`ನಾರಾಯಣಪುರದ ಬೀಜ ವಿತರಣಾ ಕೇಂದ್ರದಲ್ಲಿ ಕೆಲ ದಿನ ಬೀಜ ವಿತರಿಸಲಾಯಿತು. ಆದರೆ, ನಂತರ ಬಸವಕಲ್ಯಾಣದಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬರಲು ಹೇಳಿದ್ದರಿಂದ ಶುಕ್ರವಾರ ಇಲ್ಲಿ ನೂಕು ನುಗ್ಗಲು ಆಯಿತು. 500 ಕ್ಕೂ ಹೆಚ್ಚಿನ ರೈತರು, ಮಹಿಳೆಯರು ಬೆಳಿಗ್ಗೆ 7 ಗಂಟೆಯಿಂದಲೇ ಕೇಂದ್ರದ ಎದುರು ಬಂದು ಕುಳಿತಿದ್ದರು. ಕೇಂದ್ರದ ಬಾಗಿಲು ತೆರೆಯದಿದ್ದರೂ ರೈತರು ಹಾಗೆಯೇ ಕುಳಿತಿದ್ದರು' ಎಂದು ರೈತ ಶಿವರಾಮಪ್ಪ ತಿಳಿಸಿದರು.