ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಜೆಸಿಬಿ ಬಳಸಿ ಬ್ಯಾಂಕ್‌ ಕಳವಿಗೆ ಯತ್ನ

Last Updated 12 ಫೆಬ್ರುವರಿ 2020, 2:52 IST
ಅಕ್ಷರ ಗಾತ್ರ

ಕಮಲನಗರ (ಬೀದರ್‌ ಜಿಲ್ಲೆ): ತಾಲ್ಲೂಕಿನ ಸಂತಪುರ ಗ್ರಾಮದಲ್ಲಿರುವ ಎಸ್‌ಬಿಐ ಶಾಖೆಯಿಂದ ಸೋಮವಾರ ರಾತ್ರಿ ಕಳ್ಳರು ಜೆಸಿಬಿ ಯಂತ್ರ ಬಳಸಿ ಬಂಗಾರ ಹಾಗೂ ಹಣ ಕಳವು ಮಾಡಲು ಯತ್ನಿಸಿದ್ದಾರೆ.

ಕಳ್ಳರು ಜೆಸಿಬಿ ಯಂತ್ರದಿಂದ ಕಿಟಕಿ ಒಡೆದು ಒಳ ನುಗ್ಗಿದ್ದಾರೆ. ತಿಜೋರಿ ಒಡೆಯಲು ಹೋದಾಗ ಬ್ಯಾಂಕ್‍ನ ಆಪತ್ಕಾಲಿನ ಸೈರನ್ ಮೊಳಗಿದ್ದು, ಅದನ್ನು ಕೇಳಿಸಿಕೊಂಡ ಸುತ್ತಮುತ್ತಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂತಪುರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಬರುವುದನ್ನು ಕಂಡು ಕಳ್ಳರು, ಜೆಸಿಬಿ ಯಂತ್ರವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಂಕ್‍ನಲ್ಲಿ ಯಾವುದೇ ವಸ್ತು ಕಳವು ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಭಾಲ್ಕಿ ಡಿವೈಎಸ್‍ಪಿ ಡಾ.ದೇವರಾಜ, ಔರಾದ್ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಕಮಲನಗರ ಸಿಪಿಐ ಪಾಲಕ್ಷಯ್ಯ ಹಿರೇಮಠ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT