ಬೀದರ್: ಬಸವೇಶ್ವರ ನೂತನ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಇಲ್ಲಿಯ ಮೈಲೂರು ಹತ್ತಿರದ ಸಿಎಂಸಿ ಕಾಲೊನಿಯಲ್ಲಿ ನಡೆಯಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಅವರು ಮೂರ್ತಿಗೆ ಪೂಜೆ ಸಲ್ಲಿಸಿದರು. ಶರಣ ಉದ್ಯಾನದ ಶೋಭಾ, ಅಣ್ಣೆಪ್ಪ ಬಿರಾದಾರ, ಶಂಕರೆಪ್ಪ ಯದಲಾಪುರೆ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಪ್ರಮುಖರಾದ ಅರ್ಜುನ ರಾಜೋಳೆ, ಶಂಕರರಾವ್ ಕಪಲಾಪೂರ, ಕಾಶೀನಾಥ ಮೂಲಗೆ, ಬಸವಣ್ಣಪ್ಪ ಬೆಳ್ಳೂರು, ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಧನರಾಜ ಪಾಟೀಲ ಇದ್ದರು.