪಾಂಡುರಂಗ ಮಹಾರಾಜ, ಪ್ರಭಾಕರರಾವ್, ಕಲ್ಯಾಣರಾವ್, ರಮೇಶ ಜೋಶಿ, ಸುಧಾಕರ್ ರಾವ್ ಮತ್ತಿತರರು ಹಾಜರಿದ್ದರು. </p><p>ಬುಧವಾರ (ಆ.21) ಮಧ್ಯಾರಾಧನೆ, ಗುರುವಾರ (ಆ.22) ಉತ್ತರಾಧನೆ ಅಂಗವಾಗಿ ರಥೋತ್ಸವ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪಾಂಡುರಂಗ ಮಹಾರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>